ಆ್ಯಪ್ನಗರ

ಕೊರೊನಾ ವೈರಸ್‌: ಕರ್ನಾಟಕ ಸೇರಿ 10 ರಾಜ್ಯಗಳಲ್ಲೇ ಸೋಂಕು ಅಧಿಕ

​​ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಹೆಚ್ಚಲು ದಿಲ್ಲಿ ಸರಕಾರದ ನಿರ್ಲಕ್ಷ್ಯವೇ ಕಾರಣ. ಹಲವು ರೀತಿಯ ಮಾರ್ಗದರ್ಶನ, ಸಲಹೆ ನೀಡಿದರೂ ಅವುಗಳ ಜಾರಿಗೆ ಮುತುವರ್ಜಿ ವಹಿಸಿಲ್ಲ ಎಂದೂ ಕೇಂದ್ರ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ.

Vijaya Karnataka Web 28 Nov 2020, 11:00 am
ಹೊಸದಿಲ್ಲಿ: ದೇಶದ ಒಟ್ಟು ಕೊರೊನಾ ಪ್ರಕರಣಗಳ ಪೈಕಿ ಹತ್ತು ರಾಜ್ಯಗಳ ಪಾಲು ಶೇ.77ರಷ್ಟಿದೆ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
Vijaya Karnataka Web ಕೊರೊನಾ ವೈರಸ್‌
ಕೊರೊನಾ ವೈರಸ್


ಮಹಾರಾಷ್ಟ್ರ (18.9%), ಕೇರಳ (14.7%), ದಿಲ್ಲಿ (8.5%), ಪಶ್ಚಿಮ ಬಂಗಾಳ (5.7%), ಕರ್ನಾಟಕ (5.6%), ರಾಜಸ್ಥಾನ (5.5%), ಉತ್ತರ ಪ್ರದೇಶ (5.4%), ಛತ್ತೀಸ್‌ಗಢ (5%), ಹರಿಯಾಣ (4.7%) ಮತ್ತು ಆಂಧ್ರಪ್ರದೇಶ (3.1%) ಗಳಲ್ಲಿ ಸೋಂಕು ತೀವ್ರವಾಗಿದೆ.

ದೇಶದಲ್ಲಿ ನಿತ್ಯವೂ ಸರಾಸರಿ 11 ಲಕ್ಷ ಜನರ ತಪಾಸಣೆ ನಡೆಸಲಾಗುತ್ತಿದೆ ಎಂದು 170 ಪುಟಗಳ ಪ್ರಮಾಣಪತ್ರದಲ್ಲಿ ಕೇಂದ್ರ ಸರಕಾರ ಮಾಹಿತಿ ನೀಡಿದೆ.

ಸರಕಾರದ ನಿರ್ಲಕ್ಷ್ಯ ಕಾರಣ

ರಾಷ್ಟ್ರ ರಾಜಧಾನಿಯಲ್ಲಿ ಸೋಂಕು ಹೆಚ್ಚಲು ದಿಲ್ಲಿ ಸರಕಾರದ ನಿರ್ಲಕ್ಷ್ಯವೇ ಕಾರಣ. ಹಲವು ರೀತಿಯ ಮಾರ್ಗದರ್ಶನ, ಸಲಹೆ ನೀಡಿದರೂ ಅವುಗಳ ಜಾರಿಗೆ ಮುತುವರ್ಜಿ ವಹಿಸಿಲ್ಲ ಎಂದೂ ಕೇಂದ್ರ ಸರಕಾರ ಅಸಮಾಧಾನ ವ್ಯಕ್ತಪಡಿಸಿದೆ.

ಮುನ್ನೆಚ್ಚರಿಕೆ ಅಗತ್ಯ

ದೇಶಾದ್ಯಂತ ಕೊರೊನಾ ಸಾಂಕ್ರಾಮಿಕದ 2ನೇ ಅಲೆ ಏಳುವ ಭೀತಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಖಡಕ್‌ ಸೂಚನೆ ನೀಡಿರುವ ಸುಪ್ರೀಂಕೋರ್ಟ್‌ ಕೊರೊನಾ ತಡೆ ಮುನ್ನೆಚ್ಚರಿಕೆ ನಿಯಮಗಳನ್ನು ರಾಜ್ಯಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದೆ.

ನ್ಯಾ. ಅಶೋಕ್‌ ಭೂಷಣ್‌ ಅವರಿದ್ದ ತ್ರಿಸದಸ್ಯ ನ್ಯಾಯಪೀಠ, ''ಲಸಿಕೆ ಸಂಶೋಧನೆ ಪೂರ್ಣಗೊಂಡು ಜನರಿಗೆ ಸಿಗುವ ತನಕ ಮಾಸ್ಕ್‌ ಧಾರಣೆ ಹಾಗೂ ಸಾಮಾಜಿಕ ಅಂತರ ಪಾಲನೆ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಲೇಬೇಕಿದೆ. ಆದರೆ ವಾಸ್ತವದಲ್ಲಿ ಶೇ.60ರಷ್ಟು ಜನರು ಮಾಸ್ಕ್‌ ಧರಿಸುತ್ತಿಲ್ಲ. ಉಳಿದವರಲ್ಲಿ ಶೇ.30 ರಷ್ಟು ಮಂದಿ ತೊಡುತ್ತಿರುವ ಮಾಸ್ಕ್‌ ಅವರ ಮುಖದ ಮೇಲೆ ನಿಲ್ಲದೆ ನೇತಾಡುತ್ತಿರುತ್ತದೆ. ಇಂಥ ನಿರ್ಲಕ್ಷ್ಯದಿಂದಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಮುನ್ನೆಚ್ಚರಿಕೆ ನಿಯಮಗಳು ವಿಫಲಗೊಳ್ಳುತ್ತವೆ. ಇಷ್ಟು ದಿನಗಳ ಶ್ರಮ ಕೂಡ ವ್ಯರ್ಥವಾಗಲಿದೆ'' ಎಂದು ಅಭಿಪ್ರಾಯಪಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ