ಆ್ಯಪ್ನಗರ

ರಫೇಲ್‌ ಡೀಲ್‌: ಸಿಎಜಿ ವಿರುದ್ಧ ಆರೋಪ ಮಾಡಿದ ಕಾಂಗ್ರೆಸ್‌

ಒಪ್ಪಂದದ ಮಾತುಕತೆಯಲ್ಲಿ ಭಾಗಿಯಾಗಿದ್ದ ರಾಜೀವ್‌ ಮೆಹರ್ಷಿ ಈಗ ಸಂಸತ್‌ನಲ್ಲಿ ಹಗರಣಕ್ಕೆ ಸಂಬಂಧಿಸಿದ ವರದಿ ಮಂಡಿಸುವುದು ಸೂಕ್ತವಲ್ಲ. ತಮ್ಮನ್ನು ರಕ್ಷಿಸಿಕೊಂಡು ಸರಕಾರವನ್ನೂ ರಕ್ಷಿಸುವ ಸಾಧ್ಯತೆ ಇದೆ.

Vijaya Karnataka Web 10 Feb 2019, 10:22 pm
ಹೊಸದಿಲ್ಲಿ: ರಫೇಲ್‌ ಒಪ್ಪಂದದ ಕುರಿತು ಕೇಂದ್ರ ಸರಕಾರದ ವಿರುದ್ಧ ದಾಳಿ ತೀವ್ರಗೊಳಿಸಿರುವ ಕಾಂಗ್ರೆಸ್‌, ಮಹಾಲೇಖಪಾಲರು ಮತ್ತು ಲೆಕ್ಕಪರಿಶೋಧಕರು (ಸಿಎಜಿ) ರಫೇಲ್‌ ವರದಿಯಿಂದ ದೂರ ಇರಬೇಕು ಎಂದು ಆಗ್ರಹಿಸಿದೆ.
Vijaya Karnataka Web ರಫೇಲ್‌
ರಫೇಲ್‌


''ಈಗ ಸಿಎಜಿ ಆಗಿರುವ ರಾಜೀವ್‌ ಮೆಹರ್ಷಿ ಅವರು ರಫೇಲ್‌ ಒಪ್ಪಂದಕ್ಕೆ ಅಂಕಿತ ಬೀಳುವ ಸಂದರ್ಭದಲ್ಲಿ ಹಣಕಾಸು ಸಚಿವಾಲಯದ ಕಾರ್ಯದರ್ಶಿಯಾಗಿದ್ದರು. ಹಣಕಾಸು ಸಚಿವಾಲಯವೂ ಈ ಮಾತುಕತೆಯಲ್ಲಿ ಭಾಗಿಯಾಗಿದೆ.

ಹೀಗಾಗಿ ಸ್ವಹಿತಾಸಕ್ತಿ ಸಂಘರ್ಷದ ಆರೋಪಕ್ಕೆ ಸಿಲುಕದೇ ಇರಲು ರಾಜೀವ್‌ ಅವರು ರಫೇಲ್‌ ಒಪ್ಪಂದದ ವರದಿಯಿಂದ ದೂರ ಇರಬೇಕು'' ಎಂದು ಪಕ್ಷದ ಹಿರಿಯ ನಾಯಕ ಕಪಿಲ್‌ ಸಿಬಲ್‌ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

ಒಪ್ಪಂದದ ಮಾತುಕತೆಯಲ್ಲಿ ಭಾಗಿಯಾಗಿದ್ದ ರಾಜೀವ್‌ ಮೆಹರ್ಷಿ ಈಗ ಸಂಸತ್‌ನಲ್ಲಿ ಹಗರಣಕ್ಕೆ ಸಂಬಂಧಿಸಿದ ವರದಿ ಮಂಡಿಸುವುದು ಸೂಕ್ತವಲ್ಲ. ತಮ್ಮನ್ನು ರಕ್ಷಿಸಿಕೊಂಡು ಸರಕಾರವನ್ನೂ ರಕ್ಷಿಸುವ ಸಾಧ್ಯತೆ ಇದೆ. ಇದು ನೈತಿಕತೆಯ ಪ್ರಶ್ನೆಯಾಗಿರುತ್ತದೆ ಎಂದು ಕಾಂಗ್ರೆಸ್‌ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ