ಆ್ಯಪ್ನಗರ

ಸ್ಮಾರ್ಟ್‌ ಆಗದ ದೇಶದ ನಗರಗಳು

ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ನಗರಗಳ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ 'ಸ್ಮಾರ್ಟ್‌ ಸಿಟಿ ಯೋಜನೆ' ಅನುಷ್ಠಾನದಲ್ಲಿ ಹಿಂದೆ ಬಿದ್ದಿದೆ.

Vijaya Karnataka 18 Sep 2018, 10:18 am
ಹೊಸದಿಲ್ಲಿ: ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ನಗರಗಳ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ 'ಸ್ಮಾರ್ಟ್‌ ಸಿಟಿ ಯೋಜನೆ' ಅನುಷ್ಠಾನದಲ್ಲಿ ಹಿಂದೆ ಬಿದ್ದಿದೆ. ಕರ್ನಾಟಕದ ಏಳು ಸೇರಿದಂತೆ ಆಯ್ಕೆಯಾಗಿರುವ ದೇಶದ 99 ನಗರಗಳು ಅನುದಾನ ಬಿಡುಗಡೆ ಹಾಗೂ ಕಾಮಗಾರಿಗಳ ಅನುಮೋದನೆಯಲ್ಲಿನ ವಿಳಂಬ, ನಿಧಾನಗತಿಯ ಟೆಂಡರ್‌ ಮತ್ತು ಗುತ್ತಿಗೆ ಪ್ರಕ್ರಿಯೆ ಹಾಗೂ ನುರಿತ ಅಧಿಕಾರಿಗಳ ಮತ್ತು ತಜ್ಞರ ಕೊರತೆಯಿಂದ ಸೊರಗಿವೆ.
Vijaya Karnataka Web smart city


ಇದುವರೆಗೂ 99 ನಗರಗಳು ಆಯ್ಕೆಯಾಗಿದ್ದು, ಇನ್ನೊಂದು ನಗರ ಸದ್ಯದಲ್ಲೇ ಆಯ್ಕೆಯಾಗಲಿದೆ. ಒಟ್ಟು 2,03,979 ಕೋಟಿ ರೂ. ಮೊತ್ತದ ಈ ಯೋಜನೆಯಲ್ಲಿ ಇದುವರೆಗೂ 30,675 ಕೋಟಿ ರೂ. ಮೊತ್ತದ ಕಾಮಗಾರಿಗಳಷ್ಟೇ ಅನುಷ್ಠಾನಗೊಂಡಿವೆ. ಯೋಜನಾ ನಿರ್ವಹಣೆ ಸೇರಿದಂತೆ ನಾನಾ ಅಡೆತಡೆಗಳಿಂದ ಯೋಜನೆ ವಿಳಂಬಗತಿಯಲ್ಲಿ ಸಾಗಿದೆ.

ಸಮಯ ಬೇಕಾಗುತ್ತೆ: ಯೋಜನೆಯಲ್ಲಿ ಸಾವಿರಾರು ಕೋಟಿ ರೂ.ಹರಿದಾಡುವ ಕಾರಣ ಸ್ಪೆಷಲ್‌ ಪರ್ಪಸ್‌ ವೆಹಿಕಲ್‌ (ಎಸ್‌ಪಿವಿ) ಹೆಸರಿನಲ್ಲಿ ನೋಂದಾಯಿತ ಕಂಪನಿ ಸ್ಥಾಪಿಸಿ ಪೂರ್ಣಾವಧಿ ಐಎಎಸ್‌ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುವುದರಿಂದ ಹಿಡಿದು ಯೋಜನೆ ಮೇಲ್ವಿಚಾರಣೆಗೆ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಕನ್ಸಲ್ಟೆಂಟ್‌ಗಳ ಆಯ್ಕೆವರೆಗೆ ನಾನಾ ಬಗೆಯ ಆಡಳಿತಾತ್ಮಕ ಕಸರತ್ತು ಇಲ್ಲಿ ನಡೆಯುತ್ತದೆ. ಈ ಎಲ್ಲ ಪ್ರಕ್ರಿಯೆಗಳಿಗೆ 12ರಿಂದ 18 ತಿಂಗಳು ಹಿಡಿಯಲಿದ್ದು, ನಂತರವಷ್ಟೇ ನೇಮಕಾತಿ ಶುರುವಾಗುತ್ತದೆ. ಹೀಗಾಗಿಯೇ ಅನುಷ್ಠಾನ ವೇಗ ಪಡೆಯುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತಜ್ಞರ ಕೊರತೆ: ಚಂಡೀಗಢ ಹಾಗೂ ಕೆಲವು ಉಪನಗರಗಳನ್ನು ಹೊರತುಪಡಿಸಿದರೆ ನಮ್ಮಲ್ಲಿ ಸ್ಮಾರ್ಟ್‌ ಸಿಟಿ ನಿರ್ಮಿಸಿದ ಅನುಭವ ತಜ್ಞರಿಗಿಲ್ಲ. ನಗರಗಳ ಭೌಗೋಳಿಕ ಸಂರಚನೆ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಸುಸ್ಥಿರ ನಗರಾಭಿವೃದ್ಧಿ ಯೋಜನಾ ನಿರ್ವಹಣೆಯಲ್ಲಿ ತಜ್ಞರ ಕೊರತೆ ಇರುವ ಕಾರಣ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ವೇಗ ಪಡೆಯುತ್ತಿಲ್ಲ ಎನ್ನುತ್ತಾರೆ ಜೆಎಲ್‌ಎಲ್‌ ಇಂಡಿಯಾದ ಸಿಇಒ ರಮೇಶ್‌ ನಾಯರ್‌.

ಸ್ಮಾರ್ಟ್ ಸಿಟಿ ಅಂಕಿ ಅಂಶ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ