ಆ್ಯಪ್ನಗರ

ಕೊರೊನಾ: ಮನೇಸರ್‌ ಶಿಬಿರದಲ್ಲಿ ಸೋಂಕು ಇಲ್ಲದವರ ಬಿಡುಗಡೆ

ಚೀನಾದ ವುಹಾನ್ ನಗರದಿಂದ ಸ್ಥಳಾಂತರಿಸಿ, ಹೊಸದಿಲ್ಲಿರುವ ಚಾವ್ಲಾ ಕೇಂದ್ರದ ಐಟಿಬಿಪಿ ಶಿಬಿರದಲ್ಲಿರಿಸಿದ್ದ 406 ಜನರ ಪೈಕಿ, 302 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ. ಬುಧವಾರ ಇನ್ನಷ್ಟು ಮಂದಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

Vijaya Karnataka Web 18 Feb 2020, 9:19 pm
ಹೊಸದಿಲ್ಲಿ: ಚೀನಾ ದೇಶದಿಂದ ಹಿಂದಿರುಗಿದ ನಂತರ ಕೊರೊನಾ ವೈರಾಣು ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಮನೆಸರ್ ಸೇನಾ ಶಿಬಿರದಲ್ಲಿ ಇರಿಸಲಾಗಿದ್ದವರನ್ನು, ಅವರಲ್ಲಿ ಸೋಂಕು ಪತ್ತೆಯಾಗಿಲ್ಲದ ಕಾರಣಕ್ಕೆ ಅವರನ್ನು ಬಿಡುಗಡೆ ಮನೆಗಳಿಗೆ ಕಳುಹಿಸಲಾಗಿದೆ.
Vijaya Karnataka Web ಕೊರೊನಾ
ಕೊರೊನಾ


ಮಂಗಳವಾರ 284 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ. ಚೀನಾದ ವುಹಾನ್ ನಗರದಿಂದ ಅವರನ್ನು ವಿಶೇಷ ವಿಮಾನದಲ್ಲಿ ಕರೆತಂದು. ಈ ಶಿಬಿರದಲ್ಲಿ ಇರಿಸಲಾಗಿತ್ತು.

ಚೀನಾದ ವುಹಾನ್ ನಗರದಿಂದ ಸ್ಥಳಾಂತರಿಸಿ, ಹೊಸದಿಲ್ಲಿರುವ ಚಾವ್ಲಾ ಕೇಂದ್ರದ ಐಟಿಬಿಪಿ ಶಿಬಿರದಲ್ಲಿರಿಸಿದ್ದ 406 ಜನರ ಪೈಕಿ, 302 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ.

ಉಳಿದವರನ್ನು ಬುಧವಾರ ಕಳುಹಿಸುವ ಸಾಧ್ಯತೆ ಇದೆ.
ಅವರಲ್ಲಿ ಮಾರಣಾಂತಿಕ ಕೊರೊನಾ ವೈರಾಣು ಸೋಂಕು ಪತ್ತೆಯಾಗಿಲ್ಲ. ಕಳೆದ ರಾತ್ರಿ 7 ಮಂದಿ ಮಾಲ್ಡೀವ್ಸ್ ನಿವಾಸಿಗಳು ಶಿಬಿರದಿಂದ ಬಿಡುಗಡೆಗೊಂಡಿದ್ದಾರೆ.

ಬಿಡುಗಡೆಗೊಂಡಿರುವ ಜನರಿಗೆ ಅವರ ವಾಸಸ್ಥಳಗಳಲ್ಲಿ, ಮುಂದಿನ 14 ದಿನಗಳ ಕಾಲ ಪ್ರತ್ಯೇಕವಾಗಿ ವಾಸಿಸುವಂತೆ ಸೂಚನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ