ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ದೇಶದಿಂದ ಪಲಾನಗೈದು ದಶಕಗಳೇ ಉರುಳಿದ್ದರೂ ಆತನ ಅಕ್ರಮ ಜಾಲದ ಬೇರುಗಳು ಇನ್ನೂ ಉಳಿದುಕೊಂಡಿದ್ದು, ಅವನ್ನು ತುಂಡರಿಸುವ ಕೆಲಸವನ್ನು ಪೊಲೀಸರು ಮುಂದುವರಿಸಿದ್ದಾರೆ. ಹಫ್ತಾ ವಸೂಲಿ ಆರೋಪದಡಿ ದಾವೂದ್ನ ಸೋದರ ಸಂಬಂಧಿ ರಿಜ್ವಾನ್ ಕಸ್ಕರ್ನನ್ನು ಹೆಡೆಮುರಿ ಕಟ್ಟಲಾಗಿದೆ. ಬಂಧಿತ ರಿಜ್ವಾನ್, ದಾವೂದ್ನ ಸೋದರ ಇಕ್ಬಾಲ್ ಕಸ್ಕರ್ನ ಪುತ್ರ. ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತ ಬುಧವಾರ ರಾತ್ರಿ ಮುಂಬಯಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ದೇಶದಿಂದ ಪಲಾಯನ ಮಾಡುವ ಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನ ಅಪ್ಪ ಇಕ್ಬಾಲ್ ಕೂಡ ಇಂತಹದ್ದೇ ವಸೂಲಿ ದಂಧೆಯಲ್ಲಿ ತೊಡಗಿ ಠಾಣೆ ಪೊಲೀಸರ ಅತಿಥಿಯಾಗಿ ಕಾರಾಗೃಹ ಸೇರಿದ್ದಾನೆ. ಎರಡು ದಿನಗಳ ಹಿಂದೆ, ದಾವೂದ್ ಗ್ಯಾಂಗಿನ ಸದಸ್ಯ ಫಾಹಿಮ್ ಮಚ್ಮಚ್ನ ಸಹಚರ ಅಹ್ಮದ್ ರಾಜಾ ವಧಾರಿಯಾನನ್ನು ಹಫ್ತಾ ವಸೂಲಿ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದರು. ವಿಚಾರಣೆ ವೇಳೆ ಈತ ರಿಜ್ವಾನ್ ಕಸ್ಕರ್ನ ಹೆಸರು ಬಾಯಿಬಿಟ್ಟಿದ್ದು, ಈ ಸರಣಿ ಬೆಳವಣಿಗೆಗಳಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾವೂದ್ ಸೋದರ ಸಂಬಂಧಿ ಅರೆಸ್ಟ್
ಹಫ್ತಾ ವಸೂಲಿ ಆರೋಪದಡಿ ದಾವೂದ್ನ ಸೋದರ ಸಂಬಂಧಿ ರಿಜ್ವಾನ್ ಕಸ್ಕರ್ನನ್ನು ಹೆಡೆಮುರಿ ಕಟ್ಟಲಾಗಿದೆ. ಬಂಧಿತ ರಿಜ್ವಾನ್, ದಾವೂದ್ನ ಸೋದರ ಇಕ್ಬಾಲ್ ಕಸ್ಕರ್ನ ಪುತ್ರ. ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತ ಬುಧವಾರ ರಾತ್ರಿ ಮುಂಬಯಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ದೇಶದಿಂದ ಪಲಾಯನ ಮಾಡುವ ಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
PTI 19 Jul 2019, 5:00 am