ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 60,000 ಸನಿಹಕ್ಕೆ ಬಂದು ತಲುಪಿದೆ. ಈ ಬಗ್ಗೆ ಶನಿವಾರ ಬೆಳಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ, ಇದುವರೆಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59,662ಕ್ಕೆ ತಲುಪಿದೆ ಎಂದಿದೆ.
ಈ ಪೈಕಿ 39,834 ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಹಾಗೆಯೇ 17847 ಮಂದಿ ಸಂಪೂರ್ಣವಾಗಿ ಚೇತರಿಕೆಯನ್ನು ಪಡೆದಿದ್ದಾರೆ.
ಇದುವರೆಗೆ ದೇಶದಲ್ಲಿ ಕೊರೊನಾ ಸೋಂಕಿಗೆ 1981 ಮಂದಿ ಬಲಿಯಾಗಿದ್ದಾರೆ.
ಒಂದೇ ದಿನ ಮುಂಬೈನಲ್ಲಿ 748 ಹೊಸ ಕೊರೊನಾ ಪ್ರಕರಣಗಳು ದಾಖಲು!
ಭಾರತದ ಕೊರೊನಾಲಜಿ (ಮೇ 9, ಶನಿವಾರ ಬೆಳಗ್ಗೆ):
ಒಟ್ಟು ಪ್ರಕರಣ: 59662
ಸಕ್ರಿಯ ಪ್ರಕರಣ: 39834
ಗುಣಮುಖ: 17847
ಮರಣ: 1981
ಅದೇ ಹೊತ್ತಿಗೆ ಕಳೆದ 24 ತಾಸುಗಳಲ್ಲಿ 3320 ಹೊಸ ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹಾಗೆಯೇ ಕಳೆದ ಒಂದು ದಿನದಲ್ಲಿ 95 ಮಂದಿ ಸಾವಿಗೆ ಶರಣಾಗಿದ್ದಾರೆ.
ವಿಷಾನಿಲ ದುರಂತ: ಆಸ್ಪತ್ರೆಗಳಲ್ಲಿ ಅಸ್ವಸ್ಥರನ್ನು ಭೇಟಿಯಾದ ಆಂಧ್ರ ಉಪ ಮುಖ್ಯಮಂತ್ರಿ, ಸಚಿವರು
ಮಹಾರಾಷ್ಟ್ರ, ಗುಜರಾತ್ ಹಾಗೂ ದಿಲ್ಲಿಯಲ್ಲಿ ಗಣನೀಯವಾಗಿ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ ಅಂಶವಾಗಿದೆ.
ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ಮೇ 17ರ ವರೆಗೆ ವಿಸ್ತರಿಸಲಾಗಿದೆ. ಈ ನಡುವೆ ಲಾಕ್ಡೌನ್ ಜಾರಿಯಲ್ಲಿದ್ದರೂ ಹಲವಾರು ರಾಜ್ಯಗಳಲ್ಲಿ ನಿಬಂಧನೆಗಳಲ್ಲಿ ಸಡಿಲಿಕೆ ತರಲಾಗಿದೆ. ಆದರೆ ಮೇ 17ರ ಬಳಿಕವೂ ರೆಡ್ ಝೋನ್ಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿರುವ ಸಾಧ್ಯತೆಯಿದೆ.
ಈ ಪೈಕಿ 39,834 ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಹಾಗೆಯೇ 17847 ಮಂದಿ ಸಂಪೂರ್ಣವಾಗಿ ಚೇತರಿಕೆಯನ್ನು ಪಡೆದಿದ್ದಾರೆ.
ಇದುವರೆಗೆ ದೇಶದಲ್ಲಿ ಕೊರೊನಾ ಸೋಂಕಿಗೆ 1981 ಮಂದಿ ಬಲಿಯಾಗಿದ್ದಾರೆ.
ಒಂದೇ ದಿನ ಮುಂಬೈನಲ್ಲಿ 748 ಹೊಸ ಕೊರೊನಾ ಪ್ರಕರಣಗಳು ದಾಖಲು!
ಭಾರತದ ಕೊರೊನಾಲಜಿ (ಮೇ 9, ಶನಿವಾರ ಬೆಳಗ್ಗೆ):
ಒಟ್ಟು ಪ್ರಕರಣ: 59662
ಸಕ್ರಿಯ ಪ್ರಕರಣ: 39834
ಗುಣಮುಖ: 17847
ಮರಣ: 1981
ಅದೇ ಹೊತ್ತಿಗೆ ಕಳೆದ 24 ತಾಸುಗಳಲ್ಲಿ 3320 ಹೊಸ ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಹಾಗೆಯೇ ಕಳೆದ ಒಂದು ದಿನದಲ್ಲಿ 95 ಮಂದಿ ಸಾವಿಗೆ ಶರಣಾಗಿದ್ದಾರೆ.
ವಿಷಾನಿಲ ದುರಂತ: ಆಸ್ಪತ್ರೆಗಳಲ್ಲಿ ಅಸ್ವಸ್ಥರನ್ನು ಭೇಟಿಯಾದ ಆಂಧ್ರ ಉಪ ಮುಖ್ಯಮಂತ್ರಿ, ಸಚಿವರು
ಮಹಾರಾಷ್ಟ್ರ, ಗುಜರಾತ್ ಹಾಗೂ ದಿಲ್ಲಿಯಲ್ಲಿ ಗಣನೀಯವಾಗಿ ಸೋಂಕಿತರ ಪ್ರಮಾಣ ಹೆಚ್ಚುತ್ತಿರುವುದು ಕಳವಳಕಾರಿ ಅಂಶವಾಗಿದೆ.
ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ಮೇ 17ರ ವರೆಗೆ ವಿಸ್ತರಿಸಲಾಗಿದೆ. ಈ ನಡುವೆ ಲಾಕ್ಡೌನ್ ಜಾರಿಯಲ್ಲಿದ್ದರೂ ಹಲವಾರು ರಾಜ್ಯಗಳಲ್ಲಿ ನಿಬಂಧನೆಗಳಲ್ಲಿ ಸಡಿಲಿಕೆ ತರಲಾಗಿದೆ. ಆದರೆ ಮೇ 17ರ ಬಳಿಕವೂ ರೆಡ್ ಝೋನ್ಗಳಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿರುವ ಸಾಧ್ಯತೆಯಿದೆ.