ಆ್ಯಸಿಡ್ ಸಂತ್ರಸ್ತೆಯೊಂದಿಗೆ ಸೆಲ್ಫೀ ತೆಗೆದುಕೊಂಡ ಮಹಿಳಾ PC
ಸೆಲ್ಫೀ ವ್ಯಾಮೋಹವೋ, ಅಮಾನವೀಯತೆಯೋ ಗೊತ್ತಿಲ್ಲ, ಆಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಆ್ಯಸಿಡ್ ದಾಳಿಗೊಳಗಾದ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಮಹಿಳಾ ಪೊಲೀಸರು ಸೆಲ್ಫೀ ತೆಗೆದುಕೊಂಡಿದ್ದಾರೆ.
ಏಜೆನ್ಸೀಸ್ 25 Mar 2017, 5:32 pm
ಲಖನೌ: ಸೆಲ್ಫೀ ವ್ಯಾಮೋಹವೋ, ಅಮಾನವೀಯತೆಯೋ ಗೊತ್ತಿಲ್ಲ, ಆಸ್ಪತ್ರೆಯಲ್ಲಿ ಸಾಮೂಹಿಕ ಅತ್ಯಾಚಾರ ಹಾಗೂ ಆ್ಯಸಿಡ್ ದಾಳಿಗೊಳಗಾದ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಮಹಿಳಾ ಪೊಲೀಸರು ಸೆಲ್ಫೀ ತೆಗೆದುಕೊಂಡಿದ್ದಾರೆ.
ಕಾಫಿ ಶಾಪ್ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ 45 ವರ್ಷದ ಮಹಿಳೆ ಮೇಲೆ 2009ರಲ್ಲಿ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ, ಆ್ಯಸಿಡ್ ಎರೆಚಿದ್ದರು. ಆದರೂ ಈಕೆಯನ್ನು ಬಿಡದ ಆ ದುಷ್ಟರು 2013ರಲ್ಲಿ ಮತ್ತೊಮ್ಮೆ ಆ್ಯಸಿಡ್ ಎರೆಚಿದ್ದಾರೆ. ಇದೇ ಸಂತ್ರಸ್ತೆ ಮೇಲೆ ಇದೀಗ ಮತ್ತೊಮ್ಮೆ ಕ್ರೌರ್ಯ ತೋರಲಾಗಿದೆ.
ಕಳೆದ ಗುರುವಾರ ಮಹಿಳೆ ಗಂಗಾ-ಗೋಮತಿ ಎಕ್ಸ್ಪ್ರೆಸ್ನಲ್ಲಿ ಲಖನೌಗೆ ಮರಳುತ್ತಿದ್ದಾಗ ಕೆಲವು ಯುವಕರು ಆಕೆಗೆ ಮಗದೊಮ್ಮೆ ಆ್ಯಸಿಡ್ ಕುಡಿಸಿದ್ದಾರೆ. ಈ ಘಟನೆ ನಡೆಯುವಾಗ ಉಳಿದ ಪ್ರಯಾಣಿಕರು ಮೂಖ ಪ್ರೇಕ್ಷಕರಂತಿದ್ದರು. ಈ ಸಂಬಂಧವಾಗಿ ಲಖನೌ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿತ್ತು.
ಗಾಯಗೊಂಡ ಸಂತ್ರಸ್ತೆಯನ್ನು ಕಿಂಗ್ ಜಾರ್ಜ್ ವೈದ್ಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಗೆ ನಿಯೋಜಿತರಾಗಿದ್ದ ಮೂವರು ಮಹಿಳಾ ಪೊಲೀಸ್ ಪೇದೆಗಳು ಸಂತ್ರಸ್ತೆ ಹಾಸಿಗೆ ಮೇಲೆ ಮಲಗಿದಾಗ ಸೆಲ್ಫೀ ತೆಗೆದುಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃತ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಕೆಂಗಣ್ಣಿಗೂ ಗುರಿಯಾಗಿದ್ದು, ಈ ಮೂವರನ್ನು ಅಮಾತುಗೊಳಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ರೀಟಾ ಬಹುಗುಣ ಜೋಶಿ ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ.
ಕಾಫಿ ಶಾಪ್ವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ 45 ವರ್ಷದ ಮಹಿಳೆ ಮೇಲೆ 2009ರಲ್ಲಿ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ, ಆ್ಯಸಿಡ್ ಎರೆಚಿದ್ದರು. ಆದರೂ ಈಕೆಯನ್ನು ಬಿಡದ ಆ ದುಷ್ಟರು 2013ರಲ್ಲಿ ಮತ್ತೊಮ್ಮೆ ಆ್ಯಸಿಡ್ ಎರೆಚಿದ್ದಾರೆ. ಇದೇ ಸಂತ್ರಸ್ತೆ ಮೇಲೆ ಇದೀಗ ಮತ್ತೊಮ್ಮೆ ಕ್ರೌರ್ಯ ತೋರಲಾಗಿದೆ.
ಕಳೆದ ಗುರುವಾರ ಮಹಿಳೆ ಗಂಗಾ-ಗೋಮತಿ ಎಕ್ಸ್ಪ್ರೆಸ್ನಲ್ಲಿ ಲಖನೌಗೆ ಮರಳುತ್ತಿದ್ದಾಗ ಕೆಲವು ಯುವಕರು ಆಕೆಗೆ ಮಗದೊಮ್ಮೆ ಆ್ಯಸಿಡ್ ಕುಡಿಸಿದ್ದಾರೆ. ಈ ಘಟನೆ ನಡೆಯುವಾಗ ಉಳಿದ ಪ್ರಯಾಣಿಕರು ಮೂಖ ಪ್ರೇಕ್ಷಕರಂತಿದ್ದರು. ಈ ಸಂಬಂಧವಾಗಿ ಲಖನೌ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿತ್ತು.
ಗಾಯಗೊಂಡ ಸಂತ್ರಸ್ತೆಯನ್ನು ಕಿಂಗ್ ಜಾರ್ಜ್ ವೈದ್ಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಗೆ ನಿಯೋಜಿತರಾಗಿದ್ದ ಮೂವರು ಮಹಿಳಾ ಪೊಲೀಸ್ ಪೇದೆಗಳು ಸಂತ್ರಸ್ತೆ ಹಾಸಿಗೆ ಮೇಲೆ ಮಲಗಿದಾಗ ಸೆಲ್ಫೀ ತೆಗೆದುಕೊಂಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೃತ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಕೆಂಗಣ್ಣಿಗೂ ಗುರಿಯಾಗಿದ್ದು, ಈ ಮೂವರನ್ನು ಅಮಾತುಗೊಳಿಸಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ರೀಟಾ ಬಹುಗುಣ ಜೋಶಿ ಆಸ್ಪತ್ರೆಗೆ ಭೇಟಿ ನೀಡಿ, ಸಂತ್ರಸ್ತೆ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ.