ಆ್ಯಪ್ನಗರ

ಸುಗ್ರೀವಾಜ್ಞೆ ಹೊರಡಿಸಿ ಕೆಲವೇ ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ ವೈದ್ಯರು, ಪೊಲೀಸರ ಮೇಲೆ ಹಲ್ಲೆ

ಕೊರೊನಾ ವಾರಿಯರ್ಸ್‌ ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಆದರೆ, ಸುಗ್ರೀವಾಜ್ಞೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ ವೈದ್ಯರು ಮತ್ತು ಪೊಲೀಸರ ಮೇಲೆ ದಾಳಿ ನಡೆದಿದೆ.

Agencies 22 Apr 2020, 9:34 pm
ಭೋಪಾಲ್‌: ಕೇಂದ್ರ ಸರಕಾರ ಆರೋಗ್ಯ ಸಿಬ್ಬಂದಿ ಮೇಲೆ ನಡೆಯುತ್ತಿರುವ ಹಲ್ಲೆಗಳಿಗೆ ಕಡಿವಾಣ ಹಾಕಲು ಸುಗ್ರೀವಾಜ್ಞೆ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ವೈದ್ಯರು ಮತ್ತು ಪೊಲೀಸರ ಮೇಲೆ ಮಧ್ಯಪ್ರದೇಶದಲ್ಲಿ ಹಲ್ಲೆ ನಡೆಸಲಾಗಿದೆ. ಕೊರೊನಾ ವೈರಸ್‌ನ ಸ್ಕ್ರೀನಿಂಗ್‌ ಮಾಡಲು ತೆರಳಿದ್ದಾಗ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಮತ್ತು ಪೊಲೀಸ್‌ ಅಧಿಕಾರಿ ಮೇಲೆ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಪೊಲೀಸ್‌ ಅಧಿಕಾರಿಗೆ ತಲೆಗೆ ಗಂಭೀರ ಗಾಯವಾಗಿದ್ದು, ವೈದ್ಯರಿಗೆ ಲಘು ಗಾಯಗಳಾಗಿವೆ.
Vijaya Karnataka Web Attack on doctors


ಇದು ಮಧ್ಯಪ್ರದೇಶದಲ್ಲಿ ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ ಮೇಲೆ ನಡೆಯುತ್ತಿರುವ 5ನೇ ದಾಳಿಯಾಗಿದೆ. ಇದಕ್ಕೂ ಮುಂಚೆ, ವೈದ್ಯರು, ಪೊಲೀಸರು, ಸ್ಯಾನಿಟೈಸರ್‌ ಕೆಲಸಗಾರರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಬುಧವಾರದ ಘಟನೆ ಶೋಯ್‌ಪುರ್‌ ಜಿಲ್ಲೆಯ ಗಾಸ್ವಾನಿ ಗ್ರಾಮದಲ್ಲಿ ನಡೆದಿದ್ದು, ರೈತ ಮತ್ತು ಆತನ ಮಗ ಡಾ.ಪವನ್‌ ಉಪಾಧ್ಯಾಯ್‌ ಮತ್ತು ಎಎಸ್‌ಐ ಶ್ರೀರಾಮ್‌ ಆವಾಸ್ತಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ರೈತ ಗಂಗಾರಾಮ್‌ ಮಗ ಗೋಪಾಲ್‌ಗೆ ಅನಾರೋಗ್ಯ ಎಂದು ಗೊತ್ತಾದ ಮೇಲೆ ವೈದ್ಯರು ಗ್ರಾಮಕ್ಕೆ ತಪಾಸಣೆಗೆ ಹೋಗಿದ್ದರು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಸಂಪತ್‌ ಉಪಾಧ್ಯಾಯ ಹೇಳಿದ್ದಾರೆ. ಗೋಪಾಲ್‌ ಇತ್ತೀಚೆಗೆ ಗುಣ ಜಿಲ್ಲೆಯಿಂದ ಬಂದಿದ್ದ. ಆದ್ದರಿಂದ ವಿಜಯಪುರದ ಸರಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ಪವನ್‌ ಉಪಾಧ್ಯಾಯ್‌ ತಪಾಸಣೆಗೆ ಹೋಗಿದ್ದರು.

ಕೊರೊನಾ ನಿಯಂತ್ರಣದಲ್ಲಿ ಭಾರತ ಮುಂದೆ, ಮೋದಿ ಕಾರ್ಯವೈಖರಿಗೆ ಬಿಲ್‌ಗೇಟ್ಸ್‌ ಮೆಚ್ಚುಗೆ

ಆದರೆ, ರೈತನ ಕುಟುಂಬ ಗೋಪಾಲ್‌ನನ್ನು ಸ್ಕ್ರೀನ್‌ ಮಾಡಲು ಬಿಡಲಿಲ್ಲ. ಇಲ್ಲಿಂದ ಹೋಗಿ ಎಂದು ಕುಟುಂಬಸ್ಥರು ಬೆದರಿಸಿದ್ದಾರೆ. ನಂತರ ಪೊಲೀಸರ ಸಹಾಯ ಪಡೆದು ಶ್ರೀರಾಮ್‌ ಆವಾಸ್ತಿ ಜೊತೆ ಪವನ್‌ ತಪಾಸಣೆಗೆ ಹೋದಾಗ ಅವರ ಮೇಲೆ ದಾಳಿ ನಡೆದಿದೆ. ಗಂಗಾರಾಮ್‌ ಮತ್ತು ಆತನ ಮಗ ಆಶಿಶ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗೋಪಾಲ್‌ ನಾಪತ್ತೆಯಾಗಿದ್ದಾನೆ.

ಬೆಂಗಳೂರಿನಲ್ಲಿ ಕೊರೊನಾ ವಾರಿಯರ್ಸ್‌ ಮೇಲೆ ದಾಳಿ, ಪಾದರಾಯನಪುರದಲ್ಲಿ ಉದ್ವಿಗ್ನ ಪರಿಸ್ಥಿತಿ

ರೈತ ಮತ್ತು ಇಬ್ಬರ ಮಕ್ಕಳ ಮೇಲೆ ಎನ್‌ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಸರಕಾರ ಕೊರೊನಾ ವಾರಿಯರ್ಸ್‌ ಮೇಲೆ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ. ಇದಕ್ಕಾಗಿ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿದೆ. ಸುಗ್ರೀವಾಜ್ಞೆಯಂತೆ 6 ತಿಂಗಳಿಂದ 7 ವರ್ಷದವರೆಗೆ ಶಿಕ್ಷೆ ನೀಡುವ ಕಾನೂನು ತರಲಾಗಿದೆ.

ಕೊರೊನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದ್ರೆ ನೇರ ಜೈಲಿಗೆ, ಕಠಿಣ ಶಿಕ್ಷೆ: ಕೇಂದ್ರದಿಂದ ಸುಗ್ರೀವಾಜ್ಞೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ