ಆ್ಯಪ್ನಗರ

ರಾಹುಲ್ ಪ್ರಧಾನಿ ಅಭ್ಯರ್ಥಿ ಘೋಷಣೆ ಇಲ್ಲ

ಮುಂಬರುವ ಲೋಕಸಭೆ ಚುನಾವಣೆ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂತು ಸೆಣಸುವ ಸಮರ್ಥ ಅಭ್ಯರ್ಥಿ ಪ್ರತಿಪಾಳಯದಲ್ಲಿ ಇಲ್ಲ ಎನ್ನುವ ದಟ್ಟ ಅಭಿಪ್ರಾಯದ ನಡುವೆಯೇ, ರಾಹುಲ್‌ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಕಾಂಗ್ರೆಸ್‌ ನಿರಾಕರಿಸಿದೆ.

Vijaya Karnataka 4 Aug 2018, 10:28 am
ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂತು ಸೆಣಸುವ ಸಮರ್ಥ ಅಭ್ಯರ್ಥಿ ಪ್ರತಿಪಾಳಯದಲ್ಲಿ ಇಲ್ಲ ಎನ್ನುವ ದಟ್ಟ ಅಭಿಪ್ರಾಯದ ನಡುವೆಯೇ, ರಾಹುಲ್‌ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಕಾಂಗ್ರೆಸ್‌ ನಿರಾಕರಿಸಿದೆ.
Vijaya Karnataka Web Rahul Gandhi 1


ಏಕಾಂಗಿಯಾಗಿ ಚುನಾವಣೆ ಎದುರಿಸಿ ಗೆಲ್ಲುವ ಕನಸನ್ನು ಎಂದೋ ಕೈಬಿಟ್ಟಿರುವ ಕಾಂಗ್ರೆಸ್‌, ಮಿತ್ರಪಕ್ಷಗಳನ್ನು ಒಗ್ಗೂಡಿಸಿ ಸೆಣಸುವ ಕನಸು ಕಾಣುತ್ತಿದೆ. ಆದರೆ ಆ ಪ್ರಯತ್ನ ಕೂಡ ಇದುವರೆಗೆ ನಿರೀಕ್ಷಿತ ಮಟ್ಟ ಮುಟ್ಟಿಲ್ಲ. ಇದರಿಂದ ಆತಂಕಗೊಂಡಿರುವ ಕಾಂಗ್ರೆಸ್‌, ಪ್ರಧಾನಿ ಪಟ್ಟದ ಗೊಡವೆಯಿಂದ ದೂರ ಉಳಿಯಲು ನಿರ್ಧರಿಸಿದೆ.

ಸದ್ಯದ ಸ್ಥಿತಿಯಲ್ಲಿ ರಾಹುಲ್‌ ಗಾಂಧಿ ನಾಯಕತ್ವವೂ ಪಕ್ಷದೊಳಗೆ ಭರವಸೆ ಮೂಡಿಸುವಲ್ಲಿ ವಿಫಲವಾಗಿದೆ. ಮೋದಿ ಅಲೆಯ ಅಬ್ಬರ ಯಥಾಸ್ಥಿತಿ ಮುಂದುವರಿದಿರುವುದರಿಂದ ಪ್ರತಿಪಾಳಯದಲ್ಲಿ ಅವರಿಗೆ ತಕ್ಕ ಎದುರಾಳಿ ಬೇಕು. ರಾಹುಲ್‌ ಅವರಿಗೆ ಆ ವರ್ಚಸ್ಸು ಇಲ್ಲ ಎನ್ನುವುದು ಖುದ್ದು ಕಾಂಗ್ರೆಸ್‌ ನಾಯಕರೇ ಒಪ್ಪಿರುವ ವಾಸ್ತವ. ಈ ಬಗ್ಗೆ ಕೆಲವು ನಾಯಕರು ಪಕ್ಷದ ಕಾರ್ಯಕಾರಿಣಿ ಸಭೆ (ಸಿಡಬ್ಲ್ಯೂಸಿ)ಯಲ್ಲಿಯೇ ಸ್ಪಷ್ಟ ನಿರಾಕರಣೆ ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘‘ನನಗೆ ಪ್ರಧಾನಿ ಪಟ್ಟದ ಆಸೆ ಇಲ್ಲ. ಮೈತ್ರಿಕೂಟದ ಸಮರ್ಥರೊಬ್ಬರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಲು ನಾನು ಸಿದ್ಧ,’’ ಎಂದು ಖುದ್ದು ರಾಹುಲ್‌ ಅವರೇ ಕೆಲದಿನಗಳ ಹಿಂದೆ ಸ್ಪಷ್ಟಪಡಿಸಿದ್ದಾರೆ.

ಶಿವಸೇನೆ ಜತೆ ಸಖ್ಯ ಇಲ್ಲ

‘ಶತ್ರುವಿನ ಶತ್ರು ಮಿತ್ರ’ ಎನ್ನುವ ರಾಜಕೀಯ ಹಿತನುಡಿ ನೆಚ್ಚಿ ಕಾಂಗ್ರೆಸ್‌, ಬಿಜೆಪಿ ಮಣಿಸಲು ಶಿವಸೇನೆ ಜತೆ ಚುನಾವಣಾ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ಊಹಾಪೋಹಗಳು ಕೇಳಿ ಬಂದಿದ್ದವು. ಆದರೆ, ಆ ಸುದ್ದಿಯನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ತಳ್ಳಿಹಾಕಿದ್ದಾರೆ. ‘‘ಸ್ನೇಹ ಇದ್ದ ಮಾತ್ರಕ್ಕೆ ಮೈತ್ರಿಯಾಗುತ್ತದೆ ಎನ್ನುವುದು ಸುಳ್ಳು. ಶಿವಸೇನೆ ಜತೆ ಅಂತಹ ಯಾವುದೇ ಒಪ್ಪಂದ ಸಾಧ್ಯವಿಲ್ಲ,’’ ಎಂದು ತಿಳಿಸಿದ್ದಾರೆ. ತನ್ಮಧ್ಯೆ, ಆಮ್‌ ಆದ್ಮಿ ಪಕ್ಷದೊಂದಿಗಿನ ಮೈತ್ರಿಯು ಪಕ್ಷದ ದಿಲ್ಲಿ ಘಟಕದ ನಾಯಕರ ಮರ್ಜಿ ಆಧರಿಸಿ ನಿರ್ಧಾರಗೊಳ್ಳಲಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ