ಆ್ಯಪ್ನಗರ

ಪ್ರಧಾನಿಗೆ ಕಾಂಗ್ರೆಸ್‌ 10 ಪ್ರಶ್ನೆಗಳು

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯು ಯೋಧರ ರಕ್ತ ಹಾಗೂ ತ್ಯಾಗವನ್ನು ಮತಗಳಿಕೆಯ ಸಾಧನವಾಗಿ ಬಳಸುತ್ತಿವೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

Vijaya Karnataka 29 Sep 2018, 9:52 am
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯು ಯೋಧರ ರಕ್ತ ಹಾಗೂ ತ್ಯಾಗವನ್ನು ಮತಗಳಿಕೆಯ ಸಾಧನವಾಗಿ ಬಳಸುತ್ತಿವೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇದೆ ವೇಳೆ ಕಳೆದ ನಾಲ್ಕೂವರೆ ವರ್ಷಗಳ ಮೋದಿ ಆಡಳಿತದಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿರುವ ಪಕ್ಷವು, ಈ ಕುರಿತು 10 ಪ್ರಶ್ನೆಗಳಿಗೆ ಉತ್ತರಿಸುವಂತೆ ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿಗೆ ಸವಾಲು ಹಾಕಿದೆ. ಆ ಪ್ರಶ್ನೆಗಳು ಹೀಗಿವೆ:
Vijaya Karnataka Web Rahul Gandhi


1. 'ಸಮಾನ ಶ್ರೇಣಿ, ಸಮಾನ ವೇತನ' ಯೋಜನೆಯನ್ನು ತಿರಸ್ಕರಿಸಿ ಯೋಧರಿಗೆ ಸರಕಾರ ವಂಚನೆ ಮಾಡಿದ್ದು ಏಕೆ?

2. ಪ್ರಧಾನಿ ಅವರು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿದ್ದು ಏಕೆ?

3. ಮೋದಿ ಅವರು ಭಾರತದ ಗಡಿಗಳನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆಯೇ?

4. ಪಠಾಣ್‌ಕೋಟ್‌ ದಾಳಿ ಪ್ರಕರಣದ ತನಿಖೆಗೆ ದುಷ್ಟ 'ಐಎಸ್‌ಐ' ಅನ್ನು ಆಹ್ವಾನಿಸಿದ್ದು ಏಕೆ?

5. ಬಜೆಟ್‌ನಲ್ಲಿ ರಕ್ಷಣಾ ಅನುದಾನವನ್ನು ಕಡಿತಗೊಳಿಸಿದ್ದರ ಹಿಂದಿನ ಉದ್ದೇಶವೇನು?

6. ನಮ್ಮ ಸೇನಾಪಡೆಗಳ 'ಸಮರ ಸನ್ನದ್ಧತೆ'ಯನ್ನು ಕ್ರಮೇಣ ದುರ್ಬಲಗೊಳಿಸುತ್ತಿರುವುದು ಏಕೆ?

7. ಡೋಕ್ಲಾಮ್‌ನಲ್ಲಿ ಚೀನಿ ಸೇನೆಯ ಅಕ್ರಮ ನೆಲೆಸುವಿಕೆ ವಿಚಾರದಲ್ಲಿ ಪ್ರಧಾನಿ 'ಮೌನಿ'ಯಾಗಿದ್ದು ಏಕೆ?

8. ಭಾರತೀಯ ವಾಯುಪಡೆಗೆ ಅಗತ್ಯವಾಗಿರುವ ಯುದ್ಧ ವಿಮಾನಗಳ ಸಂಖ್ಯೆಯನ್ನು ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು 126ರಿಂದ 36ಕ್ಕೆ ಇಳಿಸಿದ್ದು ಏಕೆ?

9. ಚೀನಾವನ್ನು ಎದುರಿಸಲು 64, 678 ಕೋಟಿ ರೂ. ವೆಚ್ಚದಲ್ಲಿ ಕಾಂಗ್ರೆಸ್‌ ರಚಿಸಲು ಮುಂದಾಗಿದ್ದ 'ಮೌಂಟೇನ್‌ ಸ್ಟ್ರೈಕ್‌ ಪಡೆ'ಯ ವಿಚಾರದಲ್ಲಿ ಹಿಂದೇಟು ಹಾಕಿದ್ದೇಕೆ?

10. ನಕ್ಸಲರು ಮತ್ತೆ ತಲೆ ಎತ್ತಿ ನಮ್ಮ ಯೋಧರು, ನಾಗರಿಕರನ್ನು ಹತ್ಯೆಮಾಡಲು ಹಾಗೂ ಆಂತರಿಕ ಭದ್ರತೆಯನ್ನು ಕದಡಲು ಮೋದಿ ಅವಕಾಶ ಮಾಡಿಕೊಟ್ಟಿದ್ದು ಏಕೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ