ಆ್ಯಪ್ನಗರ

ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ

ಭಿಲ್ವಾರಾ ಜಿಲ್ಲೆಯ ಮಾಲ್ ಕಾ ಖೇರಾದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಸುರೇಶ್ ಮತ್ತು ರತ್ನಿ ಶವ ಸೀಲಿಂಗ್ ಫ್ಯಾನ್‌ನಲ್ಲಿ ತೂಗುತ್ತಿತ್ತು. ನಾಲ್ಕುವರೆ ವರ್ಷದ ಬಾಲಕಿ ಮತ್ತು ಒಂದುವರೆ ವರ್ಷದ ಬಾಲಕನ ದೇಹ ನೆಲದ ಮೇಲೆ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Times Now 9 Jun 2019, 3:21 pm
ಭಿಲ್ವಾರಾ: ಇಬ್ಬರು ಮಕ್ಕಳನ್ನು ಕೊಂದು ತಂದೆ- ತಾಯಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
Vijaya Karnataka Web Suicide


ಮೃತರನ್ನು ಸುರೇಶ್, ರತ್ನಿ , ಪಾಯಲ್ ಮತ್ತು ಯೋಗೇಶ್ ಎಂದು ಗುರುತಿಸಲಾಗಿದೆ.

ಭಿಲ್ವಾರಾ ಜಿಲ್ಲೆಯ ಮಾಲ್ ಕಾ ಖೇರಾದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಸುರೇಶ್ ಮತ್ತು ರತ್ನಿ ಶವ ಸೀಲಿಂಗ್ ಫ್ಯಾನ್‌ನಲ್ಲಿ ತೂಗುತ್ತಿತ್ತು. ನಾಲ್ಕುವರೆ ವರ್ಷದ ಬಾಲಕಿ ಮತ್ತು ಒಂದುವರೆ ವರ್ಷದ ಬಾಲಕನ ದೇಹ ನೆಲದ ಮೇಲೆ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು ಸಾವಿನ ನಿರ್ಧಾರಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ.

ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಮಗನನ್ನು ನೇಣಿಗೇರಿಸುವ ವೀಡಿಯೋ ವೈರಲ್ ಆದ ಬೆನ್ನಲ್ಲೇ ಅದನ್ನೇ ಹೋಲುವ ಈ ಘಟನೆ ನಡೆದಿದೆ. ಚೀಟಿ ವ್ಯವಹಾರದಲ್ಲಿನ ನಷ್ಟ, ಸಾಲಗಾರರ ಕಾಟದಿಂದಾಗಿ ಸಂಪೂರ್ಣ ಕುಟುಂಬ ಆತ್ಮಹತ್ಯೆಗೆ ನಿರ್ಧರಿಸಿತ್ತು. ಕಿರುಕುಳ ಕೊಟ್ಟವರ ಹೆಸರನ್ನು ದಾಖಲಿಸಿ ಡೆತ್‌ನೋಟ್‌ ಬರೆದಿಟ್ಟಿದ್ದರು. ಸಾಕ್ಷ್ಯವಾಗಿ ಆತ್ಮಹತ್ಯೆಯ ವಿಡಿಯೋವನ್ನೂ ಬಿಟ್ಟು ಹೋಗಲು ನಿರ್ಧರಿಸಿದ್ದರು. ಇದನ್ನೆಲ್ಲಾ ಇಡೀ ಕುಟುಂಬ ಕುಳಿತು ಮಾತನಾಡಿಕೊಂಡಿತ್ತು. ಕೊನೆಗೆ ಒಬ್ಬೊಬ್ಬರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು. ಮೊದಲು ಮಗನಿಗೆ ಅಪ್ಪನೇ ನೇಣಿಗೆ ಏರಿಸುವುದು, ನಂತರ ತಾಯಿ ನೇಣಿಗೆ ಏರುವುದು, ಬಳಿಕ ತಂದೆ. ಎಲ್ಲರ ಆತ್ಮಹತ್ಯೆಯನ್ನೂ ವಿಡಿಯೋ ಮಾಡುವ ಜವಾಬ್ದಾರಿಯನ್ನು ಮಗಳು ಹೊತ್ತುಕೊಂಡಿದ್ದರಿಂದ ಈಕೆ ಎಲ್ಲರಿಗಿಂತ ಕೊನೆಗೆ ನೇಣಿಗೆ ಕೊರಳೊಡ್ಡುವುದೆಂದು ತೀರ್ಮಾನ ಮಾಡಿದ್ದರು. ಆದರೆ ತಮ್ಮ ನೇಣಿನ ಕುಣಿಕೆಯಲ್ಲಿ ಒದ್ದಾಡಿದ್ದು, ತಾಯಿ ಅದೇ ಕುಣಿಕೆಯಲ್ಲಿ ಪ್ರಾಣ ಬಿಟ್ಟ ನಂತರ ಮಗಳು ಹೆದರಿಬಿಟ್ಟಳು. ಮುಂದಿನ ಸರದಿ ತಂದೆಯದಿತ್ತು. ತಂದೆಯನ್ನು ಕಾಡಿ, ಬೇಡಿ, ಗೋಳಾಡಿ ನೇಣಿಗೆ ಹೋಗದಂತೆ ತಡೆಯಲು ಯತ್ನಿಸಿದಳು. ಆದರೂ ತಂದೆ ನೇಣಿಗೆ ಕೊರಳೊಡ್ಡಿಯೇ ಬಿಟ್ಟರು. ಹೆದರಿದ ಮಗಳು ಮನೆ ಬಾಗಿಲು ಹೊರಗೆ ಹೋಗಿ ಜೋರಾಗಿ ಕಿರುಚಿಕೊಂಡಳು. ಆಗ ಸಮಯ ಮಧ್ಯರಾತ್ರಿ 2.30. ಅಕ್ಕ ಪಕ್ಕದವರ ಮನೆ ದೀಪಗಳು ಹೊತ್ತಿಕೊಳ್ಳುತ್ತಿದ್ದಂತೆ ತಂದೆ ಸುರೇಶ್‌ ಬಾಬು ನೇಣಿನ ಕುಣಿಕೆಯಿಂದ ಹೊರಗೆ ಬಂದರು. ಅಪ್ಪ, ಮಗಳು ಬದುಕುಳಿದರು. ಆದರೆ ಈ ವೀಡಿಯೋ ಯಾರದ್ದೋ ಕೈಗೆ ಸಿಕ್ಕಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ