ಆ್ಯಪ್ನಗರ

ಮಲೇಷ್ಯಾ ಪೌರತ್ವಕ್ಕೆ ಅರ್ಜಿ ಹಾಕಿದ ವಿವಾದಿತ ಇಸ್ಲಾಮಿಕ್ ಬೋಧಕ ಝಾಕೀರ್ ನಾಯಕ್‌

ಭಯೋತ್ಪಾದನೆ ಆರೋಪಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಬೇಕಾಗಿರುವ ವಿವಾದಾತ್ಮಕ ಇಸ್ಲಾಮಿಕ್‌ ಬೋಧಕ ಝಾಕೀರ್ ನಾಯಕ್ ಮಲೇಷ್ಯಾದ ಪೌರತ್ವಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 30 May 2017, 8:56 pm
ಹೊಸದಿಲ್ಲಿ: ಭಯೋತ್ಪಾದನೆ ಆರೋಪಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಬೇಕಾಗಿರುವ ವಿವಾದಾತ್ಮಕ ಇಸ್ಲಾಮಿಕ್‌ ಬೋಧಕ ಝಾಕೀರ್ ನಾಯಕ್ ಮಲೇಷ್ಯಾದ ಪೌರತ್ವಕ್ಕೆ ಅರ್ಜಿ ಹಾಕಿಕೊಂಡಿದ್ದಾರೆ.
Vijaya Karnataka Web controversial islamic preacher zakir naik seeking citizenship in malaysia
ಮಲೇಷ್ಯಾ ಪೌರತ್ವಕ್ಕೆ ಅರ್ಜಿ ಹಾಕಿದ ವಿವಾದಿತ ಇಸ್ಲಾಮಿಕ್ ಬೋಧಕ ಝಾಕೀರ್ ನಾಯಕ್‌


ಝಾಕೀರ್‌ ಬಂಧನಕ್ಕೆ ಎನ್‌ಐಎ ಇಂಟರ್‌ಪೋಲ್‌ ನೆರವು ಕೋರಿದ ಬಳಿಕ ಈತ ಪದೇ ಪದೇ ತನ್ನ ನೆಲೆ ಬದಲಿಸಿಕೊಳ್ಳುತ್ತಿದ್ದಾರೆ. ಇಂಟರ್‌ಪೋಲ್‌ ಈತನ ಬಂಧನಕ್ಕೆ ರೆಡ್‌ ಕಾರ್ನರ್‌ ನೋಟೀಸ್‌ ಜಾರಿ ಮಾಡಿದೆ.

ಝಾಕೀರ್‌ ನಾಯಕ್‌ ಮಲೇಷ್ಯಾದಲ್ಲಿ ಕಾಯಂ ವಾಸ್ತವ್ಯ ಹೊಂದಿದ್ದಾರೆ ಎನ್ನಲಾಗಿದ್ದು, ಈಗ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಮಲೇಷ್ಯಾ ಸರಕಾರ ಇದುವರೆಗೆ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಝಾಕೀರ್ ನಾಯಕ್‌ಗೆ ಯಾವುದೇ ದೇಶದಲ್ಲೂ ಪೌರತ್ವ ಸಿಗದಂತೆ ಮಾಡಲು ಭಾರತ ಸರಕಾರ ತನ್ನ ಎಲ್ಲಾ ರಾಜತಾಂತ್ರಿಕ ಪ್ರಭಾವಗಳನ್ನು ಬಳಸಿಕೊಳ್ಳುತ್ತಿದೆ.

ಝಾಕೀರ್ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಮತ್ತು ಅಕ್ರಮ ಹಣ ವರ್ಗಾವಣೆ ನಡೆಸುತ್ತಿರುವ ಆರೋಪಗಳಿವೆ. ತನ್ನ ವಿರುದ್ಧ ತನಿಖೆ ಆರಂಭವಾದ ಬಳಿಕ ಈತ ಭಾರತ ಬಿಟ್ಟು ಪಲಾಯನ ಮಾಡಿದ್ದಾರೆ.

ಪ್ರಸ್ತುತ ಎಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದಿಲ್ಲ. ಆದರೆ ಯುಎಇ, ಸೌದಿ ಅರೇಬಿಯಾ, ಆಫ್ರಿಕಾ ದೇಶಗಳು ಮತ್ತು ಆಗ್ನೇಯ ಏಷ್ಯಾ ದೇಶಗಳ ನಡುವೆ ನಿರಂತರ ಓಡಾಡುತ್ತ ನೆಲೆ ಬದಲಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಈತ ಹಲವಾರು ವರ್ಷಗಳಿಂದ ಭಯೋತ್ಪಾದನೆಗೆ ಪ್ರಚೋದನೆ ನೀಡುವಂತಹ ಉದ್ರೇಕಕಾರಿ ಭಾಷಣಗಳನ್ನು ಮಾಡುತ್ತ, ಉಗ್ರರಿಗೆ ಹಣಕಾಸು ನೆರವು ನೀಡುತ್ತ, ಕೋಟ್ಯಂತರ ರೂಗಳ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ.

ಇಸ್ಲಾಮಿಕ್ ರೀಸರ್ಚ್‌ ಫೌಂಡೇಶನ್ ಹೆಸರಿನ ಈತನ ಎನ್‌ಜಿಓ ಮತ್ತು ಪೀಸ್ ಟಿವಿ ವಿರುದ್ಧ ಎನ್‌ಐಎ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದು ಇಂಟರ್‌ಪೋಲ್‌ಗೆ ಒದಗಿಸಿದೆ.

Controversial Islamic preacher Zakir Naik seeking citizenship in Malaysia

NEW DELHI: Controversial Islamic preacher Zakir Naik, wanted by the National Investigation Agency (NIA) on terror charges, has applied for Malaysian citizenship, according to agency sources.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ