ಆ್ಯಪ್ನಗರ

925 ಕೋಟಿ ರೂ.ಗಳ ಬೃಹತ್‌ ದರೋಡೆ ಯತ್ನ ತಪ್ಪಿಸಿದ ಪೊಲೀಸ್‌ ಪೇದೆ

ಯುವ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬರ ಸಕಾಲಿಕ ಪ್ರಯತ್ನದಿಂದ 925 ಕೋಟಿ ರೂ.ಗಳ ಬೃಹತ್‌ ಬ್ಯಾಂಕ್‌ ದರೋಡೆ ನಡೆಯುವುದು ತಪ್ಪಿದೆ.

Vijaya Karnataka Web 12 Feb 2018, 12:48 pm
ಜೈಪುರ: ಯುವ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬರ ಸಕಾಲಿಕ ಪ್ರಯತ್ನದಿಂದ 925 ಕೋಟಿ ರೂ.ಗಳ ಬೃಹತ್‌ ಬ್ಯಾಂಕ್‌ ದರೋಡೆ ನಡೆಯುವುದು ತಪ್ಪಿದೆ.
Vijaya Karnataka Web countrys biggest ever rs 925 crore bank heist bid foiled in jaipur
925 ಕೋಟಿ ರೂ.ಗಳ ಬೃಹತ್‌ ದರೋಡೆ ಯತ್ನ ತಪ್ಪಿಸಿದ ಪೊಲೀಸ್‌ ಪೇದೆ


13 ಮಂದಿ ಮುಸುಕುಧಾರಿ ಸಶಸ್ತ್ರ ಡಕಾಯಿತರು ಜೈಪುರದ ಬ್ಯಾಂಕ್‌ ಒಂದಕ್ಕೆ ಮಧ್ಯರಾತ್ರಿ 2:30ರ ವೇಳೆಗೆ ದಾಳಿಯಿಟ್ಟಿದ್ದಾರೆ. ಬ್ಯಾಂಕಿನ ಕಾವಲುಗಾರನನ್ನು ಥಳಿಸಿ ಶಟರ್‌ ತೆರೆಯಲು ಗುಂಡು ಹಾರಿಸಿದ್ದಾರೆ.

ಈ ಗದ್ದಲ ಕೇಳಿ ತಕ್ಷಣ ಜಾಗೃತರಾದ ಕಾನ್‌ಸ್ಟೇಬಲ್‌ ಸೀತಾರಾಂ ಡಕಾಯಿತರತ್ತ ಗುಂಡು ಹಾರಿಸಿದರು. ಇದರಿಂದ ಬೆದರಿದ ದರೋಡೆಕೋರರು ಕತ್ತಲಲ್ಲಿ ಪರಾರಿಯಾದರು.

'ದರೋಡೆಕೋರರ ತಂಡ ಶಟರ್‌ ಮುರಿಯಲು ಯತ್ನಿಸುತ್ತಿದ್ದಾಗ ಸೀತಾರಾಂ ಒಳಗಿನಿಂದ ಈ ಕೃತ್ಯವನ್ನು ಗಮನಿಸಿದರು. ತಕ್ಷಣ ಗುಂಡು ಹಾರಿಸಿ ಡಕಾಯಿತರನ್ನು ಬೆದರಿಸಿದರು' ಎಂದು ಕ್ರೈಂ ವಿಭಾಗದ ಎಸಿಪಿ ಪ್ರಫುಲ್‌ ಕುಮಾರ್‌ ತಿಳಿಸಿದರು.

ಬಳಿಕ ಅಲಾರಾಂ ಮೊಳಗಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ಪೊಲೀಸರ ತಂಡ ಧಾವಿಸಿತು. ಪೊಲೀಸ್‌ ನಿಯಂತ್ರಣ ಕೊಠಡಿ ಮತ್ತು ವೈರ್‌ಲೆಸ್‌ ಕಚೇರಿಗೆ ಮಾಹಿತಿ ನೀಡಲಾಯಿತು. ಅನಂತರ ಇಡೀ ನಗರದಲ್ಲಿ ನಾಕಾಬಂದಿ ಹಾಕಲಾಯಿತು. ದರೋಡೆಕೋರರನ್ನು ಗುರುತಿಸಲು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಯಿತು ಎಂದು ಎಸಿಪಿ ಮಾಹಿತಿ ನೀಡಿದರು.

'ಇದು ಬ್ಯಾಂಕಿನ ಕೇಂದ್ರೀಕೃತ ಖಜಾನೆಯಾಗಿದ್ದು,ರಾಜ್ಯದ ಇತರ ಶಾಖೆಗಳಿಗೆ ಇಲ್ಲಿಂದಲೇ ಹಣ ಪೂರೈಸಲಾಗುತ್ತದೆ. ವಾರದ ಮೊದಲ ದಿನ (ಸೋಮವಾರ) ಈ ಬ್ಯಾಂಕ್‌ನಲ್ಲಿ ಲಭ್ಯವಿರುವ ಹಣದ ಮೊತ್ತದ ಬಗ್ಗೆ ಸ್ಪಷ್ಟ ಮಾಹಿತಿ ಇದ್ದ ಡಕಾಯಿತರು ಪೂರ್ವನಿಯೋಜಿತವಾಗಿಯೇ ಈ ಕೃತ್ಯಕ್ಕೆ ಕೈಹಾಕಿದ್ದಾರೆ' ಎಂದು ಕುಮಾರ್ ತಿಳಿಸಿದರು.

'ಈ ಬ್ಯಾಂಕ್ ಶಾಖೆ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿದ ಭದ್ರತಾ ನಿಯಮಗಳನ್ನು ಸಮರ್ಪಕವಾಗಿ ಪಾಲಿಸುತ್ತಿರಲಿಲ್ಲ. ಪ್ರಾಥಮಿಕ ತನಿಖೆಗಳ ಪ್ರಕಾರ, ಬ್ಯಾಂಕ್‌ನಲ್ಲಿ 'ಟೈಮ್‌ ಲಾಕ್‌' ಇರಲಿಲ್ಲ. ಕರೆನ್ಸಿ ಚೆಸ್ಟ್‌ ಇರುವ ಶಾಖೆಗಳಲ್ಲಿ ಟೈಮ್‌ ಲಾಕ್‌ ಇರುವುದು ಕಡ್ಡಾಯ. ಶಟರನ್ನೂ ಸರಿಯಾಗಿ ಮುಚ್ಚಿರಲಿಲ್ಲ. ಸ್ಟ್ರಾಂಗ್‌ರೂಂ ಒಳಗೆ ಇಡಬೇಕಾದ ಹಣವನ್ನು ಹೊರಗೆ ಇಡಲಾಗಿತ್ತು' ಎಂದು ಹಿರಿಯ ಪೊಲೀಸ್‌ ಅಧಿಕಾರಿ ವಿವರಿಸಿದರು. ಕಳೆದ ಸೋಮವಾರ ಈ ಘಟನೆ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ