ಆ್ಯಪ್ನಗರ

ಕೇರಳ ಸಿಎಂ ಭೇಟಿ ಮಾಡಿದ ಕ್ಯೂಬಾ ಕ್ರಾಂತಿಕಾರಿ ಚೆಗುವೆರಾ ಪುತ್ರಿ ಡಾ. ಅಲೈಡಾ ಗುವೇರಾ

ಕಣ್ಣೂರು ಮತ್ತು ಎರ್ನಾಕುಳಂನಲ್ಲಿ ನಡೆಯಲಿರುವ ಐಕಮತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಕೇರಳಕ್ಕೆ ಆಗಮಿಸಿದ ಕ್ಯೂಬಾದ ಕ್ರಾಂತಿಕಾರಿ ನಾಯಕ ಚೆ ಗುವೇರಾ ಅವರ ಪುತ್ರಿ ಡಾ. ಅಲೈಡಾ ಗುವೇರಾ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

Vijaya Karnataka Web 29 Jul 2019, 3:13 pm
ತಿರುವನಂತಪುರಂ: ಕ್ಯೂಬಾ ಕ್ರಾಂತಿಕಾರಿ ಚೆಗುವೆರಾ ಅವರ ಪುತ್ರಿ ಡಾ. ಅಲೈಡಾ ಗುವೇರಾ ಅವರೊಂದಿಗೆ ಮಾತುಕತೆ ನಡೆಸಿರುವ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್, ತನ್ನ ರೋಮಾಂಚನಕಾರಿಯಾದ ಭೇಟಿಯನ್ನು ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
Vijaya Karnataka Web Pinarayi Vijayan


ಕೇರಳ ಭೇಟಿಗಾಗಿ ಆಗಮಿಸಿದ ಡಾ. ಅಲೈಡಾ ಗುವೇರಾ ಅವರೊಂದಿಗೆ ಸೋಮವಾರ ಕ್ಲಿಪ್‌ಹೌಸ್‌ನಲ್ಲಿ ಸಿಎಂ ಪಿಣರಾಯಿ ವಿಜಯನ್ ಭೇಟಿ ಮಾಡಿದರು. ಇವರೊಂದಿಗೆ ಕಮ್ಯೂನಿಸ್ಟ್ ಪಾರ್ಟಿಯ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ ಸಹ ಉಪಸ್ಥಿತರಿದ್ದರು.

ಅರ್ಧಗಂಟೆ ಕಾಲ ನಡೆದ ಮಾತುಕತೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ತನ್ನ ಕ್ಯೂಬಾ ಐಕ್ಯಮತ್ಯ ಸಮ್ಮಳನ ಮತ್ತು ಕೇರಳದ ಕಮ್ಯೂನಿಸ್ಟ್ ಆಡಳಿತದ ಬಗ್ಗೆ ತಿಳಿಸಿದರು.

ಮಾತುಕತೆಯಲ್ಲಿ ಮಾಜಿ ಸಚಿವ ಎಂ.ಎಂ.ಬೇಬಿ ಕ್ಯೂಬಾ ಯಾತ್ರೆಯ ಕುರಿತು ನೆನಪಿಸಿಕೊಂಡರು. 1994ರಲ್ಲಿ ಕ್ಯೂಬಾದಲ್ಲಿ ನಡೆದ ಸಾಲಿಡಾರಿಟಿ ಸಮ್ಮೇಳನದಲ್ಲಿ ಭಾಗವಹಿದ ಕುರಿತು ತಿಳಿಸಿದರು. ಆ ಸಂದರ್ಭದಲ್ಲಿ ಡಾ. ಆಲೈಡಾ ಸಮ್ಮೇಳನದ ಬಗ್ಗೆ ವಿಷಯವನ್ನು ಹಂಚಿಕೊಂಡರು.

ಕೇರಳದ ತನ್ನ ಮೊದಲ ಪ್ರವಾಸವನ್ನು ನೆನಪಿಸಿಕೊಂಡರು. ಕೇರಳದ ಪ್ರಕೃತಿ ಸೌಂದರ್ಯವು ಆನಂದದಾಯಕವಾಗಿದೆ ಎಂಬುದು ಡಾ. ಆಲೈಡಾ ಅವರ ಅಭಿಪ್ರಾಯವಾಗಿದೆ. ಅದೇ ಸಂದರ್ಭದಲ್ಲಿ ಚೆಗುವೆರಾ ಅವರ ಕುಟುಂಬ ಸದಸ್ಯರನ್ನು ಸಹ ಡಾ. ಆಲೈಡಾ ಪರಿಚಯಿಸಿದ್ದರು. ಜೊತೆಯಾಗಿ ಉಪಾಹಾರವನ್ನು ಸೇವಿಸಿದ್ದಾರೆ.

ಕಣ್ಣೂರು ಹಾಗೂ ಎರ್ನಾಕುಳಂನಲ್ಲಿ ನಡೆಯುವ ಕ್ಯೂಬಾ ಐಕಮತ್ಯ ಸಮ್ಮೇಳನದಲ್ಲಿ ಅವರು ಭಾಗವಹಿಸುತ್ತಿದ್ದಾರೆ. ಕೇರಳದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಹಿಂತಿರುಗುವುದಕ್ಕೆ ಅವರು ಉತ್ಸುಕರಾಗಿದ್ದಾರೆ ಎಂಬುದಾಗಿ ಸಿಎಂ ಪಿಣರಾಯಿ ವಿಜಯನ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ