ಹೊಸದಿಲ್ಲಿ: ತನ್ನ ಸಾರ್ವಭೌಮತೆಯನ್ನು ರಕ್ಷಿಸಿಕೊಳ್ಳಲಾಗದ ದೇಶಗಳು ನಮ್ಮ ನೆರೆಯೆ ರಾಷ್ಟ್ರದಂತೆ ಹೀನಾಯ ಸ್ಥಿತಿ ತಲುಪುತ್ತವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ವಿಡಡಿಯೋ ಕಾನ್ಫರೆನ್ಸ್ ಮೂಲಕ ಸಿಎಸ್ಆರ್ ವೆಬಿನಾರ್ ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಸ್ವಂತ ಬಲದ ಮೇಲೆ ರಸ್ತೆ ನಿರ್ಮಾಣ ಮಾಡಲೂ ಸಾಧ್ಯವಾಗದ ದೇಶ ತನ್ನ ಸಾರ್ವಭಮತೆಯನ್ನು ಗಿರವಿಗೆ ಇಟ್ಟಿದೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಚುಚ್ಚಿದರು.
ನಮ್ಮ ನೆರೆಯ ರಾಷ್ಟ್ರಕ್ಕೆ ಸ್ವಂತ ಬಲದ ಮೇಲೆ ರಸ್ತೆ ನಿರ್ಮಾಣ ಮಾಡಲೂ ಸಾಧ್ಯವಿಲ್ಲ. ತನ್ನ ಇಷ್ಟದ ದೇಶದೊಂದಿಗೆ ಸ್ವತಂತ್ರ್ಯವಾಗಿ ವ್ಯಾಪಾರ ಮಾಡಲೂ ಆ ರಾಷ್ಟ್ರ ಶಕ್ತವಾಗಿಲ್ಲ ಎಂದು ರಾಜನಾಥ್ ಕುಹುಕವಾಡಿದರು.
'ಭಾರತ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿದೆ'!
ಹೀಗಾಗಿ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ಭಾರತದ ಪ್ರಥಮ ಆದ್ಯತೆಯಾಗಿದ್ದು, ಇದೇ ಕಾರಣಕ್ಕೆ ಭಾರತ ವಿಶ್ವ ಭೂಪಟದಲ್ಲಿ ತನ್ನದೇ ಸ್ವಂತ ಬಲದ ಮೇಲೆ ರಾರಾಜಿಸುತ್ತಿದೆ ಎಂದು ರಾಜನಾಥ್ ಸಿಂಗ್ ನುಡಿದರು.
ಸಂಪೂರ್ಣ ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು: ಇಮ್ರಾನ್ಗೆ ರಾಜನಾಥ್ ಸಿಂಗ್ ತಿರುಗೇಟು!
ರಾಜನಾಥ್ ಸಿಂಗ್ ತಮ್ಮ ಭಾಷಣದಲ್ಲಿ ಚೀನಾದ ಮೇಲೆ ಪಾಕಿಸ್ತಾನದ ಅವಲಂಬನೆ ಕುರಿತು ವಿಶ್ಲೇಷಿಸಿದ್ದು, ಪಾಕಿಸ್ತಾನಕ್ಕೆ ಸಾರ್ವಭೌಮತೆ ಎಂಬುದೇ ಇಲ್ಲ ಎಂದು ಹೇಳುವವ ಮೂಲಕ ಸೂಕ್ತ ತಿರುಗೇಟು ನೀಡಿದ್ದಾರೆ.
ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಅಂಗವಾಗಿ ವಿಡಡಿಯೋ ಕಾನ್ಫರೆನ್ಸ್ ಮೂಲಕ ಸಿಎಸ್ಆರ್ ವೆಬಿನಾರ್ ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಸ್ವಂತ ಬಲದ ಮೇಲೆ ರಸ್ತೆ ನಿರ್ಮಾಣ ಮಾಡಲೂ ಸಾಧ್ಯವಾಗದ ದೇಶ ತನ್ನ ಸಾರ್ವಭಮತೆಯನ್ನು ಗಿರವಿಗೆ ಇಟ್ಟಿದೆ ಎಂದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ಚುಚ್ಚಿದರು.
ನಮ್ಮ ನೆರೆಯ ರಾಷ್ಟ್ರಕ್ಕೆ ಸ್ವಂತ ಬಲದ ಮೇಲೆ ರಸ್ತೆ ನಿರ್ಮಾಣ ಮಾಡಲೂ ಸಾಧ್ಯವಿಲ್ಲ. ತನ್ನ ಇಷ್ಟದ ದೇಶದೊಂದಿಗೆ ಸ್ವತಂತ್ರ್ಯವಾಗಿ ವ್ಯಾಪಾರ ಮಾಡಲೂ ಆ ರಾಷ್ಟ್ರ ಶಕ್ತವಾಗಿಲ್ಲ ಎಂದು ರಾಜನಾಥ್ ಕುಹುಕವಾಡಿದರು.
'ಭಾರತ ತನ್ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಬದ್ಧವಾಗಿದೆ'!
ಹೀಗಾಗಿ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ಭಾರತದ ಪ್ರಥಮ ಆದ್ಯತೆಯಾಗಿದ್ದು, ಇದೇ ಕಾರಣಕ್ಕೆ ಭಾರತ ವಿಶ್ವ ಭೂಪಟದಲ್ಲಿ ತನ್ನದೇ ಸ್ವಂತ ಬಲದ ಮೇಲೆ ರಾರಾಜಿಸುತ್ತಿದೆ ಎಂದು ರಾಜನಾಥ್ ಸಿಂಗ್ ನುಡಿದರು.
ಸಂಪೂರ್ಣ ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು: ಇಮ್ರಾನ್ಗೆ ರಾಜನಾಥ್ ಸಿಂಗ್ ತಿರುಗೇಟು!
ರಾಜನಾಥ್ ಸಿಂಗ್ ತಮ್ಮ ಭಾಷಣದಲ್ಲಿ ಚೀನಾದ ಮೇಲೆ ಪಾಕಿಸ್ತಾನದ ಅವಲಂಬನೆ ಕುರಿತು ವಿಶ್ಲೇಷಿಸಿದ್ದು, ಪಾಕಿಸ್ತಾನಕ್ಕೆ ಸಾರ್ವಭೌಮತೆ ಎಂಬುದೇ ಇಲ್ಲ ಎಂದು ಹೇಳುವವ ಮೂಲಕ ಸೂಕ್ತ ತಿರುಗೇಟು ನೀಡಿದ್ದಾರೆ.