ಆ್ಯಪ್ನಗರ

ಕೊರೊನಾ ಸೋಂಕು ಹೆಚ್ಚಿದರೂ 4ನೇ ಅಲೆಯ ಆತಂಕ ಇಲ್ಲ..! ತಜ್ಞರ ಅಭಯ

ಸದ್ಯ ಏರಿಕೆ ಆಗುತ್ತಿರುವ ಕೋವಿಡ್‌ ಹೊಸ ಕೇಸ್‌ಗಳನ್ನು ಗಮನಿಸಿದರೆ ಇದು ಮಹಾ ಸ್ಫೋಟವಲ್ಲ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಷ್ಟೇ ಸೋಂಕು ಹೆಚ್ಚಳವಾಗುತ್ತಿದೆಯೇ ವಿನಃ ದಿನ ನಿತ್ಯವೂ ಎಲ್ಲ ರಾಜ್ಯಗಳಿಂದಲೂ ಭಾರಿ ಸಂಖ್ಯೆಯಲ್ಲಿ ವರದಿಯಾಗುತ್ತಿಲ್ಲ. ತ್ವರಿತ ಪ್ರಸರಣದ ಗುಣ ಹೊಂದಿರುವ ಒಮಿಕ್ರಾನ್‌ ರೂಪಾಂತರಿಯ ಬಿಎ.4 ಹಾಗೂ ಬಿಎ.5 ಉಪ ತಳಿ ವೈರಾಣುಗಳಿಂದ ಪ್ರಕರಣಗಳ ಸಂಖ್ಯೆ ತುಸು ಜಾಸ್ತಿ ಎಂಬಂತೆ ಕಾಣಿಸುತ್ತಿದೆ. ​​ಕೊರೊನಾ ಹೊಸ ವೈರಾಣುಗಳು ಪತ್ತೆಯಾಗಿಲ್ಲ. ಈ ಸ್ಥಿತಿಯನ್ನು ನಾಲ್ಕನೇ ಅಲೆಯ ಮುನ್ಸೂಚನೆ ಎಂದು ಭಾವಿಸಬೇಕಿಲ್ಲ.

Edited byದಿಲೀಪ್ ಡಿ. ಆರ್. | Vijaya Karnataka 13 Jun 2022, 12:20 pm

ಹೈಲೈಟ್ಸ್‌:

  • ಮೂರು ಕೊರೊನಾ ಅಲೆಗಳಿಂದ ಭಾರತೀಯರಲ್ಲಿ ಸೋಂಕು ನಿರೋಧಕ ಶಕ್ತಿ ಸಹಜವಾಗಿಯೇ ಹೆಚ್ಚಿದೆ
  • ಹೈಬ್ರಿಡ್‌ ಇಮ್ಯೂನಿಟಿಯು ಭಾರತೀಯರನ್ನು ರಕ್ಷಿಸುತ್ತಿದೆ
  • ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಆಸ್ಪತ್ರೆ ಸೇರುತ್ತಿರುವ ಹಾಗೂ ಮೃತಪಡುವವರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Covid
ಹೊಸ ದಿಲ್ಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆಯಾದರೂ ಇದು ನಾಲ್ಕನೇ ಅಲೆಯ ಮುನ್ಸೂಚನೆ ಅಲ್ಲ. ಕೆಲವು ಪ್ರದೇಶಗಳಿಗಷ್ಟೇ ಸೋಂಕಿನ ಏರಿಕೆ ಸೀಮಿತವಾಗಿದೆ. ಓಮಿಕ್ರಾನ್‌ ಉಪ ತಳಿ ಬಿಟ್ಟು ಬೇರೆ ಯಾವ ಕೊರೊನಾ ಹೊಸ ಉಪ ತಳಿ ವೈರಾಣುಗಳು ಭಾರತದಲ್ಲಿ ಕಾಣಿಸಿಕೊಳ್ಳದಿರುವ ಹಿನ್ನೆಲೆಯಲ್ಲಿ ಆತಂಕ ಬೇಕಿಲ್ಲ ಎಂದು ತಜ್ಞರು ಅಭಯ ನೀಡಿದ್ದಾರೆ.
ಮಾಸ್ಕ್‌ ಧರಿಸುವ ಬಗ್ಗೆ ನಿರ್ಲಕ್ಷ್ಯ, ಅತಿಯಾದ ಪ್ರವಾಸ, ಸಾಮಾಜಿಕ ಅಂತರ ಪಾಲನೆ ಬಗ್ಗೆ ಕಡೆಗಣನೆ ಹಾಗೂ ಬೂಸ್ಟರ್‌ ಡೋಸ್‌ ಲಸಿಕೆ ಪಡೆಯದಿರುವುದೇ ಸೋಂಕಿನ ಏರಿಕೆಗೆ ಕಾರಣವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕೋವಿಡ್ 19 ಸಮಸ್ಯೆ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
'ಸದ್ಯ ಏರಿಕೆ ಆಗುತ್ತಿರುವ ಕೋವಿಡ್‌ ಹೊಸ ಕೇಸ್‌ಗಳನ್ನು ಗಮನಿಸಿದರೆ ಇದು ಮಹಾ ಸ್ಫೋಟವಲ್ಲ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಷ್ಟೇ ಸೋಂಕು ಹೆಚ್ಚಳವಾಗುತ್ತಿದೆಯೇ ವಿನಃ ದಿನ ನಿತ್ಯವೂ ಎಲ್ಲ ರಾಜ್ಯಗಳಿಂದಲೂ ಭಾರಿ ಸಂಖ್ಯೆಯಲ್ಲಿ ವರದಿಯಾಗುತ್ತಿಲ್ಲ. ತ್ವರಿತ ಪ್ರಸರಣದ ಗುಣ ಹೊಂದಿರುವ ಒಮಿಕ್ರಾನ್‌ ರೂಪಾಂತರಿಯ ಬಿಎ.4 ಹಾಗೂ ಬಿಎ.5 ಉಪ ತಳಿ ವೈರಾಣುಗಳಿಂದ ಪ್ರಕರಣಗಳ ಸಂಖ್ಯೆ ತುಸು ಜಾಸ್ತಿ ಎಂಬಂತೆ ಕಾಣಿಸುತ್ತಿದೆ. ಕೊರೊನಾ ಹೊಸ ವೈರಾಣುಗಳು ಪತ್ತೆಯಾಗಿಲ್ಲ. ಈ ಸ್ಥಿತಿಯನ್ನು ನಾಲ್ಕನೇ ಅಲೆಯ ಮುನ್ಸೂಚನೆ ಎಂದು ಭಾವಿಸಬೇಕಿಲ್ಲ' ಎಂದು ವೈರಾಣು ತಜ್ಞ ಟಿ. ಜಾಕೋಬ್‌ ಜಾನ್‌ ಹೇಳಿದ್ದಾರೆ.

ಇದೇ ವೇಳೆ ಅವರು ಕೊರೊನಾ ಮಾರ್ಗಸೂಚಿಗಳನ್ನು ಕಡೆಗಣಿಸಿದಲ್ಲಿ ದೇಶಾದ್ಯಂತ ವ್ಯಾಪಿಸಿ ಮತ್ತೆ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಎಚ್ಚರಿಸಿದ್ದಾರೆ. 'ಮೂರು ಕೊರೊನಾ ಅಲೆಗಳಿಂದ ಭಾರತೀಯರಲ್ಲಿ ಸೋಂಕು ನಿರೋಧಕ ಶಕ್ತಿ ಸಹಜವಾಗಿಯೇ ಹೆಚ್ಚಿದೆ. ಲಸಿಕೆಯೂ ಇಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಹೈಬ್ರಿಡ್‌ ಇಮ್ಯೂನಿಟಿಯು ಭಾರತೀಯರನ್ನು ರಕ್ಷಿಸುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಆಸ್ಪತ್ರೆ ಸೇರುತ್ತಿರುವ ಹಾಗೂ ಮೃತಪಡುವವರ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ ಎಂಬುದೇ ಇದಕ್ಕೆ ಸಾಕ್ಷಿಯಾಗಿದೆ' ಎಂದು ಡಾ. ಚಂದ್ರಕಾಂತ್‌ ಲಹಾರಿಯಾ ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವು ತಜ್ಞರು ಇದೇ ರೀತಿಯ ನಿಲುವು ತಾಳಿದ್ದರೂ ಕೊರೊನಾ ನಿಯಮಗಳ ಪಾಲನೆ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ ಎಂದಿದ್ದಾರೆ.

ಚೀನಾದಲ್ಲಿ 'ಸ್ಫೋಟಕ' ಕೋವಿಡ್ ಸಾಂಕ್ರಾಮಿಕದ ಎಚ್ಚರಿಕೆ: ಶಾಂಘೈನಲ್ಲಿ ಸಾಮೂಹಿಕ ಪರೀಕ್ಷೆ
ಸಣ್ಣ ಅಲೆ ಸಹಜ: 'ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್‌ ಏರಿಳಿತಗೊಂಡು ಮಿನಿ ಅಲೆಗಳಂತೆ ಕಾಣಿಸಿಕೊಳ್ಳಬಹುದು. ವಿಶ್ವದ ಕೆಲವು ಕಡೆ ಈಗಾಗಲೇ ಇಂತಹ ಸನ್ನಿವೇಶಗಳು ನಿರ್ಮಾಣಗೊಂಡಿವೆ. ಭಾರತದಲ್ಲಿಯೂ ಈ ರೀತಿ ಆಗಬಹುದು. ಹಾಗಾಗಿ ಕೊರೊನಾ ರೂಪಾಂತರಿ ವೈರಾಣುಗಳ ಉಪ ತಳಿಗಳನ್ನು ಪತ್ತೆ ಮಾಡುವುದು ಅಗತ್ಯವಾಗಿದೆ' ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್‌ ಹೇಳಿದ್ದಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ