ಆ್ಯಪ್ನಗರ

ದಾವೂದ್‌ ಸಹಚರ ಫಾರೂಕ್‌ ಟಕ್ಲಾ ಭಾರತಕ್ಕೆ ಗಡೀಪಾರು

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪ್ರಮುಖ ಬಂಟನೊಬ್ಬನನ್ನು ದುಬೈನಿಂದ ಗಡೀಪಾರು ಮಾಡಿ ಮುಂಬಯಿಗೆ ಕರೆತರಲಾಗುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.

Vijaya Karnataka Web 9 Mar 2018, 1:10 pm
ಹೊಸದಿಲ್ಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪ್ರಮುಖ ಬಂಟನೊಬ್ಬನನ್ನು ದುಬೈನಿಂದ ಗಡೀಪಾರು ಮಾಡಿ ಮುಂಬಯಿಗೆ ಕರೆತರಲಾಗುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.
Vijaya Karnataka Web dawood ibrahims aide farooq takla deported from dubai to be produced before tada court
ದಾವೂದ್‌ ಸಹಚರ ಫಾರೂಕ್‌ ಟಕ್ಲಾ ಭಾರತಕ್ಕೆ ಗಡೀಪಾರು


1993ರ ಮುಂಬಯಿ ಸ್ಫೋಟಗಳ ಬಳಿಕ ಭಾರತ ದಿಂದ ಪಲಾಯನ ಮಾಡಿದ್ದ ಫಾರೂಕ್ ಟಕ್ಲಾ ವಿರುದ್ಧ 1995ರಲ್ಲಿ ರೆಡ್‌ ಕಾರ್ನರ್‌ ನೋಟೀಸ್‌ ಜಾರಿ ಮಾಡಲಾಗಿತ್ತು. ಈತನನ್ನು ಮುಂಬಯಿಯ ಟಾಡಾ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಮಾರ್ಚ್ 19ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಟಕ್ಲಾ ಬಂಧನದಿಂದ ದಾವೂದ್‌ ಗ್ಯಾಂಗ್‌ಗೆ ಬಲವಾದ ಹೊಡೆತ ಬಿದ್ದಿದೆ ಎಂದು ಹಿರಿಯ ವಕೀಲ ಉಜ್ವಲ್ ನಿಕಮ್ ಬಣ್ಣಿಸಿದ್ದಾರೆ. 'ಇದು ಬಹುದೊಡ್ಡ ಯಶಸ್ಸು. ಆತ 1992ರ ಮುಂಬಯಿ ಸ್ಫೋಟಗಳಲ್ಲಿ ಭಾಗಿಯಾಗಿದ್ದ. ತನಿಖೆಯಲ್ಲಿ ಕಳಚಿದ ಕೊಂಡಿಗಳು ಈತನ ಬಂಧನದಿಂದ ಜೋಡಣೆಯಾಗಿವೆ. ಇದು ಡಿ-ಗ್ಯಾಂಗ್‌ಗೆ ಭಾರೀ ದೊಡ್ಡ ಹೊಡೆತ' ಎಂದು ನಿಕಮ್ ಹೇಳಿದ್ದಾರೆ.

ಸ್ವತಃ ದಾವೂದ್‌ ಭಾರತಕ್ಕೆ ವಾಪಸಾಗಿ ಕೆಲವು ಷರತ್ತುಗಳೊಂದಿಗೆ ಶರಣಾಗಲು ಸಿದ್ಧನಿದ್ದಾನೆ; ಆದರೆ ಭಾರತ ಸರಕಾರ ಈ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕ್ರಿಮಿನಲ್‌ ಲಾಯರ್‌ ಶ್ಯಾಮ್ ಕೇಸ್ವಾನಿ ಈ ಮೊದಲು ತಿಳಿಸಿದ್ದರು.

ತನ್ನನ್ನು ಗರಿಷ್ಠ ಭದ್ರತೆಯ ಅರ್ಥರ್‌ ರೋಡ್‌ ಸೆಂಟ್ರಲ್‌ ಜೈಲಿನಲ್ಲಿಡಬೇಕು ಎಂಬುದು ದಾವೂದ್‌ನ ಷರತ್ತುಗಳಲ್ಲಿ ಒಂದಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ