ಆ್ಯಪ್ನಗರ

ಕ್ರಿಮಿನಲ್‌ಗಳನ್ನು ಜೈಲಿಗಟ್ಟಿ, ಇಲ್ಲ ಎನ್‌ಕೌಂಟರ್‌ ಮಾಡಿ: ಯೋಗಿ

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ ಕಂಡಿದೆ

Vijaya Karnataka Web 19 Nov 2017, 12:01 pm
ಘಾಜಿಯಾಬಾದ್: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆ ಕಂಡಿದೆ ಎಂದು ಹೇಳಿರುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಪರಾಧ ಚಟುವಟಿಕೆಯಲ್ಲಿ ತೊಡಗಿದವರನ್ನು ಜೈಲಿಗಟ್ಟಿ, ಇಲ್ಲ ಎನ್‌ಕೌಂಟರ್‌ ಮಾಡಿ, ಎಂದು ಖಡಕ್ ಆದೇಶ ನೀಡಿದ್ದಾರೆ.
Vijaya Karnataka Web criminals will be jailed or killed in encounters cm yogi adityanath
ಕ್ರಿಮಿನಲ್‌ಗಳನ್ನು ಜೈಲಿಗಟ್ಟಿ, ಇಲ್ಲ ಎನ್‌ಕೌಂಟರ್‌ ಮಾಡಿ: ಯೋಗಿ


ಮುಂಬರುವ ಸ್ಥಳೀಯ ಚುನಾವಣೆ ಹಿನ್ನೆಲೆಯಲ್ಲಿ ಘಾಜಿಯಾಬಾದ್‌ನ ರಾಮ್‌ಲೀಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

'ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಕೈಗಾರಿಕೆಗಳು, ವ್ಯಾಪಾರಿಗಳು ಸೇರಿದಂತೆ ಯುವಕರೂ ರಾಜ್ಯವನ್ನು ತೊರೆಯಲು ನಿರ್ಧರಿಸಿದ್ದರು. ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಮೂಲಕ ಬಂಡವಾಳನ್ನೂ ಆಕರ್ಷಸುತ್ತಿದ್ದೇವೆ,' ಎಂದು ಯೋಗಿ ಹೇಳಿದ್ದಾರೆ.

'ಕ್ರಿಮಿನಲ್‌ ಚಟುವಟೆಕೆಯಲ್ಲಿ ತೊಡಗಿದವರನ್ನು ಸಂಪೂರ್ಣವಾಗಿ ಮಟ್ಟಹಾಕುತ್ತೇವೆ. ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವವರಿಗೆ ಇರುವುದು ಎರಡೇ ಸ್ಥಳ. ಒಂದು ಜೈಲು, ಇನ್ನೊಂದು ಪೊಲೀಸ್ ಎನ್‌ಕೌಂಟರ್ (ಯಮನಪಾದ) ಎಂದು ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ