ಆ್ಯಪ್ನಗರ

ಇಂದು ರಾತ್ರಿ ಸುಂದರಬನಕ್ಕೆ ಅಪ್ಪಳಿಸಲಿದೆ 'ಬುಲ್‌ಬುಲ್‌' ಚಂಡಮಾರುತ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ 'ಬುಲ್‌ಬುಲ್‌ ' ಚಂಡಮಾರುತ ಶನಿವಾರ ರಾತ್ರಿ ವೇಳೆ ಸುಂದರ್‌ಬನ್‌ ಮುಖಜ ಭೂಮಿಗೆ (ಡೆಲ್ಟಾ) ಬಂದು ಅಪ್ಪಳಿಸಿದೆ. ಶನಿವಾರ ರಾತ್ರಿ 8 ಗಂಟೆಯಿಂದ 11 ಗಂಟೆವರೆಗೆ ಚಂಡಮಾರುತದ ಪ್ರಾಭಾವ ಉನ್ನತವಾಗಿರಲಿದೆ

Vijaya Karnataka Web 9 Nov 2019, 5:33 pm
ಕೋಲ್ಕತ : ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ 'ಬುಲ್‌ಬುಲ್‌ ' ಚಂಡಮಾರುತ ಶನಿವಾರ ರಾತ್ರಿ ವೇಳೆ ಸುಂದರ್‌ಬನ್‌ ಮುಖಜ ಭೂಮಿಗೆ (ಡೆಲ್ಟಾ) ಬಂದು ಅಪ್ಪಳಿಸಿದೆ. ಕೋಲ್ಕತದ ಪ್ರಾದೇಶಿಕ ಹವಾಮಾನ ಕೇಂದ್ರ ಹೀಗೆಂದು ಮಾಹಿತಿ ನೀಡಿದೆ. ಶನಿವಾರ ರಾತ್ರಿ 8 ಗಂಟೆಯಿಂದ 11 ಗಂಟೆವರೆಗೆ ಚಂಡಮಾರುತದ ಪ್ರಾಭಾವ ಉನ್ನತವಾಗಿರಲಿದೆ ಎಂದು ಹವಾಮಾನ ಕೇಂದ್ರದ ನಿರ್ದೇಶಕ ಜಿ.ಕೆ. ದಾಸ್‌ ತಿಳಿಸಿದ್ದಾರೆ.
Vijaya Karnataka Web bulbul cyclone
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಬುಲ್‌ಬುಲ್‌ ಚಂಡಮಾರುತ


ನಂತರದಲ್ಲಿ ಬುಲ್‌ಬುಲ್‌ ಚಂಡಮಾರುತ ದುರ್ಬಲಗೊಳ್ಳಲಿದ್ದು, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯನ್ನು ಹಾದು ಈಶಾನ್ಯ ರಾಜ್ಯಗಳತ್ತ ಪ್ರವೇಶಿಸಲಿದೆ. ಶನಿವಾರ ರಾತ್ರಿ ಚಂಡಮಾರುತವು ಸುಂದರ್‌ಬನ್‌ ಮುಖಜಭೂಮಿಯನ್ನು ಹಾದು ಹೋಗಲಿದ್ದು, ಗಂಟೆಗೆ 135 ಕಿಮೀ ಗರಿಷ್ಠ ವೇಗದಲ್ಲಿ ಬೀಸಲಿದೆ.

ಕರಾವಳಿಗೆ ’ಮಹಾ’ ಭೀತಿ ದೂರ: ಮಳೆ ಇಳಿಮುಖ, ಶಾಂತವಾದ ಗಾಳಿ

ಪಂಬನ್‌ ಸೇತುವೆ ಮೇಲೆ ಮುನ್ಸೂಚನಾ ಉಪಕರಣ:
ಚಂಡಮಾರುತದ ಚಲನೆಯ ಮೇಲೆ ನಿಗಾ ಇರಿಸಲೆಂದೇ ತಮಿಳುನಾಡಿನ ರಾಮೇಶ್ವರದ ಬಳಿ ಇರುವ ಪಂಬನ್‌ ಸೇತುವೆ ಮೇಲೆ ಬಿರುಗಾಳಿ ಕುರಿತು ಮುನ್ಸೂಚನೆ ನೀಡುವ ಉಪಕರಣವನ್ನು ಅಳವಡಿಸಲಾಗಿದೆ. ಇದು ಚಂಡಮಾರುತವು ಭಾರತದ ಪೂರ್ವ ತೀರಕ್ಕೆ ಪ್ರವೇಶಿಸುವ ಕುರಿತು ಮುನ್ಸೂಚನೆ ನೀಡಲಿದೆ.

ಕರಾವಳಿಗೆ ’ಮಹಾ’ ಭೀತಿ ದೂರ: ಮಳೆ ಇಳಿಮುಖ, ಶಾಂತವಾದ ಗಾಳಿ

ಒಡಿಶಾ ಮತ್ತು ಪಶ್ಚಿಮ ಬಂಗಾಳಕ್ಕೆ ಹೆಚ್ಚು ಮಳೆ:
ಭಾರತೀಯ ಹವಾಮಾನ ಇಲಾಖೆ ತಿಳಿಸಿರುವಂತೆ ಬುಲ್‌ಬುಲ್‌ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಗಳ ಕರಾವಳಿಯನ್ನು ಹಾದು ದಕ್ಷಿಣದ ಕಡೆಗೆ ಬರಲಿದೆ. ನ.10 ರಂದು ಬುಲ್‌ಬುಲ್‌ ತನ್ನ ವೇಗ ಹೆಚ್ಚಿಸಿಕೊಳ್ಳಲಿದ್ದು, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳು ಹೆಚ್ಚಿನ ಮಳೆ ಪಡೆಯಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ