ಆ್ಯಪ್ನಗರ

ಗೋ ಕಲ್ಯಾಣಕ್ಕೆ ಗೋವುಗಳಿಂದಲೇ ನಿಧಿ ಸಂಗ್ರಹ

ಗುಜರಾತ್ ಸರಕಾರ, ಅಲ್ಲಿನ ಪಶುಶಾಲೆಗಳಲ್ಲಿ ಸಗಣಿ ಮತ್ತು ಗೋಮೂತ್ರದ ಬ್ಯಾಂಕ್‌ ಅನ್ನು ಆರಂಭಿಸಲಿದೆ. ಇದರಿಂದ ಸಂಗ್ರಹವಾಗುವ ಆದಾಯವನ್ನು ಲಕ್ಷಾಂತರ ಸಂಖ್ಯೆಯಲ್ಲಿರುವ ಬೀಡಾಡಿ ಹಸುಗಳನ್ನು ಪಾಲನೆ ಪೋಷಣೆಗಾಗಿ ಬಳಸಲು ಸರಕಾರ ಉದ್ದೇಶಿಸಿದೆ. ಆ ಮೂಲಕ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುವುದನ್ನು ತಡೆಯುವ ಗುರಿ ಕಮಲ ಸರಕಾರದ್ದು. ಸಂಗ್ರಹಿಸಿದ ಸಗಣಿ ಮತ್ತು ಮೂತ್ರವನ್ನು ಸಾವಯವ ಗೊಬ್ಬರ, ನೈಸರ್ಗಿಕ ಕೀಟನಾಶಕ ಮತ್ತು ಆಯುರ್ವೇದ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಕಚ್ಚಾ ವಸ್ತುವಾಗಿ ಮಾರಾಟ ಮಾಡಲಾಗುವುದು.

TIMESOFINDIA.COM 15 Dec 2018, 4:55 pm
ಗಾಂಧಿ ನಗರ: ತಮ್ಮ ಕಲ್ಯಾಣಕ್ಕೆ ತಾವೇ ನಿಧಿ ಸಂಗ್ರಹಿಸಲು ಹೊರಟಿವೆ ಗುಜರಾತಿನ ಹಸುಗಳು. ಹೌದು ಗೋ ಮೂತ್ರ ಮತ್ತು ಸಗಣಿಯನ್ನು ಮಾರಿ, ರಾಜ್ಯದಲ್ಲಿರುವ ಗೋಶಾಲೆಗಳ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಗೋ ಹತ್ಯೆಯನ್ನು ತಡೆಯಲು ಅಲ್ಲಿನ ಸರಕಾರ ನಿರ್ಧರಿಸಿದೆ.
Vijaya Karnataka Web Cow urine


ಜೀವ- ದಯಾ ಅನುಯಾಯಿಗಳಿಂದ ಪ್ರೇರಿತವಾಗಿರುವ ರಾಜ್ಯ ಸರಕಾರ, ಅಲ್ಲಿನ ಪಶುಶಾಲೆಗಳಲ್ಲಿ ಸಗಣಿ ಮತ್ತು ಗೋಮೂತ್ರದ ಬ್ಯಾಂಕ್‌ ಅನ್ನು ಆರಂಭಿಸಲಿದೆ. ಇದರಿಂದ ಸಂಗ್ರಹವಾಗುವ ಆದಾಯವನ್ನು ಲಕ್ಷಾಂತರ ಸಂಖ್ಯೆಯಲ್ಲಿರುವ ಬೀಡಾಡಿ ಹಸುಗಳನ್ನು ಪಾಲನೆ ಪೋಷಣೆಗಾಗಿ ಬಳಸಲು ಸರಕಾರ ಉದ್ದೇಶಿಸಿದೆ. ಆ ಮೂಲಕ ಹಸುಗಳನ್ನು ಕಸಾಯಿಖಾನೆಗೆ ಸಾಗಿಸುವುದನ್ನು ತಡೆಯುವ ಗುರಿ ಕಮಲ ಸರಕಾರದ್ದು.

ಸಂಗ್ರಹಿಸಿದ ಸಗಣಿ ಮತ್ತು ಮೂತ್ರವನ್ನು ಸಾವಯವ ಗೊಬ್ಬರ, ನೈಸರ್ಗಿಕ ಕೀಟನಾಶಕ ಮತ್ತು ಆಯುರ್ವೇದ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಕಚ್ಚಾ ವಸ್ತುವಾಗಿ ಮಾರಾಟ ಮಾಡಲಾಗುವುದು ಎಂದು ರಾಜ್ಯದ ಹಿರಿಯ ಸಚಿ ಭೂಪೇಂದ್ರ ಸಿಂಹ್ ಚುಡಾಸ್ಮಾ ತಿಳಿಸಿದ್ದಾರೆ.

ಪಶುಗಳನ್ನು ಬೀದಿಗೆ ಬಿಡುವವರ ಸಂಖ್ಯೆ ಅಧಿಕ:ರಾಜ್ಯದಲ್ಲಿ ಜಾನುವಾರುಗಳನ್ನು ತ್ಯಜಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಅವುಗಳಲ್ಲಿ ಹಾಲು ಕೊಡುವುದನ್ನು ಬಿಟ್ಟಿರುವ ಆಕಳುಗಳನ್ನು ಬೀದಿಗೆ ಬಿಡುವುದು ಜಾಸ್ತಿಯಾಗಿದೆ. ಒಣ ಮೇವಿನ ದರ 40 ಕೆಜಿಗೆ 200 ರೂಪಾಯಿಯಿಂದ 500 ರೂಪಾಯಿಗಳವರೆಗೆ ಏರಿಕೆಯಾಗಿದ್ದು ರೈತರು ಮೇವಿಗೆ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಜೀವದಯಾ ಸಂಸ್ಥೆಯ ಸದಸ್ಯರು ಹೇಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ