ಆ್ಯಪ್ನಗರ

ಭ್ರಷ್ಟ ನೌಕರರ ವಿಆರ್‌ಎಸ್‌ಗೆ ಯೋಗಿ ತಾಕೀತು

ಭ್ರಷ್ಟಾಚಾರ ನಿಗ್ರಹ ವಿಷಯದಲ್ಲಿ ಕೇಂದ್ರ ಮಾದರಿ ಅನುಸರಿಸುತ್ತಿರುವ ಉತ್ತರ ಪ್ರದೇಶ ಸರಕಾರ, ಭ್ರಷ್ಟ ಅಧಿಕಾರಿಗಳ ಸ್ವಯಂ ನಿವೃತ್ತಿಗೆ ತಾಕೀತು ಮಾಡಿದ್ದಾರೆ.

Agencies 21 Jun 2019, 5:00 am
ಲಖನೌ: ಭ್ರಷ್ಟಾಚಾರ ನಿಗ್ರಹ ವಿಷಯದಲ್ಲಿ ಕೇಂದ್ರ ಮಾದರಿ ಅನುಸರಿಸುತ್ತಿರುವ ಉತ್ತರ ಪ್ರದೇಶ ಸರಕಾರ, ಭ್ರಷ್ಟ ಅಧಿಕಾರಿಗಳ ಸ್ವಯಂ ನಿವೃತ್ತಿಗೆ ತಾಕೀತು ಮಾಡಿದ್ದಾರೆ.
Vijaya Karnataka Web 0112BN0328YOGI


ಅಭಿವೃದ್ಧಿ ವಿಷಯದಲ್ಲಿ ಅಡ್ಡಿ ಎನಿಸಿರುವ ಭ್ರಷ್ಟ ಅಧಿಕಾರಿಗಳನ್ನು ಸಹಿಸಿಕೊಂಡು ಸುಮ್ಮನಿರಲು ಸಾಧ್ಯವೇ ಇಲ್ಲ. ದಾರಿ ತಪ್ಪಿದ ಅಂತಹ ನೌಕರರ ಪಟ್ಟಿ ಸಿದ್ಧಪಡಿಸಿ, ವಿಪ್‌ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗುರುವಾರ ಆಡಳಿತ ಇಲಾಖೆಗೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಯಾವುದೇ ಇಲಾಖೆಯಲ್ಲಿ ಭ್ರಷ್ಟರು ಕಂಡು ಬಂದರೆ ಅಂಥವರ ವಿರುದ್ಧ ಮುಲಾಜಿಲ್ಲದೇ ಕ್ರಮ ಜರಿಗಿಸಿ. ಅಂಥವರ ಮುಂಬಡ್ತಿಗೆ ಶಿಫಾರಸು ಮಾಡಬೇಡಿ. ಸ್ವಯಂ ನಿವೃತ್ತಿ ಪಡೆಯಲು ಅವರ ಮೇಲೆ ಒತ್ತಡ ಹೇರಿ ಎಂದು ಸೂಚನೆ ನೀಡಿದರು. ಕೆಲಸದ ವೇಳೆಯಲ್ಲಿ ಮನಸೋ ಇಚ್ಛೆ ನಡೆದುಕೊಳ್ಳುವ ನೌಕರರ ವಿರುದ್ಧವೂ ಸಿಎಂ ಕಿಡಿಕಾರಿದರು. ಶೀಘ್ರವೇ ಎಲ್ಲ ಇಲಾಖೆಗಳಲ್ಲಿ ಬಯೋಮೆಟ್ರಿಕ್‌ ಹಾರಿ ಪದ್ಧತಿ ಜಾರಿಗೊಳಿಸುವುದಾಗಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ