ಆ್ಯಪ್ನಗರ

ಕೊರೊನಾ: ರೈಲು ಸೇವೆ ಸ್ಥಗಿತ ಏಪ್ರಿಲ್‌ 14ರವರೆಗೆ ವಿಸ್ತರಣೆ

ಪ್ರಯಾಣಿಕ ರೈಲ್ವೆ ಸೇವೆಗಳು ಮಾತ್ರ ಸ್ಥಗಿತಗೊಳ್ಳಲಿವೆ. ಆದರೆ ಅಗತ್ಯ ಸರಕುಗಳನ್ನು ದೇಶಾದ್ಯಂತ ತಲುಪಿಸಲು ಸರಕು ಸಾಗಣೆ ರೈಲುಗಳು ಎಂದಿನಂತೆ ಓಡಾಡಲಿವೆ ಎಂದು ರೈಲ್ವೆ ಇಲಾಖೆ ಹೇಳಿದೆ.

TIMESOFINDIA.COM 25 Mar 2020, 8:49 pm

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್‌ ಕಾಣಿಸಿಕೊಳ್ಳುತ್ತಿದ್ದಂತೆ, ವೈರಾಣು ಹರಡುವುದನ್ನು ತಡೆಗಟ್ಟಲು ಭಾರತದ ಜನರ ನಿಜವಾದ ಜೀವನಾಡಿಯಾಗಿರುವ ಭಾರತೀಯ ರೈಲ್ವೆ ತನ್ನ ಪ್ರಯಾಣಿಕ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದನ್ನೀಗ ಮತ್ತಷ್ಟು ವಿಸ್ತರಿಸಿದ್ದು, ಏಪ್ರಿಲ್‌ 14ರವರೆಗೆ ರೈಲು ಸೇವೆ ಇರುವುದಿಲ್ಲ ಎಂಬುದಾಗಿ ರೈಲ್ವೆ ಇಲಾಖೆ ಹೇಳಿದೆ.
Vijaya Karnataka Web Indian Railway


ಮಂಗಳವಾರ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ್ದರು. ಇದರ ಬೆನ್ನಿಗೆ ಇದೀಗ ತನ್ನ ಸೇವೆಗಳನ್ನು ಏಪ್ರಿಲ್‌ ಮಧ್ಯ ಭಾಗದವರೆಗೆ ಸ್ಥಗಿತಗೊಳಿಸುತ್ತಿರುವುದಾಗಿ ರೈಲ್ವೆ ಬುಧವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯಾಣಿಕ ರೈಲ್ವೆ ಸೇವೆಗಳು ಮಾತ್ರ ಸ್ಥಗಿತಗೊಳ್ಳಲಿವೆ. ಆದರೆ ಅಗತ್ಯ ಸರಕುಗಳನ್ನು ದೇಶಾದ್ಯಂತ ತಲುಪಿಸಲು ಸರಕು ಸಾಗಣೆ ರೈಲುಗಳು ಎಂದಿನಂತೆ ಓಡಾಡಲಿವೆ ಎಂದು ರೈಲ್ವೆ ಇಲಾಖೆ ಹೇಳಿದೆ.

ರೈಲು ಟಿಕೆಟ್‌ ರದ್ದುಪಡಿಸದಿರಿ, ಕ್ಯಾನ್ಸಲ್‌ ಮಾಡಿದರೆ ನಿಮಗೇ ನಷ್ಟ!

ಈ ಅವಧಿಯಲ್ಲಿ ರೈಲ್ವೆ ಟಿಕೆಟ್‌ಗಳನ್ನು ಮುಂಗಡ ಕಾಯ್ದಿರಿಸಿದವರು ತಮ್ಮ ಟಿಕೆಟ್‌ಗಳನ್ನು ರದ್ದು ಮಾಡುವ ಅವಶ್ಯಕತೆ ಇಲ್ಲ ಎಂಬುದಾಗಿ ಐಆರ್‌ಸಿಟಿಸಿ ತಿಳಿಸಿದೆ. ಟಿಕೆಟ್‌ ಹಣ ನೇರವಾಗಿ ಬುಕಿಂಗ್‌ ಮಾಡಿದವರ ಖಾತೆಗೆ ಜಮೆಯಾಗಲಿದೆ. ಒಂದೊಮ್ಮೆ ಕ್ಯಾನ್ಸಲ್‌ ಮಾಡಿದರೆ ರದ್ದು ಶುಲ್ಕ ಕಡಿತವಾಗುವ ಸಾಧ್ಯತೆ ಇದೆ ಎಂಬುದಾಗಿ ಅದು ಎಚ್ಚರಿಕೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ