ಆ್ಯಪ್ನಗರ

ನಿಮ್ಮ ಮನೆ ಮುಂದಿದೆ ಲಕ್ಷ್ಮಣ ರೇಖೆ..! ದಾಟಿದರೆ ‘ಪ್ರಾಣಾಪಹರಣ’ ಖಚಿತ..!

ಮನೆಯೊಳಗಿರಿ, ಕುಟುಂಬದ ಜೊತೆ ಸುರಕ್ಷಿತವಾಗಿರಿ, ಮನೆಯಿಂದ ಹೊರಗೆ ಬರಬೇಡಿ ಎಂಬ ಸರಳ ಸೂತ್ರವನ್ನು ಇಡೀ ದೇಶ ಪಾಲಿಸಲೇಬೇಕಿದೆ. ಇಲ್ಲವಾದ್ರೆ ಮಹಾಮಾರಿ ಆರ್ಭಟಕ್ಕೆ ಇಡೀ ದೇಶವೇ ಸ್ತಬ್ಧವಾಗಿಬಿಡುತ್ತೆ. ಅದಕ್ಕೆ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.

ದಿಲೀಪ್ ಡಿ. ಆರ್. | Vijaya Karnataka Web 24 Mar 2020, 9:17 pm

ಹೈಲೈಟ್ಸ್‌:

  • ನಿಮ್ಮ ಮನೆಯ ಮುಂದಿರುವ ಲಕ್ಷ್ಮಣ ರೇಖೆ ದಾಟಬೇಡಿ
  • ಆಗ ಲಕ್ಷ್ಮಣ ರೇಖೆ ದಾಟಿದ ಸೀತೆಯ ಅಪಹರಣವಾಗಿತ್ತು
  • ಈಗ ಮನೆ ಮುಂದಿನ ಲಕ್ಷ್ಮಣ ರೇಖೆ ದಾಟಿದರೆ ಪ್ರಣಾಪಹರಣ ಖಚಿತ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web laxman rekha
ನಿಮ್ಮ ಮನೆ ಮುಂದಿದೆ ಲಕ್ಷ್ಮಣ ರೇಖೆ..! ದಾಟಿದರೆ ‘ಪ್ರಾಣಾಪಹರಣ’ ಖಚಿತ..!
ಏಪ್ರಿಲ್ 14, 2020ರವರೆಗೂ ನಮಗೆಲ್ಲರಿಗೂ ಮನೆಯೇ ಮಂತ್ರಾಲಯ..! ಮನೆಯಿಂದ ಆಚೆಗೆ ಕಾಲಿಟ್ಟರೆ, ನಮ್ಮ ಜೀವಕ್ಕಿಲ್ಲ ಗ್ಯಾರಂಟಿ..! ಕೊರೊನಾ ವೈರಸ್ ವಿರುದ್ಧ ನಿರ್ಣಾಯಕ ಸಮರಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರಲ್ಲಿ 21 ದಿನಗಳ ಸಮಯ ಕೇಳಿದ್ದಾರೆ. ಮುಂದಿನ 3 ವಾರಗಳ ಕಾಲ ನೀವು ನಿಮ್ಮ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇಂಥಾ ನಿರ್ಧಾರಗಳು ಹೊಸದೇನಲ್ಲ..!

ಹಿಂದೆ ಮಲೇರಿಯಾ,ಸಿಡುಬು,ಕಾಲರಾದಂತಹ ಸಾಂಕ್ರಾಮಿಕ ರೋಗ ರುಜಿನಗಳು ಕಾಣಿಸಿಕೊಂಡಾಗ, ಊರಿಗೇ ಊರೇ ಖಾಲಿಯಾಗಿಬಿಡ್ತಿತ್ತು. ತಿಂಗಳುಗಟ್ಟಲೆ ತೋಟ, ಗದ್ದೆಗಳಲ್ಲಿ ತಾತ್ಕಾಲಿಕವಾಗಿ ಗುಡಿಸಲು ಕಟ್ಟಿಕೊಂಡು ಬದುಕಬೇಕಾಗಿ ಬರುತ್ತಿತ್ತು. ಒಂದು ಗುಡಿಸಲಿಗೂ, ಮತ್ತೊಂದಕ್ಕೂ ಬಹಳ ಅಂತರ ಕಾಯ್ದುಕೊಳ್ಳಬೇಕಾಗುತ್ತಿತ್ತು. ಸಾಂಕ್ರಾಮಿಕ ರೋಗ ಹತೋಟಿಗೆ ಬಂದ ನಂತರವಷ್ಟೇ ಎಲ್ಲರೂ ಊರಿಗೆ ಎಂಟ್ರಿ ಕೊಟ್ಟು ತಮ್ಮ ತಮ್ಮ ಮನೆಗಳಿಗೆ ವಾಪಸ್ ಆಗುತ್ತಿದ್ದರು.

ಇಂದೂ ನಮ್ಮ-ನಿಮ್ಮೆಲ್ಲರ ಜೊತೆ ಇರುವ ಹಿರಿಯ ಜೀವಗಳಿಗೆ ಇದು ಗೊತ್ತಿಲ್ಲದ ಸಂಗತಿ ಏನಲ್ಲ. ಸಾಂಕ್ರಾಮಿಕ ರೋಗಗಳಿಗೆ ತುತ್ತಾದಾಗ ಊರಿಗೆ ಊರೇ ಖಾಲಿ ಮಾಡಲೇಬೇಕಿತ್ತು, ಇಲ್ಲವಾದ್ರೆ, ಊರಿಗೆ ಊರೇ ಸ್ಮಶಾನವಾಗುವ ಭಯವಿತ್ತು..! ಆ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳು ನಿಂತು ಹೋಗಿ ಹೊಟ್ಟೆಗೆ ಹಿಟ್ಟಿಲ್ಲದೆ ಪರದಾಡುತ್ತಿದ್ದರು ಜನ.

21 ದಿನ ದೇಶಾದ್ಯಂತ ಕೊರೊನಾ ಕರ್ಫ್ಯೂ..! 3 ವಾರ ನಿರ್ಬಂಧ ಘೋಷಿಸಿದ ಪ್ರಧಾನಿ ಮೋದಿ

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಜನಸಂಪರ್ಕವನ್ನ ಕಡಿಮೆಗೊಳಿಸಿ, ರೋಗದ ಸರಪಳಿಯನ್ನ ಮುರಿಯುವ ಪದ್ದತಿ ಹೊಸದೇನಲ್ಲ. ಇಂದಿನ ಆಧುನಿಕ ಯುಗದಲ್ಲಿ ಮಲೇರಿಯಾ,ಸಿಡುಬು,ಕಾಲರಾದಂಥಾ ಸಾಂಕ್ರಾಮಿಕ ರೋಗಗಳಿಗೆ ಮನೆ ಬಿಟ್ಟ ಉದಾಹರಣೆ ಇರಲಿಲ್ಲವಾದ್ರೂ, ಕೊರೊನಾ ವೈರಸ್‌ ಮನೆಯೊಳಗೇ ಇರುವ ಪಾಠ ಕಲಿಸುತ್ತಿದೆ..!

ಮೋದಿ ಭಾಷಣ ಲೈಪ್‌ ಅಪ್‌ಡೇಟ್ಸ್‌: ಇಡೀ ದೇಶದಲ್ಲಿ ಕರ್ಫ್ಯೂ ಜಾರಿ

ಮನೆಯೊಳಗಿರಿ, ಕುಟುಂಬದ ಜೊತೆ ಸುರಕ್ಷಿತವಾಗಿರಿ, ಮನೆಯಿಂದ ಹೊರಗೆ ಬರಬೇಡಿ ಎಂಬ ಸರಳ ಸೂತ್ರವನ್ನು ಇಡೀ ದೇಶ ಪಾಲಿಸಲೇಬೇಕಿದೆ. ಇಲ್ಲವಾದ್ರೆ ಮಹಾಮಾರಿ ಆರ್ಭಟಕ್ಕೆ ಇಡೀ ದೇಶವೇ ಸ್ತಬ್ಧವಾಗಿಬಿಡುತ್ತೆ. 21 ದಿನಗಳ ಕಾಲ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿದ್ದು, ವೈರಾಣು ಹರಡದಂತೆ ತಡೆಯಲೇಬೇಕಿದೆ. ಇಲ್ಲವಾದ್ರೆ, ಅಂದು ಲಕ್ಷ್ಮಣ ರೇಖೆ ದಾಟಿದ ಸೀತೆ ರಾವಣನಿಂದ ಅಪಹರಣಕ್ಕೆ ಈಡಾದಂತೆ ಇಂದು ನಾವು ಪ್ರಾಣಾಪಹರಣಕ್ಕೆ ಬಲಿಯಾಗಬೇಕಾಗುತ್ತೆ.

ನಾಳೆಯಿಂದ ರಾಜ್ಯಾದ್ಯಂತ ಸಂಪೂರ್ಣ ನಾಕಾಬಂದಿ: ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ