ಆ್ಯಪ್ನಗರ

ವುಹಾನ್‌ನಿಂದ ಭಾರತಕ್ಕೆ ಕರೆತಂದು ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಿದ್ದವರು ಇಂದು ಮನೆಗೆ

ಚೀನಾದ ವುಹಾನ್‌ ನಗರದಿಂದ ಏರ್‌ಲಿಫ್ಟ್‌ ಮೂಲಕ ಕರೆ ತರಲಾದ ಭಾರತೀಯರ ಪೈಕಿ 406 ಜನರಿಗೆ ಸೋಂಕು ತಗುಲಿಲ್ಲಎನ್ನುವುದು ಖಚಿತಪಟ್ಟಿದ್ದು, ಅವರು ಸೋಮವಾರ ಮನೆಗೆ ಮರಳುವ ಸಾಧ್ಯತೆ ಇದೆ...

Vijaya Karnataka Web 17 Feb 2020, 9:24 am
ಹೊಸದಿಲ್ಲಿ: ಚೀನಾದ ವುಹಾನ್‌ ನಗರದಿಂದ ಏರ್‌ಲಿಫ್ಟ್‌ ಮೂಲಕ ಕರೆ ತರಲಾದ ಭಾರತೀಯರ ಪೈಕಿ 406 ಜನರಿಗೆ ಕೊರೊನಾ ಸೋಂಕು ತಗುಲಿಲ್ಲ ಎನ್ನುವುದು ಖಚಿತಪಟ್ಟಿದ್ದು, ಅವರು ಸೋಮವಾರ ಮನೆಗೆ ಮರಳುವ ಸಾಧ್ಯತೆ ಇದೆ.
Vijaya Karnataka Web Coronavirus


ಫೆ.1 ಮತ್ತು 2ರಂದು ಒಟ್ಟು 650 ಭಾರತೀಯರನ್ನು ಏರ್‌ ಇಂಡಿಯಾದ ವಿಶೇಷ ವಿಮಾನದಲ್ಲಿ ವುಹಾನ್‌ನಿಂದ ಹೊಸದಿಲ್ಲಿಗೆ ಕರೆತರಲಾಗಿತ್ತು. ಹರಿಯಾಣದ ಮನೇಸರ್‌ನಲ್ಲಿರುವ ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ಶಿಬಿರದಲ್ಲಿಅವರನ್ನು ಪ್ರತ್ಯೇಕವಾಗಿ ಇರಿಸಿ ನಿಯಮಿತ ತಪಾಸಣೆ ಕೈಗೊಳ್ಳಲಾಗಿತ್ತು.

ಭಾನುವಾರ 406 ಜನರ ರಕ್ತಮಾದರಿಯ ಅಂತಿಮ ತಪಾಸಣೆ ನಡೆಸಲಾಗಿದ್ದು, ನೆಗೆಟಿವ್‌ ಎಂದು ವರದಿ ಬಂದಿದೆ. ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಅವರನ್ನು ಸೋಮವಾರ ಮನೆಗೆ ಕಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕು ತಗುಲಿದ ಶಂಕೆ ಇರುವವರನ್ನು 14 ದಿನ ನಿಗಾದಲ್ಲಿಇರಿಸಲಾಗುತ್ತದೆ.

ಕೊರೋನಾ ವೈರಸ್‌: ಸಿಂಗಾಪುರ, ಕೌಲಲಾಂಪುರ, ಬ್ಯಾಂಕಾಕ್‌ ಪ್ರವಾಸ ರದ್ದು ಮಾಡುತ್ತಿರುವ ಪ್ರಯಾಣಿಕರು

ಚೀನಾದಲ್ಲಿಕೊರೊನಾ (ಕೋವಿಡ್‌-19) ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,770ಕ್ಕೆ ಏರಿಕೆಯಾಗಿದೆ. ಈವರೆಗೆ ದೇಶದಲ್ಲಿ70,548ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಚೀನಾಕ್ಕೆ ವೈದ್ಯಕೀಯ ನೆರವು ಕಲ್ಪಿಸಲು ಭಾರತ ಮುಂದಾಗಿದ್ದು, ಶೀಘ್ರದಲ್ಲಿಯೇ ಔಷಧ ಹಾಗೂ ಇತರ ವೈದ್ಯಕೀಯ ಪರಿಕರಗಳನ್ನು ಕಳಿಸಿಕೊಡುವುದಾಗಿ ಸರಕಾರ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ