ಹೊಸದಿಲ್ಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಶನಿವಾರ ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾನುವಾರ ಸಂಜೆ ವೇಳೆಗೆ ಚಂಡಮಾರುತದ ರೂಪ ಪಡೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಸೈಕ್ಲೋನ್ ಗುಲಾಬ್ ಹೆಸರಿನ ಚಂಡಮಾರುತವು ಆಂಧ್ರಪ್ರದೇಶದ ಉತ್ತರ ಭಾಗ ಹಾಗೂ ಅದರ ಪಕ್ಕದ ಒಡಿಶಾ ದಕ್ಷಿಣ ಭಾಗವನ್ನು ಮುಂದಿನ 12 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ ಎಂದು ಐಎಂಡಿ ತಿಳಿಸಿದೆ. ಈ ಭಾಗದಲ್ಲಿ ಗಾಳಿಯು ಪ್ರತಿ ಗಂಟೆಗೆ 70-80 ಕಿಮೀ ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ. ಕಳಿಂಗಪಟ್ಟಣಂ, ವಿಶಾಖಪಟ್ಟಣಂ ಮತ್ತು ಗೋಪಾಲಪುರಗಳಲ್ಲಿ ಚಂಡಮಾರುತ ಸಾಗುವಾಗ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಂಡಮಾರುತವು ಆರಂಭದಲ್ಲಿ ಪಶ್ಚಿಮ ಮತ್ತು ವಾಯವ್ಯ ದಿಕ್ಕಿನಲ್ಲಿ ಚಲಿಸಲಿದ್ದು, ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಹಾಗೂ ನೈಋತ್ಯ ದಿಕ್ಕಿನತ್ತ ಚಲಿಸಲಿದೆ. ಆಂಧ್ರಪ್ರದೇಶದ ಗೋಪಾಲಪುರದ ಪೂರ್ವ-ಈಶಾನ್ಯ ದಿಕ್ಕಿನಲ್ಲಿ 470 ಕಿಮೀ ಮತ್ತು ಕಳಿಂಗಪಟ್ಟಣಂನ ಪೂರ್ವದ 540 ಕಿಮೀ ದೂರದಲ್ಲಿ ಶನಿವಾರ ತೀವ್ರ ವಾಯುಭಾರ ಕುಸಿತದ ಒತ್ತಡ ನಿರ್ಮಾಣವಾಗಿದೆ ಎಂದು ಐಎಂಡಿ ಹೇಳಿದೆ.
ಈ ಸನ್ನಿವೇಶವು ಪೂರ್ವ ಮತ್ತು ಕೇಂದ್ರ ಭಾರತದ ಅನೇಕ ಭಾಗಗಳಲ್ಲಿ ವ್ಯಾಪಕ ಹಾಗೂ ಭಾರಿ ಮಳೆ ಸುರಿಸಲಿದೆ. ಮುಂದಿನ ಮೂರು ದಿನಗಳಲ್ಲಿ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಸಮುದ್ರದ ಪರಿಸ್ಥಿತಿ ಕಠಿಣವಾಗಿರಲಿದೆ. ಹೀಗಾಗಿ ಕಡಿಮೆ ಒತ್ತಡದ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸದಂತೆ ಕರಾವಳಿ ಕಾವಲು ಎಚ್ಚರಿಕೆ ನೀಡಿದೆ. ಸೆ. 25ರಿಂದ ಮುಂದಿನ ಆದೇಶದವರೆಗೂ ಆಳ ಸಮುದ್ರಕ್ಕೆ ತೆರಳದಂತೆ ಸೂಚಿಸಿಸಲಾಗಿದೆ.
ಸೆ. 26 ರಂದು ಆಂಧ್ರಪ್ರದೇಶ ಮತ್ತು ಮುಂದಿನ ಎರಡು ದಿನಗಳಲ್ಲಿ ಒಡಿಶಾ ಹಾಗೂ ಛತ್ತೀಸಗಡಗಳಲ್ಲಿನ ತಗ್ಗಿನ ಪ್ರದೇಶಗಳಲ್ಲಿ ವಿಪರೀತ ಮಳೆಯಿಂದ ರಸ್ತೆಗಳು ಜಲಾವೃತವಾಗಲಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವವಿದೆ.
ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಛತ್ತೀಸಗಡಗಳಲ್ಲಿ ವಿಪರೀತ ಮಳೆಯಾಗಲಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಂಗಾಳ ಕೊಲ್ಲಿಯಲ್ಲಿ ವರ್ಷವೊಂದರಲ್ಲಿ ಮೂರನೇ ಚಂಡಮಾರುತ ಉಂಟಾಗುತ್ತಿದೆ. ಇದಕ್ಕೂ ಮುನ್ನ ತೌಕ್ತೆ ಮತ್ತು ಯಾಸ್ ಚಂಡಮಾರುತಗಳು ಉಂಟಾಗಿದ್ದವು.
ಚಂಡಮಾರುತವು ಆರಂಭದಲ್ಲಿ ಪಶ್ಚಿಮ ಮತ್ತು ವಾಯವ್ಯ ದಿಕ್ಕಿನಲ್ಲಿ ಚಲಿಸಲಿದ್ದು, ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಹಾಗೂ ನೈಋತ್ಯ ದಿಕ್ಕಿನತ್ತ ಚಲಿಸಲಿದೆ. ಆಂಧ್ರಪ್ರದೇಶದ ಗೋಪಾಲಪುರದ ಪೂರ್ವ-ಈಶಾನ್ಯ ದಿಕ್ಕಿನಲ್ಲಿ 470 ಕಿಮೀ ಮತ್ತು ಕಳಿಂಗಪಟ್ಟಣಂನ ಪೂರ್ವದ 540 ಕಿಮೀ ದೂರದಲ್ಲಿ ಶನಿವಾರ ತೀವ್ರ ವಾಯುಭಾರ ಕುಸಿತದ ಒತ್ತಡ ನಿರ್ಮಾಣವಾಗಿದೆ ಎಂದು ಐಎಂಡಿ ಹೇಳಿದೆ.
ಈ ಸನ್ನಿವೇಶವು ಪೂರ್ವ ಮತ್ತು ಕೇಂದ್ರ ಭಾರತದ ಅನೇಕ ಭಾಗಗಳಲ್ಲಿ ವ್ಯಾಪಕ ಹಾಗೂ ಭಾರಿ ಮಳೆ ಸುರಿಸಲಿದೆ. ಮುಂದಿನ ಮೂರು ದಿನಗಳಲ್ಲಿ ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗಗಳಲ್ಲಿ ಸಮುದ್ರದ ಪರಿಸ್ಥಿತಿ ಕಠಿಣವಾಗಿರಲಿದೆ. ಹೀಗಾಗಿ ಕಡಿಮೆ ಒತ್ತಡದ ಪ್ರದೇಶಗಳಲ್ಲಿ ಮೀನುಗಾರಿಕೆ ನಡೆಸದಂತೆ ಕರಾವಳಿ ಕಾವಲು ಎಚ್ಚರಿಕೆ ನೀಡಿದೆ. ಸೆ. 25ರಿಂದ ಮುಂದಿನ ಆದೇಶದವರೆಗೂ ಆಳ ಸಮುದ್ರಕ್ಕೆ ತೆರಳದಂತೆ ಸೂಚಿಸಿಸಲಾಗಿದೆ.
ಸೆ. 26 ರಂದು ಆಂಧ್ರಪ್ರದೇಶ ಮತ್ತು ಮುಂದಿನ ಎರಡು ದಿನಗಳಲ್ಲಿ ಒಡಿಶಾ ಹಾಗೂ ಛತ್ತೀಸಗಡಗಳಲ್ಲಿನ ತಗ್ಗಿನ ಪ್ರದೇಶಗಳಲ್ಲಿ ವಿಪರೀತ ಮಳೆಯಿಂದ ರಸ್ತೆಗಳು ಜಲಾವೃತವಾಗಲಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗುವ ಸಂಭವವಿದೆ.
ಆಂಧ್ರಪ್ರದೇಶ, ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಛತ್ತೀಸಗಡಗಳಲ್ಲಿ ವಿಪರೀತ ಮಳೆಯಾಗಲಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಂಗಾಳ ಕೊಲ್ಲಿಯಲ್ಲಿ ವರ್ಷವೊಂದರಲ್ಲಿ ಮೂರನೇ ಚಂಡಮಾರುತ ಉಂಟಾಗುತ್ತಿದೆ. ಇದಕ್ಕೂ ಮುನ್ನ ತೌಕ್ತೆ ಮತ್ತು ಯಾಸ್ ಚಂಡಮಾರುತಗಳು ಉಂಟಾಗಿದ್ದವು.