ಆ್ಯಪ್ನಗರ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುತ್ತಾರಂತೆ ರಾಹುಲ್ ಗಾಂಧಿ!

ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿಯನ್ನು ರಾಮಭಕ್ತನಂತೆ ಮತ್ತು ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಹನುಮಾನ್ ಮತ್ತು ಗೋ ಭಕ್ತರೆಂದು ಹೊಗಳಲಾಗಿದೆ.

TIMESOFINDIA.COM 8 Feb 2019, 5:50 pm
ಭೋಪಾಲ್‌: ರಾಹುಲ್ ಗಾಂಧಿಯವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸುತ್ತಾರೆ- ಹೀಗೆಂದು ಬರೆದಿರುವ ಪೋಸ್ಟರ್‌ಗಳು ಮಧ್ಯ ಪ್ರದೇಶದ ರಾಜಧಾನಿಯಲ್ಲಿ ರಾರಾಜಿಸುತ್ತಿವೆ.
Vijaya Karnataka Web Rahul Gandhi


ರಾಮ ಮಂದಿರ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾಂಗ್ರೆಸ್‌ಗೆ ಸವಾಲೆಸೆದ ಬೆನ್ನಲ್ಲೇ ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.
ಅಲಿಘಡದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಶಾ, ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಧೈರ್ಯವಿದ್ದರೆ ಕಾಂಗ್ರೆಸ್, ಸಮಾಜವಾದಿ ಮತ್ತು ಬಿಎಸ್‌ಪಿಗಳು ತಮ್ಮ ನಿಲುವನ್ನು ಸ್ಪಷ್ಟ ಪಡಿಸಲಿ, ಎಂದು ಸವಾಲೆಸೆದಿದ್ದರು.

ಪೋಸ್ಟರ್‌ನಲ್ಲಿ ರಾಹುಲ್ ಗಾಂಧಿಯನ್ನು ರಾಮಭಕ್ತನಂತೆ ಮತ್ತು ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಹನುಮಾನ್ ಮತ್ತು ಗೋ ಭಕ್ತರೆಂದು ಹೊಗಳಲಾಗಿದೆ.


ಅಷ್ಟೇ ಅಲ್ಲ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭಗವಾನ್ ಶ್ರೀರಾಮನಂತೆ ಹಾಗೂ ಪ್ರಧಾನಿ ಮೋದಿ ಅವರನ್ನು 'ದಶಮುಖ ರಾವಣ'ನಂತೆ ಚಿತ್ರಿಸಿ ರಾವಣನನ್ನು ಶ್ರೀರಾಮ ಹತ್ಯೆ ಮಾಡಲು ಬಾಣ ಪ್ರಯೋಗಿಸುತ್ತಿರವಂತಹ ಭಿತ್ತಿಪತ್ರಗಳನ್ನು ಅಲ್ಲಲ್ಲಿ ಅಂಟಿಸಲಾಗಿದೆ. ಈ ಪೋಸ್ಟರ್‌ನಲ್ಲಿ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಅಮಿತ್ ಶಾ, ಯೋಗಿ ಆದಿತ್ಯನಾಥ್‌, ಹಿಮಂತ ಬಿಸ್ವಾಸ್ ಶರ್ಮಾ, ಪಿಯೂಷ್ ಗೋಯಲ್, ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ರಾವಣನ ಇತರ ತಲೆಗಳಂತೆ ಚಿತ್ರಿಸಲಾಗಿದೆ.

ಪೋಸ್ಟರ್‌ನಲ್ಲಿ ರಫೇಲ್ ಜೆಟ್‌ ಕೂಡ ಚಿತ್ರಿಸಲಾಗಿದ್ದು, ಚೌಕಿದಾರ್‌ ಚೋರ್‌ಹೋ ಮತ್ತು ಚೋರೋಂ ತುಮಾರೀ ಖೇರ್ ನಹೀಂ, ಹಮ್ ರಾಮ್ ಭಕ್ತ್‌ ಹೈ, ಚೋರೋಂ ಕಿ ಅಲಾವಾ ಕಿಸೀ ಸೇ ಬೇರ್ ನಹೀಂ' ('चौकीदार ही चोर है। ಮತ್ತು 'चोरों तुम्हारी खैर नहीं, हम राम भक्त हैं, चोरों के अलावा किसी से बैर नहीं।) ಎಂದು ಘೋಷಣೆಗಳನ್ನು ಬರೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ