ಆ್ಯಪ್ನಗರ

ತೆಂಗಿನ ಮರ ಏರಿದ ಹುಡುಗನಿಗೆ ಪೊಲೀಸರ ಚಿತ್ರಹಿಂಸೆ

ಪಶ್ಚಿಮ ಬಂಗಾಳದ ಸುರಿಯಲ್ಲಿರುವ ಪೊಲೀಸ್‌ ಅಧಿಕಾರಿಯ ಮನೆ ಕಾಂಪೌಂಡ್‌ ಒಳಗಿರುವ ತೆಂಗಿನ ಮರ ಏರಿದ 12 ವರ್ಷದ ಬುಡಕಟ್ಟು ಬಾಲಕ ಪೊಲೀಸರಿಂದ ಚಿತ್ರಹಿಂಸೆ ಅನುಭವಿಸಿ ಆಸ್ಪತ್ರೆ ಸೇರಿದ್ದಾನೆ.

ಟೈಮ್ಸ್ ಆಫ್ ಇಂಡಿಯಾ 23 Jul 2016, 12:59 pm
ಸುರಿ: ಪಶ್ಚಿಮ ಬಂಗಾಳದ ಸುರಿಯಲ್ಲಿರುವ ಪೊಲೀಸ್‌ ಅಧಿಕಾರಿಯ ಮನೆ ಕಾಂಪೌಂಡ್‌ ಒಳಗಿರುವ ತೆಂಗಿನ ಮರ ಏರಿದ 12 ವರ್ಷದ ಬುಡಕಟ್ಟು ಬಾಲಕ ಪೊಲೀಸರಿಂದ ಚಿತ್ರಹಿಂಸೆ ಅನುಭವಿಸಿ ಆಸ್ಪತ್ರೆ ಸೇರಿದ್ದಾನೆ.
Vijaya Karnataka Web cop thrashes boy for climbing coconut tree
ತೆಂಗಿನ ಮರ ಏರಿದ ಹುಡುಗನಿಗೆ ಪೊಲೀಸರ ಚಿತ್ರಹಿಂಸೆ


ಗೊತ್ತಿಲ್ಲದೇ ಪೊಲೀಸ್‌ ಅಧಿಕಾರಿ ಮನೆಯ ಕಾಂಪೌಂಡ್‌ ಪ್ರವೇಶಿಸಿದ್ದ 4ನೇ ತರಗತಿ ಬಾಲಕನನ್ನು ಮೊದಲು ಅಧಿಕಾರಿಯ ಮನೆಯೊಳಗೆ ಕೂಡಿ ಹಾಕಲಾಗಿತ್ತು. ನಂತರ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿತ್ತು.

'ಗೆಳೆಯರ ಜತೆ ಶಾಲೆಯಿಂದ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಆಟವಾಡುತ್ತಾ ಕಾಪೌಂಡ್‌ ಏರಿ, ತೆಂಗಿನ ಮರ ಹತ್ತಿದ್ದ. ನಂತರ ಅವನ ಸುಳಿವು ಇರಲಿಲ್ಲ. ರಾತ್ರಿ ಊಟಕ್ಕೂ ಇರಲಿಲ್ಲ. ಇದರಿಂದ ಆತಂಕಗೊಂಡಿದ್ದೆವು,'ಎಂದು ಸರಕಾರಿ ವಸತಿ ಗೃಹದ ಮುಖ್ಯಸ್ಥರು ಹೇಳಿದ್ದಾರೆ.

ಹುಡುಗನನ್ನು ಕಾಣಲು ಹಾಸ್ಟೆಲ್‌ ಸೂಪರಿಂಟೆಂಡೆಂಟ್‌ ಪೊಲೀಸ್‌ ಠಾಣೆಗೆ ತೆರಳಿದಾಗ, ವಿವಸ್ತ್ರನಾಗಿದ್ದ ಬಾಲಕ ನರಳಾಡುತ್ತಿದ್ದ. ಬಾಲಕನ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿತ್ತು. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪಶ್ಚಿಮ ಬಂಗಾಳದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿ ಪಂಜಾ ಈ ಬಗ್ಗೆ ವರದಿ ಕೋರಿದ್ದಾರೆ. ಈ ಮಧ್ಯೆ, ಬೀರ್‌ಭೂಮ್‌ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ