ಆ್ಯಪ್ನಗರ

ಕೊರೊನಾ ವೈರಸ್‌ ನಿಯಂತ್ರಣ ಸಾಧ್ಯ, ಮುಂಬೈ ಧಾರಾವಿಯೇ ಸಾಕ್ಷಿ: ವಿಶ್ವ ಆರೋಗ್ಯ ಸಂಸ್ಥೆ

ಇಟಲಿ, ಸ್ಪೇನ್‌, ದಕ್ಷಿಣ ಕೊರಿಯಾದಲ್ಲಿಯೂ ಕೊರೊನಾ ಗ್ರಾಫ್‌ ಇಳಿಮುಖವಾಗಿದೆ. ಕೊರೊನಾವನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಗೆಬ್ರೆಯಸ್‌ ಮನವಿ ಮಾಡಿದ್ದಾರೆ.

Vijaya Karnataka Web 11 Jul 2020, 1:24 pm
ಹೊಸದಿಲ್ಲಿ: ಕಳೆದ ಕೆಲವು ತಿಂಗಳುಗಳಿಂದ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಆದರೂ ಈ ಸೋಂಕು ಹರಡುವುದುನ್ನು ತಡೆಯಬಹುದು. ಇದಕ್ಕೆ ಭಾರತದ ಮುಂಬೈನ ಅತಿ ದೊಡ್ಡ ಕೊಳಗೇರಿ ಧಾರಾವಿಯೇ ಸಾಕ್ಷಿ......
Vijaya Karnataka Web ಟೆಡ್ರೂಸ್‌ ಅದನಾಮ್ ಗೆಬ್ರೆಯೆಸಸ್
ಟೆಡ್ರೂಸ್‌ ಅದನಾಮ್ ಗೆಬ್ರೆಯೆಸಸ್


ಇದನ್ನು ಹೇಳಿದವರು ಯಾವುದೋ ಭಾರತದ ಸಂಸ್ಥೆ ಅಲ್ಲ. ವಿಶ್ವ ಆರೋಗ್ಯ ಸಂಸ್ಥೆ.

ಹೌದು ಕೊರೊನಾ ವೈರಸ್‌ ಹರಡುವುದನ್ನು ಗಣನೀಯವಾಗಿ ನಿಯಂತ್ರಿಸಬಹುದು. ಈಗಾಗಲೇ ಕೆಲವು ಕಡೆ ಇದು ಯಶಸ್ವಿಯೂ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಟೆಡ್ರೂಸ್‌ ಅದನಾಮ್ ಗೆಬ್ರೆಯೆಸಸ್ ತಿಳಿಸಿದ್ದಾರೆ.

ಭಾರತದ ಪ್ರಮುಖ ನಗರ ಮುಂಬೈನ ಅತಿ ದೊಡ್ಡ ಕೊಳಗೇರಿ ಧಾರಾವಿಯೇ ನಮಗೆ ಕಣ್ಣ ಮುಂದಿದೆ. ಅಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಕೊರೊನ ಗ್ರಾಫ್‌ ಮೇಲ್ಮುಖವಾಗಿತ್ತು. ಈಗ ಕಡಿಮೆಯಾಗಿದೆ. ಕಟ್ಟುನಿಟ್ಟಿನ ಪ್ರಮುಖಗಳನ್ನು ಕೈಗೊಂಡರೆ ನಮಗೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಇಟಲಿ, ಸ್ಪೇನ್‌, ದಕ್ಷಿಣ ಕೊರಿಯಾದಲ್ಲಿಯೂ ಕೊರೊನಾ ಗ್ರಾಫ್‌ ಇಳಿಮುಖವಾಗಿದೆ. ಕೊರೊನಾವನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಟೆಡ್ರೂಸ್‌ ಅದನಾಮ್ ಗೆಬ್ರೆಯೆಸಸ್ ಮನವಿ ಮಾಡಿದ್ದಾರೆ.

ವರ್ಚ್ಯುವಲ್‌ ಕಾನ್ಫರೆನ್ಸ್‌ ಮೂಲಕ ವಿಶ್ವಸಂಸ್ಥೆಯ ಮುಖ್ಯಸ್ಥರು ಮಾತನಾಡಬಹುದು.

ಒಂದೂವರೆಗೆ ತಿಂಗಳಿನಿಂದ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದೆ ನಿಜ. ಇದಕ್ಕೆ ಹಲವಾರು ಕಾರಣಗಳಿವೆ. ಜನರ ನಿರ್ಲಕ್ಷ್ಯ ಕೂಡ ಇರಬಹುದು. ಆಡಳಿತ ಸಂಸ್ಥೆಗಳು ಇನ್ನಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಯಾವುದೇ ಕಾರಣಕ್ಕೂ ಕೈ ಚೆಲ್ಲಬಾರದು ಎಂದು ಟೆಡ್ರೂಸ್‌ ಅದನಾಮ್ ಗೆಬ್ರೆಯೆಸಸ್ ವಿವರಿಸಿದರು.

ಸಮುದಾಯ ಮಟ್ಟಕ್ಕೆ ಸೋಂಕು ಹರಡಿದೆ ಎಂಬ ವಾದ ಕೇಳಿಬಂದಿದೆ. ಆದರೆ ಇದನ್ನು ನಿಖರವಾಗಿ ಹೇಳಲಾಗದು. ಇನ್ನಷ್ಟು ಸಂಶೋಧನೆ, ಅಧ್ಯಯನ ನಡೆಯಬೇಕಾಗಿದೆ ಎಂದು ತಿಳಿಸಿದರು.

ಕೊರೊನಾ ಪರೀಕ್ಷೆ, ಸೋಂಕಿತರ ಸಂಪರ್ಕ ಪತ್ತೆ ಹಚ್ಚುವುದು, ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸುವುದು. ಶಂಕಿತರನ್ನು ಬೇರ್ಪಡಿಸುವುದು, ಕೈ, ಕಾಲು ಸ್ವಚ್ಚವಾಗಿಟ್ಟುಕೊಳ್ಳುವುದು, ಸಾಮಾಜಿಕಾ ಅಂತರ ಸೇರಿದಂತೆ ಕೆಲವು ಮೂಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಜನರನ್ನು ಇದನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ವಿವರಿಸಿದರು.

ಸಮುದಾಯದ ಮಟ್ಟಕ್ಕೆ ಹರಡದಂತೆ ನೋಡಿಕೊಳ್ಳಬೇಕಾಗಿದೆ. ಇದೇ ನಮ್ಮ ಮುಂದಿರುವ ಅತಿ ದೊಡ್ಡ ಸವಾಲು ಎಂದು ಟೆಡ್ರೂಸ್‌ ಅದನಾಮ್ ಗೆಬ್ರೆಯೆಸಸ್ ಪುನರುಚ್ಚರಿಸಿದರು.

ಕೊರೊನಾ ಮಹಾಮರಿ ವಿಶ್ವದಾದ್ಯಂತ ತನ್ನ ಕಬಂಧ ಬಾಹು ಚಾಚಿದ್ದು, 1.2 ಕೋಟಿಗೂ ಅಧಿಕ ಮಂದಿಗೆ ಸೋಂಕು ತಲುಪಿದೆ. ಈಗಾಗಲೇ 5.5 ಲಕ್ಷ ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. ವಿಶ್ವದ 190ಕ್ಕೂ ಹೆಚ್ಚು ದೇಶಗಳಿಗೆ ಕೊರೊನಾ ಸೋಂಕು ಹರಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ