ಆ್ಯಪ್ನಗರ

ಮಹದಾಯಿ: ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲು ಆಗ್ರಹ

ಕರ್ನಾಟಕದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜತೆ ಇದೀಗ ಮೈತ್ರಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ, 'ಮಹದಾಯಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ನಿಮ್ಮ ನಿಲುವು ಸ್ಪಷ್ಟಪಡಿಸಿ' ಎಂದು ಕಾಂಗ್ರೆಸ್‌ನ ಗೋವಾ ಘಟಕಕ್ಕೆ ಶಿವಸೇನೆ ಶನಿವಾರ ತಾಕೀತು ಮಾಡಿದೆ.

Vijaya Karnataka 20 May 2018, 7:33 am
ಪಣಜಿ: ಕರ್ನಾಟಕದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜತೆ ಇದೀಗ ಮೈತ್ರಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ, 'ಮಹದಾಯಿ ನೀರು ವಿವಾದಕ್ಕೆ ಸಂಬಂಧಪಟ್ಟಂತೆ ನಿಮ್ಮ ನಿಲುವು ಸ್ಪಷ್ಟಪಡಿಸಿ' ಎಂದು ಕಾಂಗ್ರೆಸ್‌ನ ಗೋವಾ ಘಟಕಕ್ಕೆ ಶಿವಸೇನೆ ಶನಿವಾರ ತಾಕೀತು ಮಾಡಿದೆ.
Vijaya Karnataka Web shivsena


ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಗೋವಾ ಹಾಗೂ ಕರ್ನಾಟಕ ನಡುವೆ ಬಹಳ ವರ್ಷಗಳಿಂದ ಸಂಘರ್ಷ ನಡೆಯುತ್ತಿದ್ದು, ಮಹದಾಯಿ ನೀರು ವಿವಾದ ನ್ಯಾಯಾಧಿಕರಣದಿಂದ ವಿಚಾರಣೆ ನಡೆಯುತ್ತಿದೆ.

''ಕರ್ನಾಟಕದಲ್ಲಿ ಪ್ರಸ್ತುತ ಕಾಂಗ್ರೆಸ್‌ (ಮೈತ್ರಿ) ಸರಕಾರವಿದೆ. ಹೀಗಾಗಿ ಗೋವಾ ಕಾಂಗ್ರೆಸ್‌ ಘಟಕ ಮಹದಾಯಿ ವಿಷಯದಲ್ಲಿ ಇದೀಗ ವಿವರಣಾತ್ಮಕ ನಿಲುವು ಪ್ರಕಟಿಸಬೇಕಿದೆ. ಯಾವುದೇ ರಾಜಿಗೆ ನಾವು ಸಿದ್ಧರಿಲ್ಲ,'' ಎಂದು ಸೇನೆಯ ಗೋವಾ ಘಟಕದ ವಕ್ತಾರೆ ರಾಖಿ ಪ್ರಭುದೇಸಾಯಿ ನಾಯ್ಕ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ