ಆ್ಯಪ್ನಗರ

ಚೆನ್ನೈನ 100 ಶಾಲೆಗಳಲ್ಲಿ ಮಕ್ಕಳೇ ಬೆಳೆದ ತರಕಾರಿಯಲ್ಲಿ ಮಧ್ಯಾಹ್ನದ ಊಟ

ಚೆನ್ನೈನ ಸುಮಾರು 100 ಕಾರ್ಪೋರೇಷನ್ ಶಾಲೆಗಳು ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲಾ ಕೈತೋಟದಲ್ಲಿಯೇ ಬೆಳೆದ ತರಕಾರಿಗಳನ್ನು ಬೆಳೆಸಲು ನಿರ್ಧರಿಸಿವೆ.

TIMESOFINDIA.COM 3 Jul 2018, 3:05 pm
ಚೆನ್ನೈ: ಚೆನ್ನೈನ ಸುಮಾರು 100 ಕಾರ್ಪೋರೇಷನ್ ಶಾಲೆಗಳು ಮಧ್ಯಾಹ್ನದ ಬಿಸಿ ಊಟಕ್ಕೆ ಶಾಲಾ ಕೈತೋಟದಲ್ಲಿಯೇ ಬೆಳೆದ ತರಕಾರಿಗಳನ್ನು ಬೆಳೆಸಲು ನಿರ್ಧರಿಸಿವೆ.
Vijaya Karnataka Web Vegitables


ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಅಡಿಯಲ್ಲಿ ತಾರಸಿ ತೋಟಗಾರಿಕೆ( terrace gardening)ಯಲ್ಲಿ ಪರಿಣಿತಿ ಪಡೆದುಕೊಂಡಿರುವ ಸ್ವಸಹಾಯ ಸಂಘವೊಂದು ತರಕಾರಿ ಬೆಳೆಯುವುದರ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ.

ಇಕೋ ಕ್ಲಬ್ ಮತ್ತು ನ್ಯಾಷನಲ್ ಗ್ರೀನ್ ಕಾರ್ಪ್ಸ್ ಭಾಗವಾಗಿರುವ ಸುಮಾರು 40 ವಿದ್ಯಾರ್ಥಿಗಳಿಗೆ ಸ್ವಯಂ ಸೇವಾ ಸಂಘದ ಸದಸ್ಯರು ತರಬೇತಿ ನೀಡಲಿದ್ದಾರೆ. ಈ ಮಕ್ಕಳಿಗೆ ಬೀಜ ಮತ್ತು ಕುಂಡವನ್ನು ನೀಡಲಾಗುವುದು. ಕುಂಡ, ಶಾಲೆಯ ತಾರಸಿ ಅಥವಾ ಶಾಲಾ ಆವರಣದೊಳಗಿರುವ ಕೈತೋಟದಲ್ಲಿ ವಿದ್ಯಾರ್ಥಿಗಳು ತರಕಾರಿ ಬೆಳೆಯಲಿದ್ದಾರೆ, ಎಂದು ಶಿಕ್ಷಣ ಇಲಾಖೆಯ ಉಪ ಆಯುಕ್ತರಾಗಿರುವ ಮಗೇಶ್ವರಿ ರವಿಕುಮಾರ್ ತಿಳಿಸಿದ್ದಾರೆ.

ಮಕ್ಕಳಲ್ಲಿ ಕೃಷಿಯ ಮಹತ್ವ ಮತ್ತು ಹೊಣೆಗಾರಿಕೆ ಗುಣ ಬೆಳೆಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಕೆಲಸದಲ್ಲಿ ವಿದ್ಯಾರ್ಥಿಗಳ ಜತೆ ಶಿಕ್ಷಕರು ಸಹ ಕೈ ಜೋಡಿಸಲಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಬೆಳೆ ಬೆಳೆದರೆ ವಿದ್ಯಾರ್ಥಿಗಳ ಮಾರುಕಟ್ಟೆ(ಸ್ಟುಡೆಂಟ್ ಬಜಾರ್) ಪ್ರಾರಂಭಿಸಿ ಮಕ್ಕಳಿಗೆ ಆರ್ಥಿಕತೆ ಮತ್ತು ಕೃಷಿ ವ್ಯವಹಾರದ ಬಗ್ಗೆ ತಿಳಿಸುವ ಉದ್ದೇಶ ಸಹ ಇದೆ ಎಂದು ಶಿಕ್ಷಕಿಯೊಬ್ಬರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ