ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಲಾಕ್ಡೌನ್ ಅವಧಿಯಲ್ಲಿ "ಯಾರೂ ಹಸಿವಿನಿಂದ ಬಳಲುತ್ತಿಲ್ಲ" ಎಂಬುದನ್ನು ಖಾತ್ರಿ ಪಡೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಕಡಿಮೆ ದರದಲ್ಲಿ ಧಾನ್ಯಗಳನ್ನು ಜನತೆಗೆ ಒದಗಿಸುವ ಕೇಂದ್ರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದು, ಈ ಯೋಜನೆಯನ್ನು ಸೆಪ್ಟೆಂಬರ್ವರೆಗೆ ವಿಸ್ತರಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷೆ ಒತ್ತಾಯಿಸಿದ್ದಾರೆ.
"ಈ ಪತ್ರದಲ್ಲಿ ಬರದಿರುವ ಅಂಶಗಳು ನಿಮಗೆ ಚೆನ್ನಾಗಿ ಅರ್ಥವಾಗಬಹುದು ಎಂದು ನಾನು ಭಾವಿಸುತ್ತೇನೆ. ಲಾಕ್ಡೌನ್ನಿಂದಾಗಿ ದೇಶಾದ್ಯಂತ ಲಕ್ಷಾಂತರ ದುರ್ಬಲ ಜನರು ದೀರ್ಘಕಾಲದ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಇದು ಪ್ರಸ್ತುತ ಸಾಂಕ್ರಾಮಿಕ ರೋಗದಂತಹ ಸಂದರ್ಭಗಳ ಅಗತ್ಯತೆಗಳಿಗಾಗಿ ಭಾರತದಲ್ಲಿ ಆಹಾರ ಧಾನ್ಯಗಳ ದೊಡ್ಡ ಸಂಗ್ರಹವನ್ನು ಹೊಂದಿದೆ ಎಂಬುದು ದುರಂತ," ಎಂದು ಅವರು ಅಭಿಪ್ರಾಯಪಟ್ಟರು.
ವಿಶೇಷ ಶಿಶುಗಾಗಿ ರಾಜಸ್ತಾನದಿಂದ ಮುಂಬೈಗೆ ಒಂಟೆ ಹಾಲು ತರಿಸಿದ ರೈಲ್ವೆ ಇಲಾಖೆ!
"2020ರ ಏಪ್ರಿಲ್ನಿಂದ ಜೂನ್ವರೆಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ ದಾನ್ಯ ನೀಡುತ್ತಿರುವ ನಿಮ್ಮ ಕ್ರಮವನ್ನು ಸ್ವಾಗತಿಸುತ್ತೇನೆ. ಆದಾಗ್ಯೂ, ಲಾಕ್ಡೌನ್ನ ದುಷ್ಪರಿಣಾಮ ಮತ್ತು ಜನರ ಜೀವನೋಪಾಯದ ಮೇಲೆ ಅದರ ದೀರ್ಘಕಾಲೀನ ಪ್ರಭಾವವನ್ನು ಗಮನಿಸಿದರೆ, ಕೆಲವು ಸಲಹೆಗಳನ್ನು ನೀವು ಪರಿಗಣಿಸುತ್ತೀರಿ ಎಂದು ಭಾವಿಸಿ ಈ ಪತ್ರವನ್ನು ಬರೆದಿದ್ದೇನೆ," ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸೋನಿಯಾ ಗಾಂಧಿಯವರು ಕೊರೊನಾ ವೈರಸ್ ನಿಯಂತ್ರಣ ಮಾಡುವ ಉದ್ದೇಶದಿಂದ ಐದು ಸಲಹೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನೀಡಿದ್ದರು. ಮಾಧ್ಯಮ ಜಾಹೀರಾತು ಬ್ಯಾನ್ ಮಾಡಿ, 'ಸೆಂಟ್ರಲ್ ವಿಸ್ಟಾ' ಯೋಜನೆ ಸದ್ಯಕ್ಕೆ ಬೇಡ, ಶೇ.30 ರಷ್ಟು ಅನುಪಾತ ಕಡಿತಗೊಳಿಸಿ, ವಿದೇಶಿ ಪ್ರಯಾಣಕ್ಕೆ ಬ್ರೇಕ್ ಹಾಕಿ ಹಾಗೂ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹಣ ವರ್ಗಾಹಿಸಿ ಎಂಬಂತೆ ಐದು ಉಪಯುಕ್ತ ಸಲಹೆಗಳನ್ನು ಈ ಹಿಂದೆ ಪತ್ರದ ಮೂಲಕ ನೀಡಿದ್ದರು.
"ಈ ಪತ್ರದಲ್ಲಿ ಬರದಿರುವ ಅಂಶಗಳು ನಿಮಗೆ ಚೆನ್ನಾಗಿ ಅರ್ಥವಾಗಬಹುದು ಎಂದು ನಾನು ಭಾವಿಸುತ್ತೇನೆ. ಲಾಕ್ಡೌನ್ನಿಂದಾಗಿ ದೇಶಾದ್ಯಂತ ಲಕ್ಷಾಂತರ ದುರ್ಬಲ ಜನರು ದೀರ್ಘಕಾಲದ ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಇದು ಪ್ರಸ್ತುತ ಸಾಂಕ್ರಾಮಿಕ ರೋಗದಂತಹ ಸಂದರ್ಭಗಳ ಅಗತ್ಯತೆಗಳಿಗಾಗಿ ಭಾರತದಲ್ಲಿ ಆಹಾರ ಧಾನ್ಯಗಳ ದೊಡ್ಡ ಸಂಗ್ರಹವನ್ನು ಹೊಂದಿದೆ ಎಂಬುದು ದುರಂತ," ಎಂದು ಅವರು ಅಭಿಪ್ರಾಯಪಟ್ಟರು.
ವಿಶೇಷ ಶಿಶುಗಾಗಿ ರಾಜಸ್ತಾನದಿಂದ ಮುಂಬೈಗೆ ಒಂಟೆ ಹಾಲು ತರಿಸಿದ ರೈಲ್ವೆ ಇಲಾಖೆ!
"2020ರ ಏಪ್ರಿಲ್ನಿಂದ ಜೂನ್ವರೆಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ ದಾನ್ಯ ನೀಡುತ್ತಿರುವ ನಿಮ್ಮ ಕ್ರಮವನ್ನು ಸ್ವಾಗತಿಸುತ್ತೇನೆ. ಆದಾಗ್ಯೂ, ಲಾಕ್ಡೌನ್ನ ದುಷ್ಪರಿಣಾಮ ಮತ್ತು ಜನರ ಜೀವನೋಪಾಯದ ಮೇಲೆ ಅದರ ದೀರ್ಘಕಾಲೀನ ಪ್ರಭಾವವನ್ನು ಗಮನಿಸಿದರೆ, ಕೆಲವು ಸಲಹೆಗಳನ್ನು ನೀವು ಪರಿಗಣಿಸುತ್ತೀರಿ ಎಂದು ಭಾವಿಸಿ ಈ ಪತ್ರವನ್ನು ಬರೆದಿದ್ದೇನೆ," ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸೋನಿಯಾ ಗಾಂಧಿಯವರು ಕೊರೊನಾ ವೈರಸ್ ನಿಯಂತ್ರಣ ಮಾಡುವ ಉದ್ದೇಶದಿಂದ ಐದು ಸಲಹೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ನೀಡಿದ್ದರು. ಮಾಧ್ಯಮ ಜಾಹೀರಾತು ಬ್ಯಾನ್ ಮಾಡಿ, 'ಸೆಂಟ್ರಲ್ ವಿಸ್ಟಾ' ಯೋಜನೆ ಸದ್ಯಕ್ಕೆ ಬೇಡ, ಶೇ.30 ರಷ್ಟು ಅನುಪಾತ ಕಡಿತಗೊಳಿಸಿ, ವಿದೇಶಿ ಪ್ರಯಾಣಕ್ಕೆ ಬ್ರೇಕ್ ಹಾಕಿ ಹಾಗೂ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹಣ ವರ್ಗಾಹಿಸಿ ಎಂಬಂತೆ ಐದು ಉಪಯುಕ್ತ ಸಲಹೆಗಳನ್ನು ಈ ಹಿಂದೆ ಪತ್ರದ ಮೂಲಕ ನೀಡಿದ್ದರು.