ಮುಂಬಯಿ: ದೇಶದಲ್ಲಿ ಒಂದು ಹಂತದ ವರೆಗೆ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದೆ ಎನ್ನುವಷ್ಟರಲ್ಲಿ ದಿಲ್ಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಂಘಟನೆಯ ಸಮಾವೇಶದಿಂದಾಗಿ ಪರಿಸ್ಥಿತಿ ಕೈಮೀರಿದೆ. ದಿಲ್ಲಿಯ ನಿಜಾಮುದ್ದೀನ್ ದರ್ಗಾದಲ್ಲಿ ನಡೆದ ತಬ್ಲಿಘಿ ನಮಾಜಿನಲ್ಲಿ ಭಾಗವಹಿಸಿರುವುದರ ಪೈಕಿ ಹಲವರಿಗೆ ಕೊರೊನಾ ವೈರಸ್ ತಗುಲಿರುವುದಾಗಿ ದೃಢಪಟ್ಟಿದೆ. ಇವರ ಸಂಪರ್ಕ ಪಟ್ಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ.
ದೇಶದ ವಿವಿದೆಡೆಗಳಿಂದ ಬಂದು ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಇದು ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಲು ಕಾರಣವಾಗಿದೆ. ಸೋಂಕು ಬಾಧಿತರನ್ನು ಕಂಡುಹಿಡಿಯುವುದು ಸವಾಲಿನ ವಿಷಯವಾಗಿ ಪರಿಣಮಿಸಿದೆ.
ಕೋಮು ಪ್ರಶ್ನೆ ಬೇಡ: ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದವರ ಮಾಹಿತಿಯೇ ಕೊಡದ ಮಮತಾ!
ಹಾಗಿರಬೇಕೆಂದರೆ ದಿಲ್ಲಿ ನಿಜಾಮುದ್ದೀನ್ ದರ್ಗಾದಲ್ಲಿ ಭಾಗವಹಿಸಿ ಮಹಾರಾಷ್ಟ್ರಕ್ಕೆ ಮರಳಿರುವ 50ರಿಂದ 60ರಷ್ಟು ಸದಸ್ಯರು ಮೊಬೈಲ್ ಸ್ವಿಚ್ ಆಫ್ ಮಾಡಿ ಅಡಗಿ ಕುಳಿತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಹಾರಾಷ್ಟ್ರ ಗೃಹ ಇಲಾಖೆಯು ಮಾಹಿತಿ ನೀಡಿದ್ದು, ಶಂಕಿತರ ಪತ್ತೆ ಹಚ್ಚುವುದಕ್ಕಾಗಿ ಪೊಲೀಸ್ ಹರಸಾಹಸ ಪಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆಗಲೇ 1000 ದಾಟಿದೆ. ಪಿಟಿಐ ವರದಿಯಂತೆ ಮಂಗಳವಾರ ಮಾತ್ರ 150ರಷ್ಟು ಮಂದಿಗೆ ಕೋವಿಡ್ 19 ಸೋಂಕು ತಗಲಿರುವುದಾಗಿ ದೃಢಪಟ್ಟಿದೆ. ಈ ಪೈಕಿ ವಾಣಿಜ್ಯ ನಗರಿ ಮುಂಬಯಿನಲ್ಲಿ 116 ಪ್ರಕರಣಗಳು ದಾಖಲಾಗಿದ್ದವು.
ಏ. 14ರ ಬಳಿಕವೂ ಲಾಕ್ಡೌನ್ ವಿಸ್ತರಿಸಲಿರುವ ಕೇಂದ್ರ ಸರಕಾರ
ದೇಶದಲ್ಲಿ ಒಟ್ಟು ದಾಖಲಾಗಿರುವ ಕೋವಿಡ್ 19 ಸೋಂಕು ಪ್ರಕರಣಗಳ ಪೈಕಿ ಮೂರರಲ್ಲಿ ಒಂದರಷ್ಟು ಜನರು ತಬ್ಲಿಘಿ ಜಮಾತ್ಗೆ ಸಂಪರ್ಕವನ್ನು ಹೊಂದಿದ್ದಾರೆ ಎಂಬುದು ಆಘಾತಕಾರಿ ವಿಷಯವಾಗಿದೆ.
ಅಂದ ಹಾಗೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5,000 ಗಡಿ ದಾಟಿದೆ. ಇದುವರೆಗೆ 5,194 ಮಂದಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು, 149 ಮಂದಿ ಮೃತಪಟ್ಟಿದ್ದಾರೆ.
ಮಸೀದಿ ನಂಟು ಮುಚ್ಚಿಟ್ಟ 36 ತಬ್ಲಿಘಿಗಳ ವಿರುದ್ಧ ಕೇಸ್
ದೇಶದ ವಿವಿದೆಡೆಗಳಿಂದ ಬಂದು ತಬ್ಲಿಘಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಇದು ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬಲು ಕಾರಣವಾಗಿದೆ. ಸೋಂಕು ಬಾಧಿತರನ್ನು ಕಂಡುಹಿಡಿಯುವುದು ಸವಾಲಿನ ವಿಷಯವಾಗಿ ಪರಿಣಮಿಸಿದೆ.
ಕೋಮು ಪ್ರಶ್ನೆ ಬೇಡ: ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದವರ ಮಾಹಿತಿಯೇ ಕೊಡದ ಮಮತಾ!
ಹಾಗಿರಬೇಕೆಂದರೆ ದಿಲ್ಲಿ ನಿಜಾಮುದ್ದೀನ್ ದರ್ಗಾದಲ್ಲಿ ಭಾಗವಹಿಸಿ ಮಹಾರಾಷ್ಟ್ರಕ್ಕೆ ಮರಳಿರುವ 50ರಿಂದ 60ರಷ್ಟು ಸದಸ್ಯರು ಮೊಬೈಲ್ ಸ್ವಿಚ್ ಆಫ್ ಮಾಡಿ ಅಡಗಿ ಕುಳಿತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಹಾರಾಷ್ಟ್ರ ಗೃಹ ಇಲಾಖೆಯು ಮಾಹಿತಿ ನೀಡಿದ್ದು, ಶಂಕಿತರ ಪತ್ತೆ ಹಚ್ಚುವುದಕ್ಕಾಗಿ ಪೊಲೀಸ್ ಹರಸಾಹಸ ಪಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಆಗಲೇ 1000 ದಾಟಿದೆ. ಪಿಟಿಐ ವರದಿಯಂತೆ ಮಂಗಳವಾರ ಮಾತ್ರ 150ರಷ್ಟು ಮಂದಿಗೆ ಕೋವಿಡ್ 19 ಸೋಂಕು ತಗಲಿರುವುದಾಗಿ ದೃಢಪಟ್ಟಿದೆ. ಈ ಪೈಕಿ ವಾಣಿಜ್ಯ ನಗರಿ ಮುಂಬಯಿನಲ್ಲಿ 116 ಪ್ರಕರಣಗಳು ದಾಖಲಾಗಿದ್ದವು.
ಏ. 14ರ ಬಳಿಕವೂ ಲಾಕ್ಡೌನ್ ವಿಸ್ತರಿಸಲಿರುವ ಕೇಂದ್ರ ಸರಕಾರ
ದೇಶದಲ್ಲಿ ಒಟ್ಟು ದಾಖಲಾಗಿರುವ ಕೋವಿಡ್ 19 ಸೋಂಕು ಪ್ರಕರಣಗಳ ಪೈಕಿ ಮೂರರಲ್ಲಿ ಒಂದರಷ್ಟು ಜನರು ತಬ್ಲಿಘಿ ಜಮಾತ್ಗೆ ಸಂಪರ್ಕವನ್ನು ಹೊಂದಿದ್ದಾರೆ ಎಂಬುದು ಆಘಾತಕಾರಿ ವಿಷಯವಾಗಿದೆ.
ಅಂದ ಹಾಗೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5,000 ಗಡಿ ದಾಟಿದೆ. ಇದುವರೆಗೆ 5,194 ಮಂದಿಯಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿದ್ದು, 149 ಮಂದಿ ಮೃತಪಟ್ಟಿದ್ದಾರೆ.
ಮಸೀದಿ ನಂಟು ಮುಚ್ಚಿಟ್ಟ 36 ತಬ್ಲಿಘಿಗಳ ವಿರುದ್ಧ ಕೇಸ್