ಆ್ಯಪ್ನಗರ

ಕಳ್ಳರ ಜತೆ ಕೈ ಜೋಡಿಸಿ ವಜ್ರ ಕದ್ದ ಪೊಲೀಸರು ಅಂದರ್

ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಳ್ಳ ಖದೀಮರ ಜತೆ ಸೇರಿ 25 ಲಕ್ಷ ರೂಪಾಯಿ ಲಪಟಾಯಿಸಲು ಸಂಚು ರೂಪಿಸಿದ್ದ ಇಬ್ಬರು ಪೊಲೀಸ್ ಪೇದೆಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸ್ಥಳೀಯ ಶಸ್ತ್ರಾಸ್ತ್ರ ವಿಭಾಗದ ಪೊಲೀಸ್ ಪೇದೆ ಸಂತೋಷ್ ಗವಾಸ್ ಹಾಗೂ ಚಂದ್ರಕಾಂತ್ ಘೇರಾವ್ ಎಂದು ಗುರುತಿಸಲಾಗಿದೆ.

Mumbai Mirror 4 Aug 2017, 3:45 pm
ಪುಣೆ: ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆ. ಕಳ್ಳ ಖದೀಮರ ಜತೆ ಸೇರಿ 25 ಲಕ್ಷ ರೂಪಾಯಿ ಲಪಟಾಯಿಸಲು ಸಂಚು ರೂಪಿಸಿದ್ದ ಇಬ್ಬರು ಪೊಲೀಸ್ ಪೇದೆಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸ್ಥಳೀಯ ಶಸ್ತ್ರಾಸ್ತ್ರ ವಿಭಾಗದ ಪೊಲೀಸ್ ಪೇದೆ ಸಂತೋಷ್ ಗವಾಸ್ ಹಾಗೂ ಚಂದ್ರಕಾಂತ್ ಘೇರಾವ್ ಎಂದು ಗುರುತಿಸಲಾಗಿದೆ.
Vijaya Karnataka Web cops conspire with thief to steal diamonds
ಕಳ್ಳರ ಜತೆ ಕೈ ಜೋಡಿಸಿ ವಜ್ರ ಕದ್ದ ಪೊಲೀಸರು ಅಂದರ್


ಕಳ್ಳತನಕ್ಕೆ ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಕುಖ್ಯಾತ ಕ್ರಿಮಿನಲ್ ಮನಿಶ್ ಷಾ ತಲೆ ಮರೆಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಹಾಗೂ ಆಕೆಯ ಕಾರು ಚಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಏನಿದು ಸಂಚು.....

ಬೊರಿವಿಲಿ ಮೂಲದ ವಜ್ರದ ವ್ಯಾಪಾರಿಯ ತಲೆಗೆ ಟೋಪಿ ಹಾಕಲು ಷಾ ಸಂಚು ರೂಪಿಸಿದ್ದ. ಅಲ್ಲದೆ ಇದಕ್ಕೆ ಇಬ್ಬರು ಪೊಲೀಸರನ್ನು ಸಹ ಬಳಸಿಕೊಂಡಿದ್ದ. ಮನೀಶ್ ಷಾ ಖರೀದಿದಾರನಾಗಿ ವಜ್ರದ ವ್ಯಾಪಾರಿ ಬಳಿ ತೆರಳಿದ ಬಳಿ ಪೊಲೀಸರು ದಾಳಿ ನಡೆಸಿ, ಪುರಾವೆಗಾಗಿ ವಜ್ರವನ್ನು ವಶ ಪಡಿಸಿಕೊಳ್ಳುವ ಯೋಜನೆ ಇದಾಗಿತ್ತು.

ಬುಧವಾರ, ಷಾ ವಜ್ರದ ವ್ಯಾಪಾರಿ ಜಯೇಶ್ ಜವೇರಿಯನ್ನು ಭೇಟಿ ಮಾಡಿದ್ದು, 25 ಲಕ್ಷ ರೂಪಾಯಿ ಮೌಲ್ಯದ ವಜ್ರವನ್ನು ಕೇಳಿದ್ದರು. ಈ ಸಮಯದಲ್ಲಿ ಸಮವಸ್ತ್ರದಲ್ಲಿದ್ದ ಇಬ್ಬರು ಪೊಲೀಸರು ದಾಳಿ ನಡೆಸಿದ್ದರು. ಕ್ರಾಫೋರ್ಡ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್‌ನನ್ನು ಬಂಧಿಸಲು ಬಂದಿದ್ದೇವೆ. ಪುರಾವೆಗಾಗಿ ವಜ್ರವನ್ನು ವಶಪಡಿಸಿಕೊಳ್ಳುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದರು. ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ತಾನು ಕೂಡಾ ನಿಮ್ಮ ಜತೆಯೇ ಬರುವುದಾಗಿ ಜವೇರಿ ಪಟ್ಟು ಹಿಡಿದಿದ್ದರು. ಆದರೆ, ಪೊಲೀಸರು ಪ್ರಕರಣದ ಬಳಿಕ ಪೊಲೀಸ್ ಠಾಣೆಗೆ ಬಂದು ವಜ್ರ ಪಡೆಯುವಂತೆ ಸೂಚನೆ ನೀಡಿದ್ದರು.

'ಪೊಲೀಸರ ಸೂಚನೆಗೆ ನಾನು ಬಗ್ಗಲಿಲ್ಲ. ಹೀಗಾಗಿ ನನ್ನನ್ನು ಸಹ ಕರೆದುಕೊಂಡು ಹೋದರು. ನಗರದ ರೈಲ್ವೆ ನಿಲ್ದಾಣದ ಬಳಿ ಕಾರು ನಿಲ್ಲಿಸಿ, ಘಟನೆಯ ಕುರಿತು ಬಾಯ್ಬಿಟ್ಟರೆ ನಿನ್ನನ್ನು ಸಹ ಬಂಧಿಸುವುದಾಗಿ ಪೊಲೀಸರು ಧಮ್ಕಿ ಹಾಕಿದರು' ಎಂದು ಜಯೇಶ್ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ