ಆ್ಯಪ್ನಗರ

ಹಸುವಿನ ಮೈ ಸವರಿದರೆ ಉಸಿರಾಟದ ಸಮಸ್ಯೆ ಮಾಯ!

ರಾವತ್‌ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕಾಲೆಳೆದಿದ್ದಾರೆ. ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕಚೇರಿಯು, '' ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಸಾಮಾನ್ಯ ಜನರ ನಂಬಿಕೆ ಏನಿದೆ ಅದನ್ನು ಸಿಎಂ ರಾವತ್‌ ಮತ್ತೊಮ್ಮೆ ಉಲ್ಲೇಖಿಸಿದ್ದಾರೆ, ಅಷ್ಟೇ '', ಎಂದು ಸಮರ್ಥಿಸಿಕೊಂಡಿದೆ.

Agencies 27 Jul 2019, 5:00 am
ಡೆಹ್ರಾಡೂನ್‌: ''ನಿಮಗೆ ಉಸಿರಾಟದ ಸಮಸ್ಯೆ ಇದೆಯೇ? ಹಾಗಿದ್ದರೆ ಗೋವಿನ ಮೈ ಸವರಿದರೆ ಗುಣಮುಖರಾಗುತ್ತೀರಿ,''ಧಿ ಹೀಗೆಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಸಲಹೆ ಮಾಡಿದ್ದಾರೆ.
Vijaya Karnataka Web cow only animal that exhales oxygen rawat
ಹಸುವಿನ ಮೈ ಸವರಿದರೆ ಉಸಿರಾಟದ ಸಮಸ್ಯೆ ಮಾಯ!


ಗೋವಿನ ಹಾಲು ಮತ್ತು ಗೋಮೂತ್ರದಲ್ಲಿರುವ ವೈದ್ಯಕೀಯ ಅಂಶಗಳ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಗೋವಿನ ಸನಿಹದಲ್ಲಿ ವಾಸಿಸುವ ಮೂಲಕ ಕ್ಷಯರೋಗ ಕೂಡ ಗುಣಪಡಿಸಿಕೊಳ್ಳಬಹುದು. ಯಾಕೆಂದರೆ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಸೂಸುವ ಏಕೈಕ ಪ್ರಾಣಿ ಎಂದು ಗೋವು ಮಾತ್ರ. ಹೀಗಾಗಿ ಗೋವು ಇರುವ ಸುತ್ತಲಿನ ವಾತಾವರಣದಲ್ಲಿ ಯಥೇಚ್ಛವಾಗಿ ಆಮ್ಲಜನಕ ತುಂಬಿಕೊಂಡಿರುತ್ತದೆ ಎಂದು ಹೇಳಿದ್ದಾರೆ.

ರಾವತ್‌ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಕಾಲೆಳೆದಿದ್ದಾರೆ. ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕಚೇರಿಯು, '' ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಸಾಮಾನ್ಯ ಜನರ ನಂಬಿಕೆ ಏನಿದೆ ಅದನ್ನು ಸಿಎಂ ರಾವತ್‌ ಮತ್ತೊಮ್ಮೆ ಉಲ್ಲೇಖಿಸಿದ್ದಾರೆ, ಅಷ್ಟೇ '', ಎಂದು ಸಮರ್ಥಿಸಿಕೊಂಡಿದೆ.

ನೈನಿತಾಲ್‌ ಸಂಸದ ಹಾಗೂ ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಅಜಯ್‌ ಭಟ್‌ ಇತ್ತೀಚೆಗೆ ನೀಡಿದ್ದ ಹೇಳಿಕೆ ಕೂಡ ಭಾರಿ ವೈರಲ್‌ ಆಗಿತ್ತು. ಬಾಗೇಶ್ವರ್‌ ಜಿಲ್ಲೆಯ ಗರುಡ ಗಂಗಾ ನದಿಯಲ್ಲಿನ ನೀರನ್ನು ನಿತ್ಯ ಸೇವಿಸುವುದರಿಂದ ಗರ್ಭಿಣಿಯರು ಸಿಸೇರಿಯನ್‌ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ತಡೆಯಬಹುದು ಎಂದು ಅವರು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ