ಆ್ಯಪ್ನಗರ

ಬಿಜಾಪುರದಲ್ಲಿ ಶಂಕಿತ ನಕ್ಸಲರಿಂದ 'ಕೈ' ಕಾರ್ಯಕರ್ತನ ಭೀಕರ ಹತ್ಯೆ

ತೋತಾಪರಾ ಪ್ರದೇಶದ ನಿವಾಸಿ ಸಹದೇವ್ ಸಾಮ್ರಾಟ್ (30) ಕೊಲೆಯಾದ ದುರ್ದೈವಿ.

TIMESOFINDIA.COM 26 May 2019, 3:21 pm
ಬಿಜಾಪುರ: ಶಂಕಿತ ನಕ್ಸಲರು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.
Vijaya Karnataka Web naksal


ತೋತಾಪರಾ ಪ್ರದೇಶದ ನಿವಾಸಿ ಸಹದೇವ್ ಸಾಮ್ರಾಟ್ (30) ಕೊಲೆಯಾದ ದುರ್ದೈವಿ. ಭೈರಾಮ್‌ಗಢದ ಪಟ್ಟನದ ಕೋಸ್ತಾಪುರ ಪ್ರದೇಶದಲ್ಲಿ ವಿವಾಹ ಸಮಾರಂಭವೊಂದರಲ್ಲಿ ಭಾಗಿಯಾಗಲು ಬಂದಿದ್ದ ಸಾಮ್ರಾಟ್ ಮೇಲೆ ನಕ್ಸಲರು ದಾಳಿ ನಡೆಸಿದ್ದು, ಹರಿತವಾದ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕೈದು ಜನರಿದ್ದ ನಕ್ಸಲರ ಗುಂಪೊಂದು ಸಾಮ್ರಾಟ್ ಅವರನ್ನು ಹಿಂಬಾಲಿಸುತ್ತಿತ್ತು. ಇದನ್ನು ಗಮನಿಸಿದ ಅವರು ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ, ನಕ್ಸಲರು ಬೆನ್ನಟ್ಟಿ ಬಂದು ಭೀಕರವಾಗಿ ಹತ್ಯೆ ನಡೆಸಿದ್ದಾರೆಂದು ಅವರು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ