ಆ್ಯಪ್ನಗರ

ಪುದುಚೇರಿ ಭೇಟಿ ರದ್ದು: ರಾಹುಲ್‌ಗೆ ಜೀವ ಬೆದರಿಕೆ ಜ್ವರವೇ ?

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪುದುಚೇರಿಗೆ ಮಂಗಳವಾರ ಭೇಟಿ ನೀಡಬೇಕಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದಾರೆ. ಅವರಿಗೆ ಜೀವಬೆದರಿಕೆ ಬಂದ ಮರುದಿನವೇ ತೀವ್ರ ಜ್ವರದಿಂದ ಭೇಟಿ ರದ್ದುಗೊಂಡಿದೆ.

ಏಜೆನ್ಸೀಸ್ 10 May 2016, 1:07 pm
ಹೊಸದಿಲ್ಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪುದುಚೇರಿಗೆ ಮಂಗಳವಾರ ಭೇಟಿ ನೀಡಬೇಕಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ರದ್ದುಗೊಳಿಸಿದ್ದಾರೆ. ಅವರಿಗೆ ಜೀವಬೆದರಿಕೆ ಬಂದ ಮರುದಿನವೇ ತೀವ್ರ ಜ್ವರದಿಂದ ಭೇಟಿ ರದ್ದುಗೊಂಡಿದೆ.
Vijaya Karnataka Web day after death threat rahul cancels visit to puducherry citing high fever
ಪುದುಚೇರಿ ಭೇಟಿ ರದ್ದು: ರಾಹುಲ್‌ಗೆ ಜೀವ ಬೆದರಿಕೆ ಜ್ವರವೇ ?


ತೀವ್ರ ಜ್ವರದ ಕಾರಣ ಎರಡು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ತಮಿಳುನಾಡು ಮತ್ತು ಕೇರಳ ಭೇಟಿಯನ್ನು ರದ್ದುಗೊಳಿಸಿದ್ದು, ಕ್ಷಮಿಸಬೇಕು. ಮತ್ತೆ ಭೇಟಿಯ ವೇಳೆ ತಿಳಿಸುವುದಾಗಿ ರಾಹುಲ್ ಟ್ವೀಟ್ ಮಾಡಿದ್ದಾರೆ.

ಈ ರಾಜ್ಯಗಳಲ್ಲಿ 14ಕ್ಕೆ ಚುನಾವಣೆ ಪ್ರಚಾರ ಕೊನೆಗೊಳ್ಳಲಿದೆ. ರಾಹುಲ್ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ನೀಡುವಂತೆ ಪಕ್ಷವು ಗೃಹ ಸಚಿವ ರಾಜ್‌ನಾಥ್‌ ಸಿಂಗ್ ಅವರಿಗೆ ಮನವಿ ಮಾಡಿತ್ತು. ಈ ಜೀವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಗೃಹ ಸಚಿವರು ಗುಪ್ತದಳ ಮತ್ತು ಭದ್ರತಾ ಸಂಸ್ಥೆಗೆ ಸೂಚಿಸಿದ್ದಾರೆ. ರಾಹುಲ್ ಅವರಿಗೆ ವಿಶೇಷ ರಕ್ಷಣಾ ಪಡೆಯ ಹೆಚ್ಚಿನ ಕಮಾಂಡೊ ಭದ್ರತೆ ನೀಡಲು ಗೃಹ ಸಚಿವರು ನಿರ್ಧರಿಸಿದ್ದರು.

ಪುದುಚೇರಿ ಪೊಲೀಸರು ಕೂಡ ರಾಹುಲ್ ಅವರ ಭದ್ರತೆಗೆ ವಿಶೇಷ ಸಿದ್ಧತೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ