ಆ್ಯಪ್ನಗರ

ರಾಹುಲ್ ಫೋಟೋ ತೆಗೆಯಲು ಯತ್ನಿಸಿ ಉರುಳಿ ಬಿದ್ದ ಫೋಟೋಗ್ರಾಫರ್

ರಾಹುಲ್ ಬಳಿ ಭದ್ರತಾ ಪಡೆಯವರಿದ್ದ ಸಂದರ್ಭ, ಅಲ್ಲಿಯೇ ತುಸು ಅಂತರದಲ್ಲಿ ಫೋಟೋಗ್ರಾಫರ್ ರಾಹುಲ್ ಅವರ ಚಿತ್ರ ಸೆರೆಹಿಡಿಯಲು ಮುಂದಾಗಿದ್ದಾನೆ.

Vijaya Karnataka Web 25 Jan 2019, 4:26 pm
ಭುವನೇಶ್ವರ: ಒಡಿಶಾದ ಭುವನೇಶ್ವರಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ತೆರಳಿದ್ದ ಸಂದರ್ಭ ಏರ್‌ಪೋರ್ಟ್‌ನಲ್ಲಿ ಅವರ ಫೋಟೋ ತೆಗೆಯಲು ಯತ್ನಿಸಿದ್ದ ಫೋಟೋಗ್ರಾಫರ್ ಆಯತಪ್ಪಿ ಉರುಳಿಬಿದ್ದಿದ್ದಾನೆ. ತಕ್ಷಣ ರಾಹುಲ್ ಗಾಂಧಿ ಆತನ ಸಹಾಯಕ್ಕೆ ಧಾವಿಸಿದ್ದಾರೆ.
Vijaya Karnataka Web Photographer


ಈ ಕುರಿತ ವಿಡಿಯೋ ಒಂದು ವೈರಲ್ ಆಗಿದ್ದು, ಒಡಿಶಾ ಭೇಟಿಯ ವೇಳೆ ರಾಹುಲ್ ಅವರ ಕಾರ್ಯಕ್ರಮದ ಫೋಟೋ ತೆಗೆಯಲು ಆತ ನಿಯೋಜನೆಗೊಂಡಿದ್ದ ಎಂದು ಹೇಳಲಾಗಿದೆ.

ರಾಹುಲ್ ಬಳಿ ಭದ್ರತಾ ಪಡೆಯವರಿದ್ದ ಸಂದರ್ಭ, ಅಲ್ಲಿಯೇ ತುಸು ಅಂತರದಲ್ಲಿ ಫೋಟೋಗ್ರಾಫರ್ ರಾಹುಲ್ ಅವರ ಚಿತ್ರ ಸೆರೆಹಿಡಿಯಲು ಮುಂದಾಗಿದ್ದಾನೆ. ಆದರೆ ಸೂಕ್ತ ಆ್ಯಂಗಲ್ ಸಿಕ್ಕಿಲ್ಲ ಎಂದು ತುಸು ಹಿಂದೆ ಸರಿದಿದ್ದಾನೆ. ಆದರೆ ಹಿಂಭಾಗದಲ್ಲಿ ಮೆಟ್ಟಿಲುಗಳಿದ್ದು, ಅದನ್ನು ಆತ ಗಮನಿಸಿಲ್ಲ. ಹೀಗಾಗಿ ಆಯತಪ್ಪಿ ಪಲ್ಟಿ ಹೊಡೆದಿದ್ದಾನೆ.

ಕೆಳಕ್ಕೆ ಉರುಳಿದ ತಕ್ಷಣವೇ ರಾಹುಲ್ ಆತನನ್ನು ಮೇಲೆತ್ತಲು ಧಾವಿಸಿದ್ದಾರೆ. ರಾಹುಲ್ ಸಮಯಪ್ರಜ್ಞೆಗೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ