ಆ್ಯಪ್ನಗರ

ಕೇರಳದಲ್ಲಿ ಕೊರೊನಾ ಸೋಂಕಿತರ ಫೋನ್‌ ಕದ್ದಾಲಿಕೆ..! ಪಿಣರಾಯಿ ಸರಕಾರದ ಕ್ರಮಕ್ಕೆ ಪ್ರತಿಪಕ್ಷಗಳ ಆಕ್ಷೇಪ

ಕೊರೊನಾ ವೈರಸ್‌ ನಿಯಂತ್ರಣದಲ್ಲಿ ಮಾದರಿ ಎನಿಸಿಕೊಂಡಿದ್ದ ಕೇರಳ ಸರಕಾರ ಸೋಂಕಿತರೆಲ್ಲರ ಫೋನ್‌ ಕರೆಗಳನ್ನು ರೆಕಾರ್ಡ್‌ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು ವಿವಾದ ಸೃಷ್ಟಿಸಿದೆ. ಪಿಣರಾಯಿ ವಿಜಯನ್‌ ನೇತೃತ್ವದ ಸರಕಾರದ ವಿರುದ್ಧ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.

Agencies 13 Aug 2020, 9:23 pm
ತಿರುವನಂತಪುರಂ: ಕೊರೊನಾ ಸೋಂಕು ನಿಯಂತ್ರಣದಲ್ಲಿ ಮಾದರಿ ಎನಿಸಿಕೊಂಡಿದ್ದ ಕೇರಳ ಸರಕಾರ ಸೋಂಕಿತರೆಲ್ಲರ ಫೋನ್‌ ಕರೆಗಳನ್ನು ರೆಕಾರ್ಡ್‌ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು ವಿವಾದ ಸೃಷ್ಟಿಸಿದೆ. ಅಕ್ರಮವಾಗಿ ದೂರವಾಣಿ ಕರೆ ರೆಕಾರ್ಡ್‌ ಮಾಡಿಕೊಂಡ ಪಿಣರಾಯಿ ವಿಜಯನ್‌ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.
Vijaya Karnataka Web coronavirus kerala police using call records of patients for contact tracing
ಕೇರಳದಲ್ಲಿ ಕೊರೊನಾ ಸೋಂಕಿತರ ಫೋನ್‌ ಕದ್ದಾಲಿಕೆ..! ಪಿಣರಾಯಿ ಸರಕಾರದ ಕ್ರಮಕ್ಕೆ ಪ್ರತಿಪಕ್ಷಗಳ ಆಕ್ಷೇಪ


''ಸೋಂಕಿತರ ಚಲನವಲನಗಳು ಹಾಗೂ ಅವರೊಂದಿಗಿನ ಪ್ರಾಥಮಿಕ ಸಂಪರ್ಕಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಅವರೆಲ್ಲರ ಕರೆಗಳನ್ನು ಪೊಲೀಸರು ಕದ್ದಾಲಿಸುತ್ತಿದ್ದಾರೆ. ಅದು ವ್ಯಕ್ತಿಯೊಬ್ಬರ ಖಾಸಗಿತನದ ಉಲ್ಲಂಘನೆ,'' ಎಂದು ಕೇರಳದ ಮಾಜಿ ಕಾನೂನು ಸಚಿವ ಬಿ.ಜಿ. ಹರೀಂದ್ರನಾಥ್‌ ಹೇಳಿದ್ದಾರೆ.

''ಕರ್ನಾಟಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ.ಎಸ್‌.ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ ನಿರ್ದಿಷ್ಟ ಅಪರಾಧಗಳ ತನಿಖೆ ಸಂದರ್ಭವನ್ನು ಹೊರತುಪಡಿಸಿ ವ್ಯಕ್ತಿಯೊಬ್ಬರ ಫೋನ್‌ ಕರೆಗಳನ್ನು ಕದ್ದಾಲಿಸುವಂತಿಲ್ಲ. ಹೀಗಾಗಿ ಕೇರಳ ಸರಕಾರವು ಸೋಂಕಿತರ ಫೋನ್‌ ಕರೆಗಳ ಮೇಲೆ ನಿಗಾ ಇಡಲು ಹೇಳಿರುವುದು ಅಕ್ರಮ,'' ಎಂಬುದಾಗಿ ಹರೀಂದ್ರನಾಥ್‌ ಹೇಳಿದ್ದಾರೆ.

ಪ್ರಧಾನಿಗೂ ಕೊರೊನಾ ಸೋಂಕಿನ ಭೀತಿ.. ಬೆಂಗಳೂರು ಗಲಭೆ ಫಜೀತಿ: ಟಾಪ್ 10 ನ್ಯೂಸ್

ಆದರೆ, ಸೋಂಕು ನಿಯಂತ್ರಣಕ್ಕೆ ಸೋಂಕಿತರ ಚಲನವಲನದ ಮೇಲೆ ನಿಗಾ ಇಡಲು ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಕೇರಳ ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದಲ್ಲಿ 2 ಲಕ್ಷದ ಗಡಿ ದಾಟಿದ ಕೊರೊನಾ..! ಒಂದೇ ದಿನ ದಾಖಲೆಯ 8,609 ಜನ ಗುಣಮುಖ

ಸಂಗ್ರಹ ಮಾಡಿರುವ ಸಿಡಿಆರ್‌ (ಕಾಲ್‌ ಡೀಟೆಲ್‌ ರೆಕಾರ್ಡ್‌) ಅನ್ನು ಯಾವುದೇ ಕಾರಣಕ್ಕೂ ಬಹಿರಂಗ ಮಾಡುವುದಿಲ್ಲ ಎಂದೂ ತಿಳಿಸಿದ್ದಾರೆ. ಸಿಎಂ ಪಿಣರಾಯಿ ಕೂಡ ಅದಕ್ಕೆ ಧ್ವನಿಗೂಡಿಸಿದ್ದು, ಕೆಲ ತಿಂಗಳುಗಳ ಕಾಲ ಮಾತ್ರ ದೂರವಾಣಿ ಕರೆ ರೆಕಾರ್ಡ್‌ ಮುಂದುವರಿಯಲಿದೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಒಂದೇ ದಿನ ದೇಶದಲ್ಲಿ ದಾಖಲೆಯ ಸೋಂಕು, ಪರೀಕ್ಷೆ: 24 ಲಕ್ಷ ಸಮೀಪಿಸಿದ ಸೋಂಕಿತರ ಸಂಖ್ಯೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ