ಆ್ಯಪ್ನಗರ

ಕೋರ್ಟ್‌ ಒಳಗೆ ತಂಬಾಕು ಜಗಿದಿದ್ದಕ್ಕೆ ಪೊಲೀಸ್‌ಗೆ ಉಗಿದ ಜಡ್ಜ್‌

ಕೋರ್ಟ್‌ ಹಾಲ್‌ನಲ್ಲಿ ಪೊಲೀಸ್‌ ಮುಖ್ಯ ಪೇದೆ ತಂಬಾಕುಯುಕ್ತ ಪಾನ್‌ ಜಗಿದುದಕ್ಕೆ ನ್ಯಾಯಾಧೀಶರು ಕೋರ್ಟ್‌ನ ಗೋಡೆ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ್ದಾರೆ.

Maharashtra Times 13 Jul 2018, 5:10 pm
ಅಹಮದ್‌ನಗರ: ಕೋರ್ಟ್‌ ಹಾಲ್‌ನಲ್ಲಿ ಪೊಲೀಸ್‌ ಮುಖ್ಯ ಪೇದೆ ತಂಬಾಕುಯುಕ್ತ ಪಾನ್‌ ಜಗಿದುದಕ್ಕೆ ನ್ಯಾಯಾಧೀಶರು ಕೋರ್ಟ್‌ನ ಗೋಡೆ ಸ್ವಚ್ಛಗೊಳಿಸುವ ಶಿಕ್ಷೆ ನೀಡಿದ್ದಾರೆ.
Vijaya Karnataka Web court


ಆರೋಪಿಯೋರ್ವನನ್ನು ಕೋರ್ಟ್‌ಗೆ ಹಾಜರುಪಡಿಸುವ ವೇಳೆ ಪೊಲೀಸ್‌ ಮುಖ್ಯೇದೆ ಬಾಬನ್‌ ಸಾಲ್ವ್‌ ತಂಬಾಕು ಜಗಿಯುತ್ತಿದ್ದ. ಇದನ್ನು ಗಮನಿಸಿದ ನ್ಯಾಯಮೂರ್ತಿ ಎ.ಎಸ್‌. ನವಂದರ್‌, ಬಾಯಲ್ಲಿರುವುದೇನು ಎಂದು ಪ್ರಶ್ನಿಸಿದ್ದಾರೆ.

ಇದು ತಂಬಾಕು ಅಲ್ಲ, ಸುಪಾರಿ ಎಂದು ನ್ಯಾಯಾಧೀಶರ ಎದುರು ಸುಳ್ಳು ಹೇಳಿದ್ದಾರೆ. ಅನುಮಾನಗೊಂಡ ನ್ಯಾಯಾಧೀಶರು, ಬಾಬನ್‌ ಹತ್ತಿರವಿದ್ದ ಸಹ ಉದ್ಯೋಗಿಗಳ ಬಳಿಕ ಪರಿಶೀಲಿಸುವಂತೆ ತಿಳಿಸಿದ್ದಾರೆ. ಈ ವೇಳೆ ಬಾಬನ್‌ ಜಗಿಯುತ್ತಿರುವುದು ತಂಬಾಕು ಎಂದು ಖಚಿತವಾಗಿದೆ.

ಬಾಬನ್ ಅನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶ ಎ.ಎಸ್‌. ನವಂದರ್‌, ಕೋರ್ಟ್‌ ಆವರಣದಲ್ಲಿ ತಂಬಾಕು ಜಗಿಯುವುದು ತಪ್ಪು. ಶಿಕ್ಷೆಯಾಗಿ ನ್ಯಾಯಾಲದ ಗೋಡೆ ಸ್ವಚ್ಛಗೊಳಿಸುವಂತೆ ಆದೇಶಿಸಿದ್ದಾರೆ. ಅಷ್ಟು ಮಾತ್ರ ಅಲ್ಲ, ಕೋರ್ಟ್‌ ಹಾಲ್‌ನಲ್ಲಿ ತಂಬಾಕು ತಿಂದು ಉಗುಳಿದ ಕಲೆಗಳಿವೆಯೇ? ಬೇರೆ ಯಾರಾದರೂ ತಂಬಾಕು ಜಗಿಯುತ್ತಿರುವರೇ ಪರಿಶೀಲಿಸಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ