ಆ್ಯಪ್ನಗರ

ಶರವೇಗದಲ್ಲಿ ಅಪ್ಪಳಿಸಲಿದೆ ‘ವಾಯು’: ಎದುರಿಸಲು ಕರಾವಳಿ ಸಜ್ಜು

ಗಂಟೆಗೆ 155-165 ಕಿ.ಮೀ. ವೇಗದಲ್ಲಿ ಪೋರ್‌ಬಂದರ್‌ ಮತ್ತು ಮಹುವಾ ನಡುವಿನ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸಲಿದೆ. ಬಳಿಕ 24 ಗಂಟೆಗಳ ಕಾಲ ಚಂಡಮಾರುತದ ಪ್ರಭಾವ ಮುಂದುವರಿಯಲಿದೆ. ಸೌರಾಷ್ಟ್ರ ಮತ್ತು ಕಛ್‌ ಪ್ರದೇಶಗಳಲ್ಲಿ ಅತಿ ಹೆಚ್ಚು ತೀವ್ರತೆ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

Agencies 13 Jun 2019, 6:58 am
ಅಹಮದಾಬಾದ್‌: ಶರವೇಗದಲ್ಲಿ ಧಾವಿಸುತ್ತಿರುವ 'ವಾಯು' ಚಂಡಮಾರುತ ಗುರುವಾರ ಮಧ್ಯಾಹ್ನ 1 ಗಂಟೆ ವೇಳೆಗೆ ಗುಜರಾತ್‌ ತೀರಕ್ಕೆ ಅಪ್ಪಳಿಸಲಿದ್ದು, ಅಪಾಯ ಎದುರಿಸಲು ಸಮರೋಪಾದಿಯಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ.
Vijaya Karnataka Web cyclone vayu changes location to make landfall on june 13 noon
ಶರವೇಗದಲ್ಲಿ ಅಪ್ಪಳಿಸಲಿದೆ ‘ವಾಯು’: ಎದುರಿಸಲು ಕರಾವಳಿ ಸಜ್ಜು


ಗಂಟೆಗೆ 155-165 ಕಿ.ಮೀ. ವೇಗದಲ್ಲಿ ಪೋರ್‌ಬಂದರ್‌ ಮತ್ತು ಮಹುವಾ ನಡುವಿನ ಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸಲಿದೆ. ಬಳಿಕ 24 ಗಂಟೆಗಳ ಕಾಲ ಚಂಡಮಾರುತದ ಪ್ರಭಾವ ಮುಂದುವರಿಯಲಿದೆ. ಸೌರಾಷ್ಟ್ರ ಮತ್ತು ಕಛ್‌ ಪ್ರದೇಶಗಳಲ್ಲಿ ಅತಿ ಹೆಚ್ಚು ತೀವ್ರತೆ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಚಂಡಮಾರುತದ ಪ್ರಭಾವದಿಂದ ಗುಜರಾತ್‌ ಹಾಗೂ ಮುಂಬಯಿ ಸೇರಿದಂತೆ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಗುರುವಾರದಿಂದಲೇ ಭಾರಿ ಬಿರುಗಾಳಿ ಸಮೇತ ಮಳೆ ಆರಂಭವಾಗಿದೆ.

ಈ ಮಧ್ಯೆ, ಚಂಡಮಾರುತದ ಚಲನವಲನದ ಮೇಲೆ ಕೇಂದ್ರ ಸರಕಾರ ನಿಗಾ ಇರಿಸಿದ್ದು, ಗುಜರಾತ್‌ ಹಾಗೂ ಇತರೆ ರಾಜ್ಯಗಳ ನೆರವಿಗೆ ಧಾವಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ. ಈ ಬಗ್ಗೆ ಮೋದಿ ಸರಣಿ ಟ್ವೀಟ್‌ ಮಾಡಿದ್ದಾರೆ.

ಮುಂಬಯಿನಲ್ಲಿ ವ್ಯಕ್ತಿಬಲಿ: ಮುಂಬಯಿನ ಚರ್ಚ್‌ಗೇಟ್‌ ನಿಲ್ದಾಣದಲ್ಲಿ ಭಾರಿ ಬಿರುಗಾಳಿಯಿಂದ ಉಂಟಾದ ಅನಾಹುತಕ್ಕೆ ಒಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಅಲ್ಯೂಮಿನಿಯಂ ಶೀಟ್‌ ಹಾರಿ ವ್ಯಕ್ತಿಯ ಮೇಲೆ ಬಿದ್ದಿದೆ. ಘಟನೆಯಲ್ಲಿ ಇನ್ನೂ ಇಬ್ಬರು ಗಾಯಗೊಂಡಿದ್ದಾರೆ.

ಸಮರೋಪಾದಿ ಸಿದ್ಧತೆ
* ಗುಜರಾತ್‌ನ 10 ಜಿಲ್ಲೆಗಳಲ್ಲಿ ತಗ್ಗು ಪ್ರದೇಶಗಳಿಂದ 3 ಲಕ್ಷ ಜನರ ಸ್ಥಳಾಂತರ
* ತೀರ ಪ್ರದೇಶದ 500ಕ್ಕೂ ಹೆಚ್ಚು ಹಳ್ಳಿಗಳಲ್ಲಿದ್ದ ಜನರ ತೆರವು
* 50 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಸಿದ್ಧ
* ಇನ್ನೂ 3 ಲಕ್ಷ ಮಂದಿಯನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲು ಸಿದ್ಧತೆ
* 700ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳ ಸ್ಥಾಪನೆ
* 300 ನೌಕಾ ಕಮಾಂಡೋಗಳ ನಿಯೋಜನೆ
* ವಾಯುಪಡೆಯ ವಿಮಾನ, ಹೆಲಿಕಾಪ್ಟರ್‌ಗಳ ನೆರವು
* ಎಲ್ಲಾ ಬಂದರು ಹಾಗೂ ವಿಮಾನ ನಿಲ್ದಾಣಗಳು ಬಂದ್‌
* ರೈಲು, ಪ್ರವಾಸಿ ಬಸ್‌ಗಳ ಸೇವೆಯೂ ಸಂಪೂರ್ಣ ಸ್ಥಗಿತ

* ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ