ಆ್ಯಪ್ನಗರ

ಚುಕುಬುಕು ರೈಲಲ್ಲೇ ದಾಂಪತ್ಯಗೀತ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ ಮದುವೆ ಸ್ಥಳವನ್ನು ನಿರ್ಧರಿಸುವುದು ಮಾತ್ರ ಮನುಷ್ಯರೇ. ಇತ್ತೀಚಿಗೆ ವಿಭಿನ್ನ ರೀತಿಯಲ್ಲಿ ಮದುವೆಯಾಗುವುದು ಟ್ರೆಂಡ್‌ ಆಗುತ್ತಿದೆ. ಇಲ್ಲೊಂದು ಯುವ ಜೋಡಿಯು ಚಲಿಸುತ್ತಿರುವ ರೈಲಿನಲ್ಲಿ ಹೊಸ ಬಾಳಿಗೆ ಮುನ್ನುಡಿ ಬರೆದಿದೆ. ಇದಕ್ಕೆ ಉತ್ತರ ಭಾರತ ಯಾತ್ರೆ ಕೈಗೊಂಡಿರುವ ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ ಸ್ಥಾಪಕ ಶ್ರೀಶ್ರೀ ರವಿಶಂಕರ್‌ ಗುರೂಜಿ ಸಾಕ್ಷಿಯಾಗಿರುವುದು ಮತ್ತೊಂದು ವಿಶೇಷ.

Vijaya Karnataka 2 Mar 2018, 11:22 am

ಹೊಸದಿಲ್ಲಿ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ ಮದುವೆ ಸ್ಥಳವನ್ನು ನಿರ್ಧರಿಸುವುದು ಮಾತ್ರ ಮನುಷ್ಯರೇ. ಇತ್ತೀಚಿಗೆ ವಿಭಿನ್ನ ರೀತಿಯಲ್ಲಿ ಮದುವೆಯಾಗುವುದು ಟ್ರೆಂಡ್‌ ಆಗುತ್ತಿದೆ. ಇಲ್ಲೊಂದು ಯುವ ಜೋಡಿಯು ಚಲಿಸುತ್ತಿರುವ ರೈಲಿನಲ್ಲಿ ಹೊಸ ಬಾಳಿಗೆ ಮುನ್ನುಡಿ ಬರೆದಿದೆ. ಇದಕ್ಕೆ ಉತ್ತರ ಭಾರತ ಯಾತ್ರೆ ಕೈಗೊಂಡಿರುವ ಬೆಂಗಳೂರಿನ ಆರ್ಟ್‌ ಆಫ್‌ ಲಿವಿಂಗ್‌ ಸ್ಥಾಪಕ ಶ್ರೀಶ್ರೀ ರವಿಶಂಕರ್‌ ಗುರೂಜಿ ಸಾಕ್ಷಿಯಾಗಿರುವುದು ಮತ್ತೊಂದು ವಿಶೇಷ.

Vijaya Karnataka Web couple ties knot on board train wedding solemnised by sri sri
ಚುಕುಬುಕು ರೈಲಲ್ಲೇ ದಾಂಪತ್ಯಗೀತ


ಫಾರ್ಮಾಸಿಸ್ಟ್‌ ಸಚಿನ್‌ ಕುಮಾರ್‌ ಮತ್ತು ತೆರಿಗೆ ಇಲಾಖೆಯ ಉದ್ಯೋಗಿ ಜ್ಯೋತ್ಸ್ನಾ ಸಿಂಗ್‌ ಪಟೇಲ್‌ ಅವರು ಉತ್ತರ ಪ್ರದೇಶದ ಗೋರಖ್‌ಪುರ ಮತ್ತು ಲಖನೌ ನಡುವೆ ಹೂವುಗಳಿಂದ ಶೃಂಗರಿಸಿದ ಚಲಿಸುವ ವಿಶೇಷ ರೈಲಿನಲ್ಲಿ ಸಪ್ತಪದಿ ತುಳಿದಿದ್ದಾರೆ.

ಉತ್ತರ ಪ್ರದೇಶದ ಕೌಸಂಬಿಯ ಉದಾನಿ ಖುರ್ದ್‌ ಹಳ್ಳಿಯ ನಿವಾಸಿಯಾಗಿರುವ ಕುಮಾರ್‌ ಪ್ರಸ್ತುತ ಬಾದೊಹಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪಟೇಲ್‌ ಕೇಂದ್ರ ತೆರಿಗೆ ಇಲಾಖೆಯ ನೌಕರರಾಗಿದ್ದಾರೆ. ಚಲಿಸುತ್ತಿರುವ ರೈಲಿನಲ್ಲಿ ಮದುವೆಯಾಗಿರುವುದು ಭಾರತದಲ್ಲಿ ಇದೇ ಮೊದಲು.

............

'ಜನರು ಸಾಲ-ಸೋಲ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆಯಾಗುವ ಬದಲು, ಈ ರೀತಿಯಾಗಿ ಸರಳವಾಗಿ ಮದುವೆಯಾಗುವುದು ಒಳ್ಳೆಯದು.'
- ಶ್ರೀಶ್ರೀ ರವಿಶಂಕರ್‌

'ಭಾರತೀಯ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ಚಲಿಸುವ ರೈಲಿನಲ್ಲಿ ಮದುವೆ ನಡೆದಿದೆ, ಅದೂ ಶ್ರೀಶ್ರೀ ರವಿಶಂಕರ್‌ ಗುರೂಜಿ ಅವರ ಸಮ್ಮುಖದಲ್ಲಿ. ಹೊಸ ಜೋಡಿಗೆ ಶುಭಹಾರೈಕೆಗಳು.'
- ಪಿಯೂಶ್‌ ಗೋಯಲ್‌, ರೈಲ್ವೆ ಸಚಿವ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ