ಆ್ಯಪ್ನಗರ

ಕತ್ತು ಸೀಳಿ, ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಪೊಲೀಸ್ ಪೇದೆ

ಬೆಳಗಿನ ಉಪಹಾರಕ್ಕೆ ಬಾ ಎಂದು ಆತನ ಸಹೋದ್ಯೋಗಿಗಳು ಫೋನ್ ಕರೆ ಮಾಡಿದಾಗ ಆತ ಸ್ವೀಕರಿಸಿಲ್ಲ. ಏನಾಯ್ತು ಎಂದು ಆತ ವಾಸವಾಗಿದ್ದ ಕೋಣೆಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

TIMESOFINDIA.COM 3 Feb 2019, 3:32 pm
ತಿರುಚಿ: ಪೊಲೀಸ್ ಪೇದೆಯೊಬ್ಬ ಕತ್ತು ಸೀಳಿಕೊಂಡು, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಶನಿವಾರ ನಡೆದಿದೆ.
Vijaya Karnataka Web Suicide Hang


ಅರಿಯಲೂರ್ ಜಿಲ್ಲೆಯ ರಂಗನ ಪೇಟೆ ಮೂಲದ 26 ವರ್ಷದ ಜಿ ಮುತ್ತು ಮೃತ ಪೇದೆ.

ಬೆಳಗಿನ ಉಪಹಾರಕ್ಕೆ ಬಾ ಎಂದು ಆತನ ಸಹೋದ್ಯೋಗಿಗಳು ಫೋನ್ ಕರೆ ಮಾಡಿದಾಗ ಆತ ಸ್ವೀಕರಿಸಿಲ್ಲ. ಏನಾಯ್ತು ಎಂದು ಆತ ವಾಸವಾಗಿದ್ದ ಕೋಣೆಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.

ಬಹುಶಃ ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರಬೇಕು. ಆದರೂ ಜೀವ ಹೋಗದಿದ್ದಾಗ ನೇಣು ಹಾಕಿಕೊಂಡಿದ್ದಾನೆ. ಈ ದುಡುಕಿನ ನಿರ್ಧಾರಕ್ಕೆ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಕೋಣೆಯಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಆದರೆ ಅದರಲ್ಲಿ ಏನನ್ನು ಬರೆಯಲಾಗಿದೆ ಎಂದು ಪೊಲೀಸರು ಬಹಿರಂಗ ಪಡಿಸಿಲ್ಲ.

ಮುತ್ತು ಅವಿವಾಹಿತನಾಗಿದ್ದು 2016ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ