ಆ್ಯಪ್ನಗರ

ಪ್ರಕೃತಿ ಕುರಿತ ಮಾನವನ ದೃಷ್ಟಿ ಬದಲಿಸಿದ ಕೊರೊನಾ: ಪ್ರಧಾನಿ ಮೋದಿ!

ಕೃತಿಯನ್ನು ನೋಡುವ ಮಾನವನ ದೃಷ್ಟಿಯನ್ನು ಕೊರೊನಾ ವೈರಸ್ ಹಾವಳಿ ಬದಲಾಯಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.

Vijaya Karnataka Web 29 Nov 2020, 1:55 pm
ಹೊಸದಿಲ್ಲಿ: ಪ್ರಕೃತಿಯನ್ನು ನೋಡುವ ಮಾನವನ ದೃಷ್ಟಿಯನ್ನು ಕೊರೊನಾ ವೈರಸ್ ಹಾವಳಿ ಬದಲಾಯಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ಹಾವಳಿಯಿಂದಾಗಿ ಮಾನವನಲ್ಲಿ ಪ್ರಕೃತಿ ಕಾಪಾಡುವ ಜವಾಬ್ದಾರಿಯ ಉದ್ದೀಪನವಾಗಿದೆ ಎಂದು ಹೇಳಿದರು.

11 ಗಂಟೆಗೆ ಪ್ರಧಾನಿ 'ಮನ್ ಕಿ ಬಾತ್': ಕೊರೊನಾ ಲಸಿಕೆ ಕೇಂದ್ರಗಳಿಗೆ ಭೇಟಿಯ ಪ್ರಸ್ತಾಪ?

ಪ್ರಧಾನಿ ಮೋದಿ ಭಾಷಣದ ಅಂಶಗಳು:
* ಕೊರೊನಾ ಕಾಲದಲ್ಲಿ ಪ್ರಕೃತಿಯ ಮಹತ್ವದ ಅರಿವು ಮೂಡಿದೆ ಎಂದ ಪ್ರಧಾನಿ.
* ಪುರಾತನ ಅನ್ನಪೂರ್ಣ ದೇವಿ ಪ್ರತಿಮೆಯನ್ನು ಕೆನಡಾದಿಂದ ಭಾರತಕ್ಕೆ ಮರಳಿ ತರಲಾಗಿದೆ.
* ಅನ್ನಪೂರ್ಣ ದೇವಿ ಪ್ರತಿಮೆ ಭಾರತಕ್ಕೆ ಮರಳಿರುವುದು ಪ್ರತಿಯೊಬ್ಬ ಭಾರತೀಯ ಹೆಮ್ಮೆಪಡುವಂತಾಗಿದೆ.
* ಭಾರತದ ಸಂಸ್ಕೃತಿ ಮತ್ತು ಧರ್ಮಗ್ರಂಥವು ಯಾವಾಗಲೂ ಇಡೀ ಜಗತ್ತನ್ನು ಆಕರ್ಷಿಸಿದೆ ಎಂದ ಪ್ರಧಾನಿ.
* ಹಲವು ವಿದೇಶಿಯರು ಭಾರತಕ್ಕೆ ಬಂದು ಜ್ಞಾನ ಸಂಪಾದಿಸಿ ಅದನ್ನು ಜಗತ್ತಿಗೆ ಹರಡಿಸಿದ್ದಾರೆ.
*ಭಾರತದ ತಂತ್ರಜ್ಞಾನ ಜ್ಞಾನವನ್ನೂ ಇದೀಗ ಜಗತ್ತಿಗೆ ಪಸರಿಸುವ ಸಮಯ ಬಂದಿದೆ ಎಂದ ಮೋದಿ.
*ಲೋಕಲ್ ಫಾರ್ ವೋಕಲ್ ಯೋಜನೆಯನ್ನು ಮತ್ತೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ.
* ಕೇಂದ್ರದ ಕೃಷಿ ಕಾನೂನುಗಳು ರೈತಪರ ಎಂದು ಸಮರ್ಥಿಸಿದ ಪ್ರಧಾನಿ ಮೋದಿ.
* ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಬೇಜವಾಬ್ದಾರಿಗೆ ಸ್ಥಾನವಿಲ್ಲ ಎಂದ ಪ್ರಧಾನಿ.

ಕೊರೊನಾ ವಿರುದ್ಧ ಹೋರಾಟ: ಲಸಿಕಾ ಅಭಿವೃದ್ಧಿ ಕೇಂದ್ರಕ್ಕೆ ಪ್ರಧಾನಿ ಭೇಟಿ, ಝೈಡಸ್‌ನಲ್ಲಿ ವಿಜ್ಞಾನಿಗಳ ಜತೆ ಮೋದಿ ಚರ್ಚೆ


ಹೀಗೆ ಪ್ರಧಾನಿ ಮೋದಿ ಇಂದಿನ(ನ.29-ಭಾನವಾರ) ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಲವು ವಿಷಯಗಳತ್ತ ಬೆಳಕು ಚೆಲ್ಲಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ