ಆ್ಯಪ್ನಗರ

ಬಾಳೆಹಣ್ಣಿಗಾಗಿ ಬಡಿದಾಡಿ ಆಸ್ಪತ್ರೆ ಸೇರಿದ ಪೊಲೀಸರು!

ತಿರುಚ್ಚಿಯಲ್ಲಿ ಬಾಳೆಹಣ್ಣಿಗಾಗಿ ಪರಸ್ಪರ ಜಗಳವಾಡಿಕೊಂಡು ಪೊಲೀಸರಿಬ್ಬರು ಆಸ್ಪತ್ರೆ ಸೇರಿದ್ದಾರೆ.

ಏಜೆನ್ಸೀಸ್ 11 Mar 2016, 8:34 pm
ತಿರುಚಿ: ಪೊಲೀಸರೇ ನಡುರಸ್ತೆಯಲ್ಲಿ ರೌಡಿಗಳಂತೆ ಹೊಡೆದಾಡಿಕೊಂಡು ಆಸ್ಪತ್ರೆ ಸೇರಿದ ಘಟನೆ ಇದು. ಅದೂ ಈ ಬಲಾಬಲ ಪ್ರದರ್ಶನ ನಡೆದದ್ದು ಕೇವಲ ಒಂದು ಬಾಳೆಹಣ್ಣಿಗಾಗಿ ಎಂಬುದು ಆಶ್ಚರ್ಯವಾದರೂ ನಿಜ.
Vijaya Karnataka Web cops hospitalised after fight over banana
ಬಾಳೆಹಣ್ಣಿಗಾಗಿ ಬಡಿದಾಡಿ ಆಸ್ಪತ್ರೆ ಸೇರಿದ ಪೊಲೀಸರು!


ಇಲ್ಲಿನ ಶ್ರೀರಂಗಮ್ ಮತ್ತು ತಿರುವನೈಕಾವಲ್ ರಸ್ತೆಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವಿಶೇಷ ಉಪ ತಪಾಸಣಾಧಿಕಾರಿ ರಾಧ ಹಾಗೂ ಚಾಲಕ ಶರವಣನ್ ಬಾಳೆ ಹಣ್ಣಿಗಾಗಿ ಬಡಿದಾಡಿಕೊಂಡಿದ್ದಾರೆ. ಗಲಾಟೆ ಮಿತಿ ಮೀರುತ್ತಿದ್ದುದನ್ನು ಗಮನಿಸಿದ ಇತರ ಪೊಲೀಸರು ಇಬ್ಬರ ಜಗಳವನ್ನೂ ಬಿಡಿಸಿ, ವಿಪರೀತ ಗಾಯಗೊಂಡಿದ್ದ ಅವರನ್ನು ಇಲ್ಲಿನ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಬೆಳಿಗ್ಗೆ ತಿನ್ನಲೆಂದು ಶರವಣನ್ ಬಾಳೆಹಣ್ಣನ್ನು ಇಟ್ಟಿದ್ದರು. ಅದು ಕಾಣದಾದಾಗ ರಾಧ ಅವರನ್ನು ಪ್ರಶ್ನಿಸಿದ್ದಾರೆ. ‘ಹಸಿವು ತಾಳಲಾರದೇ ನಾನದನ್ನು ತಿಂದೆ’ ಎಂದು ರಾಧ ಹೇಳುತ್ತಲೇ ಶರವಣನ್ ಜಗಳಕ್ಕಿಳಿದರು. ಇದು ವಿಪರೀತಕ್ಕೆ ಹೊಡೆದಾಟದ ಮಟ್ಟಕ್ಕೆ ಹೋಯಿತು. ಪರಸ್ಪರ ನೆತ್ತರು ಬರುವಷ್ಟು ಹೊಡೆದಾಡಿದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಪ್ರಕರಣ ಕುರಿತು ವಿಚಾರಣೆ ನಡೆಸುತ್ತಿರುವುದಾಗಿ ಹಿರಿಯ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ