ಆ್ಯಪ್ನಗರ

ಮಾರಣಾಂತಿಕ 'ಕರೋನಾ ವೈರಸ್'ಗೆ 9 ಜನ ಬಲಿ, ಭಾರತದ 7 ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ

ಚೀನಾ ಸೇರಿ 'ಕರೋನಾ ವೈರಸ್' ವರದಿಯಾಗಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಏಳು ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Vijaya Karnataka Web 22 Jan 2020, 3:10 pm
ಹೊಸದಿಲ್ಲಿ: ಚೀನಾ ಸೇರಿ 'ಕರೋನಾ ವೈರಸ್' ವರದಿಯಾಗಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲು ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ಹೊರಡಿಸಿದೆ.
Vijaya Karnataka Web Novel Corona Virus


ವೈರಸ್ ಭಾರತಕ್ಕೆ ಹರಡದಂತೆ ತಡೆಯಲು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ಬರುವ ಪ್ರಯಾಣಿಕರನ್ನು ವೈದ್ಯಕೀಯ ತನಿಖೆ ನಡೆಸಿ ಬಿಡುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ. ಜೊತೆಗೆ ವಿದೇಶ ಪ್ರಯಾಣವನ್ನು ಮುಂದೂಡುವಂತೆ ಕೋರಿಕೊಂಡಿದೆ.

ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ ಮೊದಲಿಗೆ ನೊವೆಲ್ ಕರೋನಾ ವೈರಸ್(Novel Corona Virus ) ಕಾಯಿಲೆ ಕಾಣಿಕೊಂಡಿದ್ದು, ವಿಶ್ವದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಚೀನಾದಲ್ಲಿ ಶುರುವಾದ ಈ ವಿಚಿತ್ರ ಸೋಂಕಿಗೆ ಇದುವರೆಗೆ 9 ಜನ ಬಲಿಯಾಗಿದ್ದಾರೆ. ಥಾಯ್ಲೆಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾಗಳಲ್ಲಿಯೂ ಕೊರೋನಾ ವೈರಸ್ ಕಾಣಿಸಿಕೊಂಡಿದೆ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.

ಅಮೆರಿಕಕ್ಕೂ ಕಾಲಿಟ್ಟಿದೆ ಚೀನಾದ ಡೆಡ್ಲಿ ವೈರಸ್! ಕಸಾಯಿ ಖಾನೆಗಳೇ ಹೆಮ್ಮಾರಿಯ ಆವಾಸ ಸ್ಥಾನ..!

ಭಾರತೀಯ ಮೂಲದ ಶಿಕ್ಷಕಿಗೂ ತಗುಲಿದ 'ಕರೋನಾ ವೈರಸ್' !
ಹೊಸದಿಲ್ಲಿ ಮೂಲದ ಉದ್ಯಮಿ ಅಶುಮಾನ್‌ ಖೋವಾಲ್‌ ಅವರ ಪತ್ನಿ ಪ್ರೀತಿ ಮಹೇಶ್ವರಿ ಎಂಬುವವರು ಚೀನಾದ ಶೆನ್‌ಝೆನ್ ನಗರದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಶುಕ್ರವಾರ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ವೈರಸ್ ತಗುಲಿರುವುದು ದೃಢಪಟ್ಟಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ