ಆ್ಯಪ್ನಗರ

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದಿದ್ದಕ್ಕೆ ಸಿಪಿಐ(ಎಂ) ನಾಯಕನ ಅಮಾನತು

ಮಾಜಿ ಶಾಸಕರಾಗಿರುವ ನರಸಯ್ಯ ಕಾರ್ಯಕ್ರಮವೊಂದರಲ್ಲಿ ಪ್ರಧಾನಿಯನ್ನು ಮತ್ತು ಫಡ್ನವೀಸ್ ಅವರನ್ನು ಹೊಗಳಿದ್ದಷ್ಟೇ ಸೋಲಾಪುರ ಜಿಲ್ಲೆಯ ವಸತಿ ಯೋಜನೆಗೆ ತ್ವರಿತವಾದ ಅನುಮತಿ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದರು. ಜತೆಗೆ ಇನ್ನೊಂದು ಅವಧಿಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ ಎಂದು ಹಾರೈಸಿದ್ದರು. ಈ ಹಿನ್ನಲೆಯಲ್ಲಿ ಅವರು 3 ತಿಂಗಳ ಅಮಾನತಿಗೆ ಒಳಪಟ್ಟಿದ್ದಾರೆ.

TIMESOFINDIA.COM 5 Mar 2019, 2:09 pm
ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಹೊಗಳಿದ್ದಕ್ಕೆ ಸಿಪಿಐ(ಎಂ) ನಾಯಕ ನರಸಯ್ಯ ಆದಂ ಅವರನ್ನು ಪಕ್ಷದ ಕೇಂದ್ರ ಸಮಿತಿಯಿಂದ ಉಚ್ಚಾಟಿಸಲಾಗಿದೆ.
Vijaya Karnataka Web CPI- Modi


ಮಾಜಿ ಶಾಸಕರಾಗಿರುವ ನರಸಯ್ಯ ಕಾರ್ಯಕ್ರಮವೊಂದರಲ್ಲಿ ಪ್ರಧಾನಿಯನ್ನು ಮತ್ತು ಫಡ್ನವೀಸ್ ಅವರನ್ನು ಹೊಗಳಿದ್ದಷ್ಟೇ ಸೋಲಾಪುರ ಜಿಲ್ಲೆಯ ವಸತಿ ಯೋಜನೆಗೆ ತ್ವರಿತವಾದ ಅನುಮತಿ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದರು. ಜತೆಗೆ ಇನ್ನೊಂದು ಅವಧಿಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿ ಎಂದು ಹಾರೈಸಿದ್ದರು. ಈ ಹಿನ್ನಲೆಯಲ್ಲಿ ಅವರು 3 ತಿಂಗಳ ಅಮಾನತಿಗೆ ಒಳಪಟ್ಟಿದ್ದಾರೆ.

ಈ ರೀತಿ ಹೊಗಳುವುದು ನಮ್ಮ ಪಕ್ಷದ ಸಿದ್ಧಾಂತಕ್ಕೆ ವಿರುದ್ಧ. ಹೀಗಾಗಿ ಅವರನ್ನು ಕೇಂದ್ರ ಸಮಿತಿಯಿಂದ ಮೂರು ತಿಂಗಳ ಅವಧಿಗೆ ಅಮಾನತು ಮಾಡಲಾಗಿದೆ, ಎಂದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.

ಕಮ್ಯುನಿಸ್ಟ್ ಪಕ್ಷದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸಮಿತಿಗಿರುತ್ತದೆ. ಆದಂ ಈ ಸಮಿತಿಯ ಭಾಗವಾಗಿದ್ದರು.

ಈ ಕುರಿತು ಪ್ರತಿಕ್ರಿಯಿಸಲು ಆದಂ ಸಂಪರ್ಕಕ್ಕೆ ಸಿಕ್ಕಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ