ಆ್ಯಪ್ನಗರ

ಸೇನಾಧಿಕಾರಿ ಪತ್ನಿಯ ಕೊಲೆ: ಮೇಜರ್ ಬಂಧನ

ಪಶ್ಚಿಮ ದಿಲ್ಲಿಯ ಸೇನಾ ಮೇಜರ್‌ ಒಬ್ಬರ ಪತ್ನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮೀರತ್‌ನ ಸೇನಾ ಮೇಜರ್‌ ಒಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

Vijaya Karnataka Web 24 Jun 2018, 4:00 pm
ಹೊಸದಿಲ್ಲಿ: ಪಶ್ಚಿಮ ದಿಲ್ಲಿಯ ಸೇನಾ ಮೇಜರ್‌ ಒಬ್ಬರ ಪತ್ನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮೀರತ್‌ನ ಸೇನಾ ಮೇಜರ್‌ ಒಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
Vijaya Karnataka Web Delhi Police


ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖೆಯ ಹೊಣೆ ಹೊತ್ತಿರುವ ಅಧಿಕಾರಿ ತಿಳಿಸಿದರು.

ದಿಲ್ಲಿಯ ಕಂಟೋನ್ಮೆಂಟ್‌ ಪ್ರದೇಶದ ಬ್ರಾರ್‌ ಚೌಕದಲ್ಲಿ ಮಹಿಳೆಯ ಮೃತದೇಹ ಗಂಟಲು ಸೀಳಿದ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿತ್ತು.

ಮಹಿಳೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ ಎಂದು ಮೊದಲು ನಂಬಲಾಗಿತ್ತು. ಆದರೆ ಪ್ರಾಥಮಿಕ ತನಿಖೆಯ ಬಳಿಕ ಅದು ಗಂಟಲು ಸೀಳಿ ನಡೆಸಿದ ಕೊಲೆ ಎಂಬುದು ಬೆಳಕಿಗೆ ಬಂತು. ಆರೋಪಿ ಆಕೆಯನ್ನು ಕೊಲೆ ಮಾಡಿದ ಬಳಿಕ ತನಿಖೆಯ ಹಾದಿ ತಪ್ಪಿಸಲು ಶವದ ಮೇಲೆ ಕಾರು ಓಡಿಸಿದ್ದ. ಇದರಿಂದ ಶವದ ಮುಖ ಗುರುತು ತಿಳಿಯದಂತಾಗಿತ್ತು ಎಂದು ಪೊಲೀಸರು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ