ಆ್ಯಪ್ನಗರ

ಕೇಂದ್ರ ಸರಕಾರದ ಆರ್ಥಿಕ ನೀತಿ ವಿರೋಧಿಸಿ ಅ.15ರಿಂದ ದೇಶಾದ್ಯಂತ ಕಾಂಗ್ರೆಸ್‌ ಹೋರಾಟ

ಕೇಂದ್ರ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಅಕ್ಟೋಬರ್‌ 15ರಿಂದ 25ರವರೆಗೆ ದೇಶವ್ಯಾಪಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ.

Vijaya Karnataka 13 Sep 2019, 9:52 am
ಹೊಸದಿಲ್ಲಿ: ಕೇಂದ್ರ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಅಕ್ಟೋಬರ್‌ 15ರಿಂದ 25ರವರೆಗೆ ದೇಶವ್ಯಾಪಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ.
Vijaya Karnataka Web Congress


ಸೋನಿಯಾ ಅಧ್ಯಕ್ಷತೆಯಲ್ಲಿಗುರುವಾರ ನಡೆದ ಪಕ್ಷ ಹಿರಿಯ ನಾಯಕರ ಸಭೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದೆ. ತಪ್ಪು ನೀತಿಗಳ ಪರಿಣಾಮ ದೇಶದ ಅರ್ಥವ್ಯವಸ್ಥೆ ಕುಸಿದಿದ್ದು, ತೀವ್ರ ಆರ್ಥಿಕ ಹಿಂಜರಿಕೆಯಿಂದ ಜನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಸಭೆ ಅಭಿಪ್ರಾಯಪಟ್ಟಿದೆ.

ಅಪಾಯಕಾರಿ ಬೆಳವಣಿಗೆ: ಸಭೆಯಲ್ಲಿಮಾತನಾಡಿದ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಆ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿ ಸರಕಾರ ತನಗೆ ದೊರೆತ ಜನಾದೇಶವನ್ನು ತೀರ ಅಪಾಯಕಾರಿ ರೀತಿಯಲ್ಲಿದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.''ಕಾಂಗ್ರೆಸ್‌ನ ತಾಳ್ಮೆ ಹಾಗೂ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿರುವ ಉದಾರತೆಯನ್ನು ಬಿಜೆಪಿ ಪರೀಕ್ಷೆ ಮಾಡಲು ಹೊರಟಿದೆ. ದಬ್ಬಾಳಿಕೆ ಮೂಲಕ ಎಲ್ಲವನ್ನೂ ಜಯಿಸಬಹುದು ಎನ್ನುವ ತಪ್ಪು ಗ್ರಹಿಕೆ ಅವರಲ್ಲಿದೆ. ಆದರೆ ಅದಕ್ಕೆ ನಾವು ಅವಕಾಶ ನೀಡಬಾರದು. ಪ್ರತಿಭಟನೆ ಮೂಲಕ ಜನಸಾಮಾನ್ಯರನ್ನು ತಲುಪಿ ಆಳುವ ಪಕ್ಷದ ಬಂಡವಾಳ ಬಯಲು ಮಾಡಬೇಕಿದೆ,'' ಎಂದು ಹೇಳಿದರು.

ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ನಡೆದ ಮುಖಂಡರ ಸಭೆಗೆ ಅನೇಕ ಪ್ರಮುಖರು ಗೈರಾಗಿದ್ದರು. ಲೋಕಸಭೆ ಸೋಲಿನ ನಂತರ ತೀವ್ರ ಹತಾಶೆಗೆ ತುತ್ತಾಗಿರುವ ರಾಹುಲ್‌ ಗಾಂಧಿ ಈ ಸಭೆಯಿಂದ ದೂರು ಉಳಿದರು. ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಮತ್ತು ಛತ್ತೀಸ್‌ಗಢ ಸಿಎಂ ಭೂಪೇಶ್‌ ಭಗೇಲ್‌ ಕೂಡ ಸಭೆಗೆ ಗೈರಾಗಿದ್ದರು. ಮಧ್ಯಪ್ರದೇಶದಲ್ಲಿಕಾಂಗ್ರೆಸ್‌ ಆಂತರಿಕ ಬಂಡಾಯ ಬಿರುಸುಕೊಂಡಿರುವುದರಿಂದ ಕಮಲನಾಥ್‌ ಅವರು ಕುರ್ಚಿ ಉಳಿಸಿಕೊಳ್ಳಲು ಹೆಣಗುತ್ತಿದ್ದು, ಅವರ ಗೈರಿಗೆ ಕಾರಣ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ