ಆ್ಯಪ್ನಗರ

ಎಸ್ಪಿ ಆದ ಪೇದೆ ಪುತ್ರ: ಬಾಸ್ ಆದ ಮಗನಿಗೆ ಅಪ್ಪನ ಸಲ್ಯೂಟ್‌

ಹೌದು, ಯುವ ಐಪಿಎಸ್‌ ಅಧಿಕಾರಿ ಅನೂಪ್‌ ಕುಮಾರ್‌ ಸಿಂಗ್‌ ನಗರದ ಉತ್ತರ ವಿಭಾಗದ ಎಸ್ಪಿ ಆಗಿ ಸೋಮವಾರ ಅಧಿಕಾರ ವಹಿಸಿಕೊಂಡರು.

TIMESOFINDIA.COM 30 Oct 2018, 9:52 am
ಲಖನೌ: ವಿಭೂತಿ ಖಂಡ ಪೊಲೀಸ್‌ ಠಾಣೆಯ ಪೇದೆ ಪಾಲಿಗೆ ಅದು ಅವಿಸ್ಮರಣೀಯ ಗಳಿಗೆ. ಲಖನೌ ಉತ್ತರ ವಿಭಾಗದ ಪೊಲೀಸ್‌ ಸೂಪರಿಂಟೆಂಡೆಂಟ್‌ (ಎಸ್‌ಪಿ) ಆಗಿ ಅಧಿಕಾರ ವಹಿಸಿಕೊಂಡು ಕಚೇರಿಗೆ ಆಗಮಿಸಿದ ಹೆಮ್ಮೆಯ ಮಗನಿಗೆ ಆ ಪೇದೆ ಎದ್ದು ನಿಂತು ಸಲ್ಯೂಟ್‌ ಹೊಡೆದು ಬೀಗಿದರು!
Vijaya Karnataka Web SP- Police


ಹೌದು, ಯುವ ಐಪಿಎಸ್‌ ಅಧಿಕಾರಿ ಅನೂಪ್‌ ಕುಮಾರ್‌ ಸಿಂಗ್‌ ನಗರದ ಉತ್ತರ ವಿಭಾಗದ ಎಸ್ಪಿ ಆಗಿ ಸೋಮವಾರ ಅಧಿಕಾರ ವಹಿಸಿಕೊಂಡರು. ಅವರು ಕರ್ತವ್ಯಕ್ಕೆ ನಿಯೋಜನೆಗೊಂಡ ವಿಭಾಗದ ವಿಭೂತಿ ಖಂಡ ಠಾಣೆಯಲ್ಲಯೇ ಅವರ ತಂದೆ ಜನಾರ್ದನ್‌ ಪೊಲೀಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಸಭೆ ನಡೆಸುವ ಮೊದಲು, ಅನೂಪ್‌ ತಂದೆಯ ಪಾದಕ್ಕೆ ನಮಸ್ಕರಿಸಿದರು.

ಬಳಿಕ ಕಚೇರಿಯೊಳಕ್ಕೆ ನಡೆದು ಬಂದ ಎಸ್ಪಿ ಸಾಹೇಬನಿಗೆ ಗೇಟಿನಲ್ಲಿ ನಿಂತ ಪೇದೆ ಅಪ್ಪ ಹೆಮ್ಮೆಯ ಸಲ್ಯೂಟ್‌ ಮಾಡಿ ಭಾವುಕ ಸನ್ನಿವೇಶ ಸೃಷ್ಟಿಸಿದರು. ‘‘ತಂದೆಯಾಗಿ ನನಗೆ ಇದೊಂದು ಅವಿಸ್ಮರಣೀಯ ಘಳಿಗೆ. ಮಗನಿಂದ ಈ ಸಮಾಜಕ್ಕೆ ಒಳಿತಿನ ಕೆಲಸಗಳಾಗುವ ಭರವಸೆ ನನಗಿದೆ,’’ ಎಂದು ಜನಾರ್ದನ್‌ ನಂತರ ಹೇಳಿದರು.

ಬಡತನದಲ್ಲಿ ಬೆಳೆದು ಕಷ್ಟಪಟ್ಟು ಪೇದೆಯಾಗಿದ್ದ ಜನಾರ್ದನ ಸಿಂಗ್ ಅವರಿಗೆ ತಮ್ಮ ಮಗನೂ ಪೊಲೀಸ್ ಆಗಬೇಕೆಂಬ ಕನಸಿತ್ತು. ಅದೃಷ್ಟವಶಾತ್ ಅನೂಪ್ ಕನಸು ಸಹ ಅದೇ ಆಗಿತ್ತು. ಆ ಕನಸಿಗೆ ಚಿಕ್ಕಂದಿನಿಂದಲೇ ನೀರೆರೆದ ಜನಾರ್ದನ ಸಿಂಗ್ ಅವರ ಶ್ರಮ ಕೊನೆಗೂ ಫಲ ಕೊಟ್ಟಿದ್ದು ಮಗ ಅವರ ಮೇಲಾಧಿಕಾರಿಯಾಗಿ ನೇಮಕಗೊಂಡಿದ್ದಾನೆ.

ಅನೂಪ್ ವಿವಾಹಿತರಾಗಿದ್ದು, ಅವರಿಗೆ ಒಂದು ವರ್ಷದ ಮುದ್ದಾದ ಹೆಣ್ಣುಮಗುವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ