ಆ್ಯಪ್ನಗರ

ಆರ್‌ಬಿಐ ನಡೆಯಿಂದ ಮಧ್ಯವರ್ಗದ ಜನ, ಉದ್ಯಮಿಗಳಿಗೆ ಲಾಭ: ಪ್ರಧಾನಿ ಮೋದಿ

ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ರೆಪೋ ದರದಲ್ಲಿ 75 ಮೂಲ ಅಂಕಗಳನ್ನು ಕಡಿತಗೊಳಿಸಿ ಶೇ. 4.4 ಕ್ಕೆ ಇಳಿಕೆ ಮಾಡಿದ್ದರು. ಅಲ್ಲದೆ ಗೃಹ, ವೈಯಕ್ತಿಕ ಸಾಲ ಮತ್ತು ವಾಹನ ಸಾಲಗಳ ಮಾಸಿಕ ಕಂತನ್ನು ಮೂರು ತಿಂಗಳ ಕಾಲ ಮುಂದೂಡಿಕೆ ಮಾಡುತ್ತಿರುವುದಾಗಿ ತಿಳಿಸಿದ್ದರು.

Vijaya Karnataka 27 Mar 2020, 1:46 pm

ಹೊಸದಿಲ್ಲಿ: ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಶುಕ್ರವಾರ ಬೆಳಿಗ್ಗಿನ ಪತ್ರಿಕಾಗೋಷ್ಠಿಯಲ್ಲಿ ರೆಪೋ ಮತ್ತು ರಿವರ್ಸ್‌ ರೆಪೋ ದರಗಳನ್ನು ಕಡಿತಗೊಳಿಸಿದ್ದು ಇದರಿಂದ ಮಧ್ಯಮ ವರ್ಗದ ಜನರು ಮತ್ತು ಉದ್ಯಮಿಗಳಿಗೆ ಲಾಭವಾಗಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Vijaya Karnataka Web Prime Minister Narendra Modi


"ಇಂದು, ಆರ್ಬಿಐ ನಮ್ಮ ಆರ್ಥಿಕತೆಯನ್ನು ಕೊರೊನಾ ವೈರಸ್ ಪ್ರಭಾವದಿಂದ ರಕ್ಷಿಸಲು ದೈತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಈ ಘೋಷಣೆಯು ಹಣದ ಚಲಾವಣೆಯನ್ನು ಸುಧಾರಿಸುತ್ತದೆ, ಮಧ್ಯಮ ವರ್ಗ ಮತ್ತು ಉದ್ಯಮಗಳಿಗೆ ಸಹಾಯ ಮಾಡಲಿದೆ,” ಎಂದುದಾಗಿ ಪ್ರಧಾನಿ ನರೇಂದ್ರ ಮೋದಿ ಟ್ಟೀಟ್‌ ಮಾಡಿದ್ದಾರೆ.

ರೆಪೋ, ರಿವರ್ಸ್ ರೆಪೋ ದರ ಇಳಿಕೆ; 3 ತಿಂಗಳ ಕಾಲ ಇಎಂಐ ಕಟ್ಬೇಕಿಲ್ಲ: ಆರ್‌ಬಿಐ ಮಹತ್ವದ ಘೋಷಣೆ

ಇದಕ್ಕೂ ಮೊದಲು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ರೆಪೋ ದರದಲ್ಲಿ 75 ಮೂಲ ಅಂಕಗಳನ್ನು ಕಡಿತಗೊಳಿಸಿ ಶೇ. 4.4 ಕ್ಕೆ ಇಳಿಕೆ ಮಾಡುವ ಘೋಷಣೆ ಮಾಡಿದ್ದರು. ಇದರ ಜೊತೆಗೆ ರಿವರ್ಸ್‌ ರೆಪೋ ದರಗಳಲ್ಲಿ 90 ಮೂಲ ಅಂಕ ಕಡಿತಗೊಳಿಸಿ ಶೇ. 4ಕ್ಕೆ ಇಳಿಸಿದ್ದರು.
ಅಲ್ಲದೆ ಗೃಹ, ವೈಯಕ್ತಿಕ ಸಾಲ ಮತ್ತು ವಾಹನ ಸಾಲಗಳ ಮಾಸಿಕ ಕಂತನ್ನು ಮೂರು ತಿಂಗಳ ಕಾಲ ಮುಂದೂಡಿಕೆ ಮಾಡುತ್ತಿರುವುದಾಗಿ ತಿಳಿಸಿದ್ದರು.

ಇದಕ್ಕೂ ಮುನ್ನ ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 1.7 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್‌ ಘೋಷಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ